AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧನಾಡು ಉಕ್ರೇನ್​ನ ಎಲ್ವಿವ್ ರೈಲ್ವೇ ನಿಲ್ದಾಣದ ಹೊರಗೆ ಕುಳಿತು ಪಿಯಾನೋ ನುಡಿಸಿದ ಯುವತಿ: ವಿಡಿಯೋ ವೈರಲ್​

ಯುದ್ಧದ ಆತಂಕ, ಭಯ, ನೋವಿನ ನಡುವೆ ಯುವತಿಯೊಬ್ಬಳು ರೈಲ್ವೆ ನಿಲ್ದಾಣದ ಹೊರಗೆ ಕುಳಿತು ಜಗತ್ತು ಎಷ್ಟು ಸುಂದರ ಎಂದು ಪಿಯಾನೋ ನುಡಿಸಿದ ವಿಡಿಯೋ ಸಖತ್​ ವೈರಲ್​ ಆಗಿದೆ.

ಯುದ್ಧನಾಡು ಉಕ್ರೇನ್​ನ ಎಲ್ವಿವ್ ರೈಲ್ವೇ ನಿಲ್ದಾಣದ ಹೊರಗೆ ಕುಳಿತು ಪಿಯಾನೋ ನುಡಿಸಿದ ಯುವತಿ: ವಿಡಿಯೋ ವೈರಲ್​
ಪಿಯಾನೋ ನುಡಿಸುತ್ತಿರುವ ಯುವತಿ
TV9 Web
| Edited By: |

Updated on:Mar 06, 2022 | 4:00 PM

Share

ಉಕ್ರೇನ್​ ಮೇಲಿನ ರಷ್ಯಾ ಯುದ್ಧ (Ukraine Russia War)  11 ನೇ ದಿನಕ್ಕೆ ಕಾಲಿರಿಸಿದೆ. ಐದುವರೆ ಗಂಟೆಗಳ ಕದನವಿರಾಮದ ಬಳಿಕ ಮತ್ತೆ ರಷ್ಯಾ ಯುದ್ಧ ಮುಂದುವರೆಸಿದೆ. ಜನಜೀವನ ಅಕ್ಷರಶಃ ನಲುಗಿಹೋಗಿದೆ.  ಎಲ್ಲಿ ಯಾವ ಹೊತ್ತಿಗೆ ಬಾಂಬ್​ ಸ್ಫೋಟದ ಸದ್ದು ಕೇಳಿಸಲಿದೆ ಎನ್ನುವ ಅರಿವಿಲ್ಲದೆ ಕ್ಷಣಕ್ಷಣಕ್ಕೂ ಭಯದಲ್ಲೇ  ಬದುಕುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ. ಯುದ್ಧನಾಡು ಉಕ್ರೇನ್​ನ ಎಲ್ವಲ್ ​(Lviv Train Station) ರೈಲು ನಿಲ್ದಾಣದಲ್ಲಿ ಕುಳಿತು ಯುವತಿಯೊಬ್ಬಳು ಪಿಯಾನೋ (Piano) ನುಡಿಸಿದ್ದಾಳೆ. ಯುದ್ಧದ ಆತಂಕ, ಭಯ, ನೋವಿನ ನಡುವೆ ಯುವತಿ ‘ಜಗತ್ತು ಎಷ್ಟು ಸುಂದರ’ ಎಂದು ಪಿಯಾನೋ ನುಡಿಸಿದ್ದು, ಅದರ ವಿಡಿಯೋ ಸಖತ್​ ವೈರಲ್​ ಆಗಿದೆ.

ಜನನಿಬಿಡ ಪ್ರದೇಶದಲ್ಲಿ ಭಾರೀ ಗಾತ್ರದ ಪಿಯಾನೋ ಇಟ್ಟುಕೊಂಡು ಲೋಯಸ್ ಆರ್ಮ್ಸ್ಟ್ರಾಂಗ್ ಅವರ ಹಾಡು What A Wonderful World ಹಾಡನ್ನು ನುಡಿಸಿದ್ದಾಳೆ.  ಆಕೆಯ ಸುತ್ತಲೂ ಬ್ಯಾಗ್​ಗಳನ್ನು ಹಿಡಿದುಕೊಂಡು ವಿವರಿಸಲಾಗದ ಭಯದಲ್ಲಿ ರೈಲಿಗಾಗಿ ಕಾಯುತ್ತಿರುವ ಜನರು ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅದೆಲ್ಲವನ್ನು ಕಡೆಗಣಿಸಿ ತನ್ನದೇ ಪ್ರಪಂಚದಲ್ಲಿ ಭಯದ ನಡುವೆಯೂ ಪಿಯಾನೋ ನುಡಿಸಿದ್ದಾಳೆ.

ವಿಡಿಯೋ ನೋಡಿದ ನೆಟ್ಟಿಗರು ಕಣ್ಣಾಲಿಗಳಲ್ಲಿ ನೀರು ತುಂಬುತ್ತಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ವಿಡಿಯೋವನ್ನು ಆ್ಯಂಡ್ರೂ ಮಾರ್ಶಲ್​ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು 85 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಯುದ್ಧದ ನಡುವೆಯೂ ಜಗತ್ತು ಎಷ್ಟು ಸುಂದರ ಎನ್ನುವುದನ್ನು ಕಂಡು ಬಳಕೆದಾರರು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ:

Viral Video: ಹೆಪ್ಪುಗಟ್ಟಿದ ನದಿಯಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆ: ಅಗ್ನಿಶಾಮಕ ಸಿಬ್ಬಂದಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ

Published On - 3:56 pm, Sun, 6 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ