ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ
ಪೋಕ್ಸೋ ಪ್ರಕರಣದ ಆರೋಪಿ ಆನಂದ್ ಎಂಬಾತ, ತನಗೆ ನ್ಯಾಯ ಬೇಕೆಂದು ಅಪಾರ್ಟ್ಮೆಂಟ್ ಮೇಲೇರಿ ಹೈಡ್ರಾಮಾ ಮಾಡಿರುವ ಘಟನೆ ದೇವನಹಳ್ಳಿ ಬೈಪಾಸ್ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಸ್ಥಳಕ್ಕೆ ಡಿಸಿ ಬರಬೇಕೆಂದು ಪಟ್ಟು ಹಿಡಿದಿರುವ ಈತ, ಪೊಲೀಸರು ಹಾಗೂ ತಾಯಿಯ ಮನವೊಲಿಕೆಯ ಪ್ರಯತ್ನಗಳಿಗೂ ಬಗ್ಗದೆ ಹಠ ಮುಂದುವರಿಸಿದ ಪ್ರಸಂಗ ನಡೆದಿದೆ.
ದೇವನಹಳ್ಳಿ, ಏಪ್ರಿಲ್ 21: ನನಗೆ ನ್ಯಾಯ ಬೇಕು, ಡಿಸಿ ಕರೆಸಿ ಎಂದು ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ದೇವನಹಳ್ಳಿ ಬೈಪಾಸ್ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಪೋಕ್ಸೋ ಕೇಸ್ನ ಆರೋಪಿ ಆನಂದ್ ಎಂಬ ಯುವಕ ಈ ರೀತಿ ಹುಚ್ಚಾಟ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರ ಮನವೊಲಿಕೆಗೂ ಈತ ಬಗ್ಗಿಲ್ಲ. ಇಲ್ಲಿಗೆ ಡಿಸಿ ಬರಲೇ ಬೇಕು ಎಂದು ಪಟ್ಟುಹಿಡಿದಿರುವ ಈತ, ಸ್ಥಳಕ್ಕೆ ಬಂದ ತಾಯಿಯ ಮನವಿಗೂ ಕ್ಯಾರೇ ಎಂದಿಲ್ಲ. ಎಷ್ಟೇ ಮನವೊಲಿಕೆ ಮಾಡಿದ್ರೂ ಈತ ತನ್ನ ಹಠ ಬಿಡದ ಹಿನ್ನೆಲೆ ಪೊಲೀಸರಿಗೂ ಈತನ ಹೈಡ್ರಾಮಾ ತಲನೋವಾಗಿ ಮಾರ್ಪಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us