AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಂಗಪಟ್ಟಣ ಬಳಿ ಎರಡು ಟಿಪ್ಪರ್​ಗಳ ನಡುವೆ ಢಿಕ್ಕಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ

ಶ್ರೀರಂಗಪಟ್ಟಣ ಬಳಿ ಎರಡು ಟಿಪ್ಪರ್​ಗಳ ನಡುವೆ ಢಿಕ್ಕಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 07, 2025 | 10:08 AM

Share

ಅಪಘಾತ ನಡೆದ ಸ್ಥಳದಲ್ಲಿ ಒಬ್ಬ ಪೊಲೀಸ್ ಕಾನ್​ಸಟೇಬಲ್ ಇದ್ದಾರೆ. ಪ್ರಕರಣವನ್ನು ಅವರು ದಾಖಲಿಸಿಕೊಂಡಿರಬಹುದು. ಪಕ್ಕದಿಂದ ಬರುತ್ತಿದ್ದ ಟಿಪ್ಪರ್​​ನ ಬ್ರೇಕ್ ಫೇಲ್ ಆಗಿರುವ ಸಾಧ್ಯತೆ ಇದೆ. ಚಾಲಕನಿಗೆ ಮುಖ್ಯರಸ್ತೆಯಲ್ಲಿ ಟಿಪ್ಪರ್​ನಂಥ ದೊಡ್ಡ ವಾಹನ ಬರ್ತಾ ಇದ್ದಿದ್ದು ಕಂಡರೂ ತನ್ನ ವಾಹನವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಎರಡೂ ಟಿಪ್ಪರ್​ಗಳ ಚಾಲಕರಿಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ.

ಮಂಡ್ಯ, ಜೂನ್ 7: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಬಳಿ ಇಂದು ಬೆಳಗ್ಗೆ ಅಪಘಾತವೊಂದು ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ (no casualties) ಆಗಿಲ್ಲ. ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವೀಸ್ ರೋಡಲ್ಲಿ ಎರಡು ಟಿಪ್ಪರ್​ಗಳ ನಡುವೆ ನಡೆದ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೇರವಾಗಿ ಬರುತ್ತಿದ್ದ ಟಿಪ್ಪರೊಂದಕ್ಕೆ ಬಲಭಾಗದ ರಸ್ತೆಯಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್ ಢಿಕ್ಕಿ ಹೊಡೆದ ಕಾರಣ ಎರಡು ವಾಹನಗಳಲ್ಲಿ ಒಂದು ಪಕ್ಕದಲ್ಲಿದ್ದ ಹೋಟೆಲ್ ಕಡೆ ನುಗ್ಗಿದೆ. ಹೋಟೆಲ್​ನಲ್ಲಿ ಬಹಳ ಜನ ಇದ್ದಾಗ್ಯೂ ಯಾರೂ ಗಾಯಗೊಂಡಿಲ್ಲ.

ಇದನ್ನೂ ಓದಿ:  Tumkur Accident: ತುಮಕೂರು ಹಿರೇಹಳ್ಳಿ ಬಳಿ ಭೀಕರ ಅಪಘಾತ, ಕಂಟೇನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ