Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಂಟದ ನೋವು ಕಡಿಮೆಯಾದರೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗುವೆ: ಹೆಚ್ ಡಿ ರೇವಣ್ಣ

ಸೊಂಟದ ನೋವು ಕಡಿಮೆಯಾದರೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗುವೆ: ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 25, 2024 | 7:16 PM

ವಕೀಲ ಡಿ ದೇವರಾಜೇಗೌಡ ಹೆಸರು ಪ್ರಸ್ತಾಪವಾದಾಗ ಹೆಚ್ ಡಿ ರೇವಣ್ಣ ಪಲಾಯನವಾದಕ್ಕೆ ಶರಣಾದರು. ಅವರು ದೊಡ್ಡ ಮನುಷ್ಯ, ಅವರ ಬಗ್ಗೆ ಮಾತಾಡುವಷ್ಟು ಶಕ್ತಿ ತನಗಿಲ್ಲ, ತಾನೊಬ್ಬ ಬಡರೈತನ ಮಗ, ದೇವರ ಮತ್ತು ಜನರ ಆಶೀರ್ವಾದದಿಂದ ಬದುಕಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ರೇವಣ್ಣ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದವರು ಷಡ್ಯಂತ್ರ ನಡೆಸುವ ಪ್ರಯತ್ನ ಮಾಡಿದರೆ ಅದು ನಡೆಯಲ್ಲ ಎಂದು ಹೇಳಿದರು. ಕಳೆದ ಶುಕ್ರವಾರ ಕೆಳಗೆ ಬಿದ್ದು ಸೊಂಟದಲ್ಲಿ ನೋವಿರುವ ಕಾರಣ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಾಗಿ ಹೋಗುವುದು ಸಾಧ್ಯವಾಗಲ್ಲ, ನೋವು ತಹಬದಿಗೆ ಬಂದರೆ ಹೋಗೋದಾಗಿ ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚನ್ನಪಟ್ಟಣ ಉಪಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ