AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿಯವರನ್ನು ಯಾರಾದರೂ ಮುಟ್ಟಲು ಸಾಧ್ಯವೇ ಅಂತ ವ್ಯಂಗ್ಯವಾಡಿದ ವಿ ಸೋಮಣ್ಣ

ಮುಖ್ಯಮಂತ್ರಿಯವರನ್ನು ಯಾರಾದರೂ ಮುಟ್ಟಲು ಸಾಧ್ಯವೇ ಅಂತ ವ್ಯಂಗ್ಯವಾಡಿದ ವಿ ಸೋಮಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2024 | 12:17 PM

ರೇಲ್ವೇ ಖಾತೆಯ ಸಹಾಯಕ ಸಚಿವರೂ ಆಗಿರುವ ಸೋಮಣ್ಣ ಮುಂದಿನ ತಿಂಗಳು ಬೆಳಗಾವಿಯಿಂದ ಸ್ಲೀಪಿಂಗ್ ಕೋಚ್ ಲಭ್ಯವಾಗಲಿದೆ ಎಂದು ಹೇಳಿದರು. ಬೆಳಗಾವಿ-ಪುಣೆ ನಡುವೆ ಒಂದು ವಂದೇ ಭಾರತ್ ಟ್ರೈನನ್ನು ಆರಂಭಿಸಲಾಗಿದೆ ಎಂದ ಅವರು ಬೆಳಗಾವಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ರೈಲುಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಬೆಳಗಾವಿ: ಮುಖ್ಯಮಂತ್ರಿಯವರನ್ನು ಯಾರಾದರೂ ಮುಟ್ಟುವುದು ಸಾಧ್ಯವೇ? ಅವರನ್ನು ಮುಟ್ಟಿದರೆ ಪೊಲೀಸರು ಹಿಡಿದು ಕೇಸ್ ಹಾಕುತ್ತಾರೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ವ್ಯಂಗ್ಯವಾಡಿದರು. ಅವರೊಬ್ಬ ಹಿರಿಯ ಮತ್ತು ಅನುಭವಿ ರಾಜಕಾರಣಿ ಹಾಗೂ ಎರಡು ಸಲ ಮುಖ್ಯಮಂತ್ರಿಯಾಗಿರುವವರು, ಅವರಾಡುವ ಮಾತು ಜನಸಾಮಾನ್ಯರಿಗೆ ಸ್ಪಂದಿಸುವಂತಿರಬೇಕು, ಜನರ ಭಾವನೆಗಳಿಗೆ ತದ್ವಿರುದ್ಧವಾಗಿ ಅವರು ಮಾತಾಡಬಾರದು, ಮೈಸೂರಲ್ಲಿ ಆಡಿದ ಮಾತು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸೋಮಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?