ಚಾಮರಾಜನಗರ ಶೂಟೌಟ್: ಘಟನೆ ನಡೆದ ಹೊಳೆ ದಟ್ಟಿ ಅರಣ್ಯದಿಂದಲೇ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರದ ಹೊಳೆ ದಟ್ಟಿ ಅರಣ್ಯದಲ್ಲಿ ಆಗಸ್ಟ್ 15ರಂದು ಜಿಂಕೆ ಬೇಟೆಗಾರರ ಮೇಲೆ ನಡೆದ ಎನ್ಕೌಂಟರ್ನ ನಡೆದ ಸ್ಥಳದಿಂದ ಟಿವಿ9 ಗ್ರೌಂಡ್ ರಿಪೋರ್ಟ್ ಮಾಡಿದೆ. ಅರಣ್ಯ ಸಿಬ್ಬಂದಿ ಗುಂಡಿಗೆ ಕುಮಾರ್, ಆಂಥೋನಿ ಸ್ವಾಮಿ, ಪೀಟರ್ ಎಂಬ ಮೂವರು ಬೇಟೆಗಾರರು ಬಲಿಯಾಗಿದ್ದರು. ಘಟನೆ ಬಳಿಕ ಉದ್ರಿಕ್ತ ಗುಂಪು ಅರಣ್ಯ ಇಲಾಖೆಯ ಆ್ಯಂಟಿ ಪೋಚಿಂಗ್ ಕ್ಯಾಂಪ್ ಅನ್ನು ಧ್ವಂಸಗೊಳಿಸಿತ್ತು.
ಚಾಮರಾಜನಗರ, ಆಗಸ್ಟ್ 23: ಹನೂರು ತಾಲೂಕಿನ ಹೊಳೆ ದಟ್ಟಿ ಅರಣ್ಯದಲ್ಲಿ ಆಗಸ್ಟ್ 15ರಂದು ನಡೆದ ಎನ್ಕೌಂಟರ್ ನಡೆದ ಸ್ಥಳದಿಂದಲೇ ಟಿವಿ9 ಗ್ರೌಂಡ್ ರಿಪೋರ್ಟ್ ಮಾಡಿದೆ. ಜಿಂಕೆ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಸೂಚಿಸಿದಾಗ, ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬೇಟೆಗಾರರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಉದ್ರಿಕ್ತಗೊಂಡ ಗುಂಪು ಅರಣ್ಯ ಇಲಾಖೆಯ ಆ್ಯಂಟಿ ಪೋಚಿಂಗ್ ಕ್ಯಾಂಪ್ (ಎಪಿಸಿ ಕ್ಯಾಂಪ್) ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಕಿಟಕಿ ಗಾಜುಗಳು, ಪೀಠೋಪಕರಣಗಳು, ಸಮವಸ್ತ್ರ, ವಿದ್ಯುತ್ ಉಪಕರಣಗಳು, ವಾಕಿಟಾಕಿ ಚಾರ್ಜರ್ ಮತ್ತು ಶೆಡ್ ಅನ್ನು ಪುಡಿ ಪುಡಿ ಮಾಡಿದ್ದರೆ. ಈ ಎಲ್ಲ ಘಟನೆಗಳ ಭೀಕರತೆ ಹೇಗಿತ್ತು ಎಂಬುದರ ಬಗ್ಗೆ ಸ್ಥಳದಿಂದ ಪ್ರತ್ಯಕ್ಷ ವರದಿ ಇಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
