AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನ ಅಂತ್ಯಕ್ರಿಯೆ: ಚಿತಾಗಾರದಲ್ಲಿ ದೇಹವನ್ನು ತೆಗೆದುಕೊಂಡು ಹೋದಾಗ ವಿಜಯ್, ಮುರಳಿ ಮತ್ತು ಶೌರ್ಯ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ತಲೆಯಿಟ್ಟು ಅತ್ತರು

ಸ್ಪಂದನ ವಿಜಯ್ ಅಂತಿಮ ಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿರುವ ಚಿತಾಗಾರದಲ್ಲಿ ನೆರವೇರಿಸಲಾಯಿತು. ಸ್ಪಂದನ ಅಂತಿಮಯಾತ್ರೆಯಲ್ಲಿ ಸಿನಿಮಾ ಕ್ಷೇತ್ರದವರು, ರಾಜಕಾರಣಿಗಳಲ್ಲದೆ, ಬೇರೆ ಬೇರೆ ಕ್ಷೇತ್ರಗಳ ಗಣ್ರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು.

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 09, 2023 | 6:36 PM

Share

ಬೆಂಗಳೂರು: ಇದು ಕರುಳು ಕಿತ್ತು ಬರುವ ದೃಶ್ಯ, ಸ್ಪಂದನ ವಿಜಯರಾಘವೇಂದ್ರ (Spandana Vijay Raghavendra) ಅವರ ದೇಹವನ್ನು ಚಿತಾಗಾರದೊಳಗೆ ತೆಗೆದುಕೊಂಡು ಹೋದಾಗ ಕಂಡ ದೃಶ್ಯವಿದು. ಪತ್ನಿಯನ್ನು ಕಳೆದುಕೊಂಡ ವಿಜಯರಾಘವೇಂದ್ರ (Vijay Raghavendra), ಅಮ್ಮನನ್ನು ಕಳದುಕೊಂಡ ಶೌರ್ಯ (Shourya ) ಮತ್ತು ಅಮ್ಮನಂಥ ಅತ್ತಿಗೆಯನ್ನು ಕಳೆದುಕೊಂಡ ಶ್ರೀಮುರಳಿ (Sri Murali)-ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ತಲೆಯಿಟ್ಟು ಅಳುತ್ತಿರುವ ದೃಶ್ಯ ಮನ ಕಲಕುತ್ತದೆ. ಸೋಮವಾರ ಬೆಳಗ್ಗೆ ಥಾಯ್ಲೆಂಡ್ ರಾಜಧಾನಿಯ ಹೋಟೆಲೊಂದರಲ್ಲಿ ಹೃದಯಾಘಾತದಿಂದ ಆಕಾಲಿಕ ಮರಣವನ್ನಪ್ಪಿದ ಸ್ಪಂದನ ವಿಜಯ್ ಅಂತಿಮ ಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿರುವ ಚಿತಾಗಾರದಲ್ಲಿ ನೆರವೇರಿಸಲಾಯಿತು. ಸ್ಪಂದನ ಅಂತಿಮಯಾತ್ರೆಯಲ್ಲಿ ಸಿನಿಮಾ ಕ್ಷೇತ್ರದವರು, ರಾಜಕಾರಣಿಗಳಲ್ಲದೆ, ಬೇರೆ ಬೇರೆ ಕ್ಷೇತ್ರಗಳ ಗಣ್ರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ