ನಂದಿ ಹಿಲ್ಸ್ಗೆ ಆಗಮಿಸಿದ ಪ್ರವಾಸಿಗರ ಪರದಾಟ; 6 ಕಿಲೋಮೀಟರ್ ಟ್ರಾಫಿಕ್ ಜಾಮ್
ಬೆಳಿಗ್ಗೆ 4 ಗಂಟೆಗೆ ಪ್ರವಾಸಿಗರು ನಂದಿಗಿರಿಧಾಮದ ಬಳಿ ಆಗಮಿಸಿದ್ದಾರೆ. ಆದರೆ ಮೇಲೆ ಹೋಗಲು ಸಾಧ್ಯವಾಗದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಇಂದು (ಮೇ 1) ಭಾನುವಾರ. ವೀಕೆಂಡ್ ಕಾರಣ ಹೆಚ್ಚು ಜನರು ನಂದಿ ಹಿಲ್ಸ್ (Nandi Hills) ಕಡೆಗೆ ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿಗರು (Tourists) ನಂದಿಗಿರಿಧಾಮದ ಬುಡದಲ್ಲಿ ಪರದಾಡುತ್ತಿದ್ದಾರೆ. ಗಿರಿಧಾಮದ ಮೇಲೆ ಪಾರ್ಕಿಂಗ್ ಹೌಸ್ ಫುಲ್ ಆಗಿರುವ ಹಿನ್ನೆಲೆ ಪ್ರವಾಸಿಗರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಗಿರಿಧಾಮದ ಬುಡದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಕಿಲೋಮೀಟರ್ ಗಟ್ಟಲೇ ಪ್ರವಾಸಿಗರು ರಸ್ತೆಯಲ್ಲೇ ಪರದಾಡುತ್ತಿದ್ದಾರೆ. ಗಿರಿಧಾಮದಲ್ಲಿ ಕೇವಲ 300 ಕಾರು 1,000 ಬೈಕ್ಗಳಿಗೆ ಮಾತ್ರ ಅವಕಾಶ ಇದೆ. ಮೇಲೆ ಹೋಗಿರುವ ಕಾರುಗಳು ವಾಪಸ್ ಬರುವವರೆಗೂ ಪೊಲೀಸರು ಕಾಯುತ್ತಿದ್ದಾರೆ.
ಬೆಳಿಗ್ಗೆ 4 ಗಂಟೆಗೆ ಪ್ರವಾಸಿಗರು ನಂದಿಗಿರಿಧಾಮದ ಬಳಿ ಆಗಮಿಸಿದ್ದಾರೆ. ಆದರೆ ಮೇಲೆ ಹೋಗಲು ಸಾಧ್ಯವಾಗದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಮೇಲೆ ಇರೋರು ಕೆಳಗೆ ಬರುತ್ತಿಲ್ಲ. ಕೆಳಗೆ ಇರೋರು ಮೇಲೆ ಹೋಗಕ್ಕೆ ಆಗ್ತಾಯಿಲ್ಲ ಅಂತ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ
Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ
Published on: May 01, 2022 09:33 AM
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

