AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಕ್ ಅರಸ್​ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್

ದೀಪಕ್ ಅರಸ್​ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್

ಮದನ್​ ಕುಮಾರ್​
|

Updated on: Oct 18, 2024 | 4:54 PM

ಅಮೂಲ್ಯ ಅವರ ಸಹೋದರ ದೀಪಕ್ ಅರಸ್​ ನಿಧನರಾಗಿದ್ದು ಚಿತ್ರರಂಗದಲ್ಲಿ ಶೋಕ ಆವರಿಸಿದೆ. ನಿರ್ದೇಶಕ ತರುಣ್ ಸುಧೀರ್ ಅವರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಅವರ ಜೊತೆ ಪತ್ನಿ ಸೋನಲಾ ಮಾಂತೆರೋ ಕೂಡ ಆಗಮಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್ ಸುಧೀರ್​ ಅವರು ದೀಪಕ್ ಜೊತೆಗಿನ ಒಡನಾಟ ನೆನಪಿಸಿಕೊಂಡರು.

‘ಗಜಕೇಸರಿ ಸಿನಿಮಾ ಮಾಡುವುದಕ್ಕಿಂತ ಮೊದಲಿನಿಂದಲೂ ನಾವು ಪರಿಚಿತರು. ಅವರು ನಿರ್ದೇಶನ ಮಾಡುವಾಗಲೆಲ್ಲ ನನ್ನ ಜೊತೆ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರು ‘ಶುಗರ್​ ಫ್ಯಾಕ್ಟರಿ’ ಸಿನಿಮಾ ಸಿದ್ಧವಾದ ಮೇಲೆ ನನಗೆ ತೋರಿಸಿ, ಏನಾದರೂ ತಿದ್ದುಪಡಿ ಇದ್ದರೇ ತಿಳಿಸಿ ಅಂತ ಸಲಹೆ ಕೇಳಿದ್ದರು. ಅವರ ಇಡೀ ಕುಟುಂಬದವರು ನಮಗೆ ಆಪ್ತರಾಗಿದ್ದರು. ಅನಾರೋಗ್ಯದಲ್ಲೂ ಅವರು ನಮ್ಮ ಮದುವೆಗೆ ಬಂದು ಹರಸಿದ್ದರು. ಗುಣಮುಖರಾಗುತ್ತಾರೆ ಎಂಬ ನಂಬಿಕೆಯಲ್ಲಿ ನಾವು ಇದ್ದೆವು. ಆದರೆ ನಿನ್ನೆ ನಿಧನರಾಗಿದ್ದು ನಮಗೆ ಶಾಕಿಂಗ್’ ಎಂದು ತರುಣ್ ಸುಧೀರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.