
[lazy-load-videos-and-sticky-control id=”iU0DfxrJ6R8″]
ರಾಯಚೂರು: ಜಿಲ್ಲೆಯ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.54 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗಾಗಿ, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇದೀಗ, ನದಿ ಪಾತ್ರದತ್ತ ತೆರಳದಂತೆ ಜಿಲ್ಲಾಡಳಿತವು ಸೂಚನೆ ಹೊರಡಿಸಿದೆ.
ಯಾದಗಿರಿ ಜಿಲ್ಲೆಯ ಸೊಂತಿ ಬ್ಯಾರೆಜನಿಂದ 18,000 ಕ್ಯುಸೆಕ್ ನೀರು ರಿಲಿಸ್ ಆದ ಹಿನ್ನೆಲೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜನಿಂದ 2.54 ಲಕ್ಷ ಕ್ಯುಸೆಕ್ ನೀರು ರಿಲಿಸ್ ಮಾಡಲಾಗಿದೆ.
ಹೀಗಾಗಿ, ಜಿಲ್ಲೆಯ ಗುರ್ಜಾಪುರ, ಅರಶಿಣಗಿ, ಕಾಡ್ಲೂರ, ಅತ್ಕೂರ, ಡೊಂಗರಾಂಪುರ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
Published On - 11:24 am, Tue, 18 August 20