ಹಾಸನ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿಕೆಯ (pendrive distribution) ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು (SIT sleuths) ಡಿ ದೇವರಾಜೇಗೌಡರ (D Devarajegowda) ವಿಚಾರಣೆ ಮುಗಿದಿದೆ ಅಂತ ಹೇಳಿದ ಬಳಿಕ ಹಾಸನದ ನ್ಯಾಯಾಲಯವೊಂದು ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. ಅವರ ಪರ ವಕೀಲರು ನಗರದ ಕೋರ್ಟ್ ಆವರಣದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ್ದು, ತನ್ನ ವಿಚಾರಣೆ ಮುಗಿದಿದೆ ಎಂದು ಎಸ್ಐಟಿ ನ್ಯಾಯಲಯಕ್ಕೆ ಹೇಳಿದ್ದು ದೇವರಾಜೇಗೌಡರನ್ನು ಮೇ 24 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಪೆನ್ ಡ್ರೈವ್ ಹಂಚಿಕೆ ಸಂಬಂಧಿಸಿದಂತೆ ದೇವರಾಜೇಗೌಡರ ವಿಚಾರಣೆ ಮುಗಿದಿದೆ. ಆದರೆ ಮಹಿಳೆಯೊಬ್ಬರ ಮೇಲೆ ನಡೆಸಿರುವ ಆರೋಪದಲ್ಲಿ ಅವರ ವಿಚಾರಣೆ ನಡೆಯಬೇಕಿದೆ. ಈ ಪ್ರಕರಣದಲ್ಲಿ ಅವರ ವಕೀಲರು ಜಾಮೀನಿಗಾಗಿ ಮನವಿ ಸಲ್ಲಿಸಿದ್ದು ಮೇ 22 ರಂದು ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ದೆವರಾಜೇಗೌಡರ ವಕೀಲ ಹೇಳಿದರು. ಏತನ್ಮಧ್ಯೆ, ಜರ್ಮನಿಯಿಂದ ಲಂಡನ್ ಗೆ ಹಾರಿರುವ ಪ್ರಜ್ವಲ್ ರೇವಣ್ಣ ಭಾರತಕ್ಕೆ ಯಾವಾಗ ಮರಳಲಿದ್ದಾರೆ ಅನ್ನೋದು ಇನ್ನೂ ಖಚಿತ ಪಟ್ಟಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದ ದೇವರಾಜೇಗೌಡ ಈಗ್ಯಾಕೆ ಹತ್ತಿರವಾಗಿದ್ದಾರೆ? ಚಲುವರಾಯಸ್ವಾಮಿ