ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ

ಬಿಗ್​ ಬಾಸ್​ ಮನೆಯಲ್ಲಿ ಟಫ್​ ಸ್ಪರ್ಧಿ ಎನಿಸಿಕೊಂಡಿರುವ ನಟಿ ಸಂಗೀತಾ ಶೃಂಗೇರಿ ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಹುನ್ನಾರ ಮಾಡಲಾಗಿದೆ. ಅದು ಸಂಗೀತಾ ಗಮನಕ್ಕೂ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಕೆಲವರನ್ನು ಪ್ರಶ್ನೆ ಮಾಡಿದ್ದಾರೆ.

ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ
|

Updated on: Nov 16, 2023 | 10:45 AM

ಪ್ರತಿ ದಿನವೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೊಸ ಹೊಸ ಟ್ವಿಸ್ಟ್​ ಸಿಗುತ್ತಿದೆ. ಇಷ್ಟು ದಿನಗಳ ಕಾಲ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಮಧ್ಯೆ ಒಂದು ಒಡನಾಟ ಬೆಳೆದಿತ್ತು. ಇಬ್ಬರ ನಡುವೆ ನಂಬಿಕೆ ಇತ್ತು. ಆದರೆ ಈಗ ಆ ನಂಬಿಕೆಗೆ ಪೆಟ್ಟು ಬಿದ್ದಂತಿದೆ. ನಾಮಿನೇಷನ್​ ವಿಚಾರದಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಅದು ಸಂಗೀತಾ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್​ ಮಹೇಶ್​ (Karthik Mahesh), ವರ್ತೂರು ಸಂತೋಷ್​, ತನಿಷಾ ಕುಪ್ಪಂಡ ಅವರ ಬಳಿ ಇದನ್ನು ಸಂಗೀತಾ ಚರ್ಚಿಸಿದ್ದಾರೆ. ‘ಇಷ್ಟು ದಿನ ನಮ್ಮಲ್ಲಿ ಒಂದು ಫ್ರೆಂಡ್​ಶಿಪ್​, ನಂಬಿಕೆ ಇತ್ತು. ಅದು ಈಗ ಬ್ರೇಕ್​ ಆಗಿದೆ’ ಎಂದು ಸಂಗೀತಾ ಮುಲಾಜಿಲ್ಲದೇ ಹೇಳಿದ್ದಾರೆ. ನ.16ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us