AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣದ ಪ್ರಭಾವ; ಸಾವಿರಾರು ಗ್ರಾಹಕರಿಗೆ ಸಿಗುತ್ತಿಲ್ಲ ಗ್ಯಾಸ್, 16 ಪೂರೈಕೆ ಕೇಂದ್ರಗಳು ಬಂದ್​​

ರಷ್ಯಾ ಆಕ್ರಮಣದಿಂದಾಗಿ ಪ್ರಾದೇಶಿಕ ಗ್ಯಾಸ್​ ಕಂಪನಿಗಳ ಪ್ರಾದೇಶಿಕ ಆಪರೇಟರ್​​ ನೆಟ್ವರ್ಕ್​ಗೆ ಹಾನಿಯುಂಟಾಗಿದೆ. ಅಷ್ಟೇ ಅಲ್ಲ, ಇನ್ನೂ ಸಹ  ಮಿಲಿಟರಿ ಕಾರ್ಯಾಚರಣೆಗಳು ನಡೆಯುತ್ತಲೇ ಇದೆ.

ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣದ ಪ್ರಭಾವ; ಸಾವಿರಾರು ಗ್ರಾಹಕರಿಗೆ ಸಿಗುತ್ತಿಲ್ಲ ಗ್ಯಾಸ್, 16 ಪೂರೈಕೆ ಕೇಂದ್ರಗಳು ಬಂದ್​​
ಖಾರ್ಕೀವ್​ ಚಿತ್ರಣ
TV9 Web
| Updated By: Lakshmi Hegde|

Updated on: Mar 06, 2022 | 3:14 PM

Share

ರಷ್ಯಾ  ಮಿಲಿಟರಿ ಉಕ್ರೇನ್​ಗೆ ಕಾಲಿಟ್ಟು 10ದಿನಗಳೇ ಕಳೆದು ಹೋಗಿವೆ. ಅಲ್ಲಿರುವ ಪ್ರಜೆಗಳ ಕಷ್ಟ, ಸಂಕಟ ಮಿತಿಮೀರಿದೆ. ಈ ಮಧ್ಯೆ ಉಕ್ರೇನ್​ ಸುಮಾರು 6 ಪ್ರದೇಶಗಳಲ್ಲಿ ಜನರಿಗೆ ಗ್ಯಾಸ್​ ಪೂರೈಕೆ ಇಲ್ಲದಂತಾಗಿದೆ. ಯುದ್ದ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್​ನ ಖಾರ್ಕೀವ್​, ಕೀವ್​,  ಮೈಕೊಲೈವ್, ಡೊನೆಟ್ಸ್ಕ್, ಲುಹಾನ್ಸ್ಕ್ ಮತ್ತು ಝಪೊರಿಜಿಯಾ ಪ್ರದೇಶಗಳ ಒಟ್ಟು 16 ಗ್ಯಾಸ್​ ವಿತರಣಾ ಕೇಂದ್ರಗಳನ್ನು ಮುಚ್ಚಲಾಗುವುದು. ಹೀಗಾಗಿ ಜನರಿಗೆ ಅನಿಲ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಉಕ್ರೇನ್​ನ ಗ್ಯಾಸ್​ ಪ್ರಸರಣ ವ್ಯವಸ್ಥೆಯ ಆಪರೇಟರ್​ ಘೋಷಿಸಿದೆ.   ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ಈಗ ಅನೇಕರಿಗೆ ಗ್ಯಾಸ್​ ಸೌಲಭ್ಯ ಸಿಗದಂತಾಗಿದೆ ಎಂದು ಕೀವ್​ ಇಂಡಿಪೆಂಡೆಂಟ್ ಮಾಧ್ಯಮ ವರದಿ ಮಾಡಿದೆ.

ರಷ್ಯಾ ಆಕ್ರಮಣದಿಂದಾಗಿ ಪ್ರಾದೇಶಿಕ ಗ್ಯಾಸ್​ ಕಂಪನಿಗಳ ಪ್ರಾದೇಶಿಕ ಆಪರೇಟರ್​​ ನೆಟ್ವರ್ಕ್​ಗೆ ಹಾನಿಯುಂಟಾಗಿದೆ. ಅಷ್ಟೇ ಅಲ್ಲ, ಇನ್ನೂ ಸಹ  ಮಿಲಿಟರಿ ಕಾರ್ಯಾಚರಣೆಗಳು ನಡೆಯುತ್ತಲೇ ಇರುವುದರಿಂದ ಅನೇಕ ಅನಿಲ ಪೂರೈಕೆ ಕೇಂದ್ರಗಳಿಂದ ಮತ್ತೊಮ್ಮೆ ಪೂರೈಕೆ ಶುರು ಮಾಡುವುದು ಅಸಾಧ್ಯ ಎಂದೂ ಹೇಳಲಾಗಿದೆ. ಹಾಗೇ, ಪೋಲ್ಯಾಂಡ್​​ನಿಂದ ಗ್ಯಾಸ್ ಆಮದು ಮಾಡಿಕೊಳ್ಳುವ ಸಂಬಂಧ ಅಲ್ಲಿ ಗ್ಯಾಸ್​ ಆಪರೇಟರ್​ ವ್ಯವಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದೂ ಕೀವ್​ ಇಂಡಿಪೆಂಡೆಂಟ್ ವರದಿ ಮಾಡಿದೆ.

ಯುದ್ಧಕ್ಕೂ ಮೊದಲು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿಕೊಂಡು ಬಂದಿದದ ನ್ಯಾಟೋ ಇದೀಗ ಉಕ್ರೇನ್​ಗೆ ಸಹಕಾರ ಕೊಡಲು ನಿರಾಕರಿಸುತ್ತಿದೆ. ಅದರಲ್ಲೂ ಉಕ್ರೇನ್​ನ ವಾಯುಪ್ರದೇಶವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಪರಿಗಣಿಸಬೇಕು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನ್ಯಾಟೊಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಟೋ ಅದನ್ನು ತಿರಸ್ಕರಿಸಿತ್ತು. ನಾವೇನೂ ಮಾಡಲು ಸಾಧ್ಯವಿಲ್ಲ. ಉಕ್ರೇನ್​ ವಾಯುಪ್ರದೇಶವನ್ನು ನೋ ಫ್ಲೈ ಝೋನ್​ ಎಂದು ಘೋಷಣೆ ಮಾಡಿದರೆ, ಪೂರ್ವ ಯುರೋಪ್​ನಾದ್ಯಂತ ಯುದ್ಧ ಸೃಷ್ಟಿಯಾಗುತ್ತದೆ ಎಂದು ಹೇಳಿದೆ. ಹೀಗಾಗಿ ಝೆಲೆನ್ಸ್ಕಿ ನ್ಯಾಟೋವನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನಾನು ಶೂಟ್​ ಮಾಡಿದ ಸ್ಥಳಗಳಲ್ಲಿ ಈಗ ಬಾಂಬ್​ ಸಿಡಿಯುತ್ತಿದೆ’; ಬಾಲಿವುಡ್​ ನಿರ್ದೇಶಕನ ಬೇಸರ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?