Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ದೂರು ಬಳಿ ಹೊಸದಾಗಿ ಕಟ್ಟಿಸಿರುವ ದೇವಸ್ಥಾನದ ಹುಂಡಿ ಮತ್ತು ದೇವರ ಮೇಲಿನ ಆಭರಣಗಳ ಕಳುವು

ಮದ್ದೂರು ಬಳಿ ಹೊಸದಾಗಿ ಕಟ್ಟಿಸಿರುವ ದೇವಸ್ಥಾನದ ಹುಂಡಿ ಮತ್ತು ದೇವರ ಮೇಲಿನ ಆಭರಣಗಳ ಕಳುವು

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 12:29 PM

ಕಳ್ಳರು ದೇವಸ್ಥಾನಗಳನ್ನೂ ಬಿಡುತ್ತಿಲ್ಲ ಅನ್ನೋದು ಖೇದಕರ ಸಂಗತಿ. ಅವ್ವೇರಹಳ್ಳಿಯ ಗಣೇಶನ ದೇಗುಲವನ್ನು ಇತ್ತೀಚಿಗೆ ಕಟ್ಟಿಸಿರುವುದರಿಂದ ಪ್ರಾಯಶಃ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಗ್ರಾಮಸ್ಥರೆಲ್ಲ ಸೇರಿ ಚಂದಾ ಒಂದುಗೂಡಿಸಿ ಕಟ್ಟಿಸಿರುವ ಗುಡಿ ಇದು. ಕಳ್ಳತನದ ಪ್ರಸಂಗ ಸಹಜವಾಗೇ ಅವರಲ್ಲಿ ನೋವನ್ನುಂಟು ಮಾಡಿದೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಕಟ್ಟಿಸಿರುವ ನೂತನ ಗಣೇಶನ ದೇವಾಲಯದಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ರಾತ್ರಿ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನು ಸಲಾಕೆ, ಹಾರೆ ಬಳಸಿ ಓಪನ್ ಮಾಡಿರುವ ಕಳ್ಳರು ಹುಂಡಿಯ ಬೀಗವನ್ನೂ ಮುರಿದು ಅದರಲ್ಲಿದ್ದ ಕಾಣಿಕೆಯ ಹಣವನ್ನು ದೋಚುವುದರ ಜೊತೆಗೆ ದೇವರ ಮೇಲಿದ್ದ ಆಭರಣಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಕೊಪ್ಪದ ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರ ಜೊತೆ ಮಾತಾಡಿ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ನೇಪಾಳಿ ಕಳ್ಳರ ಕೈಚಳಕ, ನಗರದಲ್ಲಿ ನಡೆದಿರುವ ಕಳ್ಳತನ ಒಂದೆರಡಲ್ಲ!