Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯಲ್ಲಿ ಮತ್ತೆ ನೆಲೆ ನಿಂತ ಶ್ರೀರಾಮಚಂದ್ರ! ರಾತ್ರಿ ವೇಳೆ ಹೇಗೆ ಕಾಣುತ್ತೆ ನೋಡಿ

ಅಯೋಧ್ಯೆಯಲ್ಲಿ ಮತ್ತೆ ನೆಲೆ ನಿಂತ ಶ್ರೀರಾಮಚಂದ್ರ! ರಾತ್ರಿ ವೇಳೆ ಹೇಗೆ ಕಾಣುತ್ತೆ ನೋಡಿ

ಗಂಗಾಧರ​ ಬ. ಸಾಬೋಜಿ
|

Updated on: Jan 22, 2024 | 11:12 PM

ಭಾರತಕ್ಕೆ ಭಾರತವೇ ನಿರೀಕ್ಷಿಸುತ್ತಿದ್ದ, ಅಸಂಖ್ಯ ರಾಮ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಸಂಪನ್ನಗೊಂಡಿದೆ. ರಾಮ ಮಂದಿರವನ್ನ ಸ್ವರ್ಗದಂತೆ ಅಲಂಕಾರ ಮಾಡಲಾಗಿತ್ತು. ಇನ್ನು ರಾತ್ರಿ ವೇಳೆ ರಾಮಲಲ್ಲಾ ಮೂರ್ತಿ ಹೇಗೆ ಕಾಣುತ್ತೆ ಎಂದು ವಿಡಿಯೋ ನೋಡಿ. 

ಒಂದಲ್ಲ ಎರಡಲ್ಲ ಬರೋಬ್ಬರಿ 500 ವರ್ಷಗಳ ಕಾಯುವಿಕೆ ಕೊನೆಯಾಗಿದೆ. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ಈಡೇರಿದೆ. ರಾಮ ಜನ್ಮಭೂಮಿ ಅಯೋಧ್ಯೆ (Ayodhya) ಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಅದೇ ರಾಮ ಮಂದಿರದಲ್ಲಿ ಇಂದು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಪ್ರಧಾನಿ ಮೋದಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನ ನೆರೆವೇರಿಸಿದ್ದಾರೆ. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮ ಮಂದಿರವನ್ನ ಸ್ವರ್ಗದಂತೆ ಅಲಂಕಾರ ಮಾಡಲಾಗಿತ್ತು. ವಿವಿಧ ಹೂವುಗಳು ಮತ್ತು ವಿದ್ಯುತ್​ ದೀಪಗಳಿಂದ ಅಯೋಧ್ಯೆ ರಾಮಮಂದಿರವನ್ನು ಅಲಂಕರಿಸಲಾಗಿದೆ. ಇನ್ನು ರಾತ್ರಿ ವೇಳೆ ರಾಮಲಲ್ಲಾ ಮೂರ್ತಿ ಹೇಗೆ ಕಾಣುತ್ತೆ ಎಂದು ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.