ನಟ ಕಿಚ್ಚ ಸುದೀಪ್ ಅವರು ಸೆ.2ರಂದು ಜನ್ಮದಿನ ಆಚರಿಸಿಕೊಂಡರು. ಕೊರೊನಾ ವೈರಸ್ ಹರಡುವ ಭೀತಿಯ ಕಾರಣ ಅವರು ಸಾರ್ವಜನಿಕವಾಗಿ ಅಭಿಮಾನಿಗಳ ಜೊತೆ ಸೇರಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ (ಸೆ.3) ಮುಂಜಾನೆಯೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದಾರೆ. ದೇವರ ಆಶೀರ್ವಾದ ಪಡೆದು ಹೊರಬಂದ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದ್ದರು.
ಕುಟುಂಬ ಸಮೇತರಾಗಿ ಬಂದು ನಾಡದೇವತೆಗೆ ಕಿಚ್ಚ ಸುದೀಪ್ ಅವರು ಪೂಜೆ ಸಲ್ಲಿಸಿದರು. ತಮ್ಮ ನೆಚ್ಚಿನ ನಟನ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕಿಚ್ಚನಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಸದ್ಯ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಎರಡೂ ಚಿತ್ರಗಳ ಮೇಲೆ ಸಿನಿಪ್ರಿಯರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:
ಕಿಚ್ಚ ಸುದೀಪ್ ಜನ್ಮದಿನ: ಬರಬೇಡಿ ಎಂದರೂ ಮನೆ ಬಾಗಿಲಿಗೆ ಬಂದು ಕಾದ ಫ್ಯಾನ್ಸ್
Sudeep Birthday: ಕಿಚ್ಚ ಸುದೀಪ್ಗೆ ಮುದ್ದು ಮಗಳ ವಿಶ್; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ