AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Grammys 2021: ರೈತರಿಗೆ ಬೆಂಬಲ ಎಂದು ಬರೆದ ಮಾಸ್ಕ್ ಧರಿಸಿ 63ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾದ ಖ್ಯಾತ ಯುಟ್ಯೂಬರ್ ಲಿಲ್ಲೀ ಸಿಂಗ್

Lilly Singh in Grammys 2021: ಕೆಂಪು ಹಾಸಿನ, ಪ್ರಶಸ್ತಿ ಸಮಾರಂಭದ ಫೋಟೊಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂದು ನನಗೆ ಗೊತ್ತಿದೆ. ಮಾಧ್ಯಮದವರೇ ಇಲ್ಲಿ ನೋಡಿ, #IStandWithFarmers #GRAMMY ಎಂಬ ಹ್ಯಾಷ್ ಟ್ಯಾಗ್ ಬಳಸಿ ಲಿಲ್ಲೀ ಸಿಂಗ್ ತಮ್ಮ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

Grammys 2021: ರೈತರಿಗೆ ಬೆಂಬಲ ಎಂದು ಬರೆದ ಮಾಸ್ಕ್ ಧರಿಸಿ 63ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾದ ಖ್ಯಾತ ಯುಟ್ಯೂಬರ್ ಲಿಲ್ಲೀ ಸಿಂಗ್
ಲಿಲ್ಲೀ ಸಿಂಗ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Mar 15, 2021 | 1:50 PM

Share

ವಾಷಿಂಗ್ಟನ್: ಅಮೆರಿಕದಲ್ಲಿ ಮಾರ್ಚ್ 14ರಂದು ನಡೆದ 63ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಕಾಮಿಡಿಯನ್-ಯುಟ್ಯೂಬರ್ ಲಿಲ್ಲೀ ಸಿಂಗ್ ‘I Stand With Farmers’ ಎಂದು ಬರೆದಿರುವ ಮಾಸ್ಕ್ ಧರಿಸಿ ಭಾಗಿಯಾಗಿದ್ದಾರೆ. ಕಪ್ಪು ಬಣ್ಣದ ಮಾಸ್ಕ್ ನಲ್ಲಿ ರೈತರಿಗೆ ಬೆಂಬಲ ಸೂಚಿಸುತ್ತೇನೆ ಎಂದು ಬರೆದಿದ್ದು, ಈ ಫೋಟೊವನ್ನು ಲಿಲ್ಲೀ ಟ್ವೀಟ್ ಮಾಡಿದ್ದಾರೆ. ಕೆಂಪು ಹಾಸಿನ, ಪ್ರಶಸ್ತಿ ಸಮಾರಂಭದ ಫೋಟೊಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂದು ನನಗೆ ಗೊತ್ತಿದೆ. ಮಾಧ್ಯಮದವರೇ ಇಲ್ಲಿ ನೋಡಿ, #IStandWithFarmers #GRAMMY ಎಂಬ ಹ್ಯಾಷ್ ಟ್ಯಾಗ್ ಬಳಸಿ ಲಿಲ್ಲೀ ಸಿಂಗ್ ತಮ್ಮ ಫೋಟೊವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಗತ್ತಿನ ಅತಿ ದೊಡ್ಡ ಸಂಗೀತ ಕಲಾವಿದರು ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು , ಜಗತ್ತಿನಾದ್ಯಂತ ಸಾವಿರಾರು ಮಂದಿ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಲಿಲ್ಲೀ ಸಿಂಗ್ ಅವರ ಪೋಸ್ಟಿಗೆ ರೂಪದರ್ಶಿ ಅಮಂಡಾ ಸೆರ್ನಿ, WWE ಕುಸ್ತಿಪಟು ಸುನಿಲ್ ಸಿಂಗ್, ನಟಿ ಶ್ರುತಿ ಸೇತ್ ಕಾಮೆಂಟ್ ಮಾಡಿದ್ದಾರೆ. ಲಿಲ್ಲೀ ಸಿಂಗ್ ಜತೆ ಗಾಯಕ ಜೇ ಸೀನ್ , ವ್ಲೋಗರ್ ಅಮಂಡಾ ಸೆರ್ನಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಗ್ರ್ಯಾಮಿ ಸಮಾರಂಭದಲ್ಲಿ ರೈತರ ಪ್ರತಿಭಟನೆ ಪರ ದನಿಯೆತ್ತಿದಕ್ಕೆ ಲಿಲ್ಲೀ ಸಿಂಗ್ ಅವರನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ಶ್ಲಾಘಿಸಿದ್ದಾರೆ.

ಫೆಬ್ರವರಿ ತಿಂಗಳಾರಂಭದಲ್ಲಿ ಖ್ಯಾತ ಪಾಪ್ ತಾರೆ ರಿಹಾನ್ನಾ ದೆಹಲಿ ಗಡಿಭಾಗದಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಮಾಡಿದ ಟ್ವೀಟ್ ಸಂಚಲನ ಸೃಷ್ಟಿಸಿತ್ತು. ರೈತರ ಪರವಾಗಿ ದನಿಯೆತ್ತಿದ್ದಕ್ಕೆ ಧನ್ಯವಾದಗಳು ಎಂದು ಲಿಲ್ಲೀ ಸಿಂಗ್ ರಿಹಾನ್ನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದರು. ತುಂಬಾ ಧನ್ಯವಾದಗಳು. ಇದು ಮಾನವೀಯತೆಯ ವಿಷಯ. #IstandWithFarmers ಎಂದು ಲಿಲ್ಲೀ ಸಿಂಗ್ ಟ್ವೀಟ್ ಕಾಮೆಂಟ್ ಮಾಡಿದ್ದರು.

View this post on Instagram

A post shared by Amanda ????? (@amandacerny)

ಅಮಾಂಡ ಸೆರ್ನಿ ಅವರು ಪ್ರತಿಭಟನೆ ನಿರತ ಮಹಿಳಾ ರೈತರ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಜಗತ್ತು ನೋಡುತ್ತಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ನೀವು ಭಾರತೀಯರು ಅಥವಾ ಪಂಜಾಬಿಗಳು ಅಥವಾ ದಕ್ಷಿಣ ಏಷ್ಯಾದವರೇ ಆಗಿರಬೇಕು ಎಂದೇನಿಲ್ಲ. ಮಾನವೀಯತೆ ಎಂಬುದನ್ನು ನೀವು ಅರ್ಥ ಮಾಡಿಕೊಂಡರಷ್ಟೇ ಸಾಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಮಾನವೀಯತೆ, ನಾಗರಿಕ ಹಕ್ಕು- ಕಾರ್ಮಿಕರಿಗೆ ಸಮಾನತೆ ಮತ್ತು ಘನತೆ ಬಗ್ಗೆ ಸದಾ ಬೇಡಿಕೆಯೊಡ್ಡುತ್ತಲೇ ಇರಿ #FarmersProtest #internetshutdown ಎಂದು ಬರೆದಿದ್ದರು.

ಯಾರು ಈ ಲಿಲ್ಲೀ ಸಿಂಗ್? ಕೆನಡಾದ ಯುಟ್ಯೂಬರ್, ಕಾಮಿಡಿಯನ್, ಟಾಕ್ ಶೋ ನಿರೂಪಕಿ, ನಟಿ ಆಗಿದ್ದಾರೆ ಲಿಲ್ಲೀ ಸಿಂಗ್. ಟೊರಂಟೊಲ್ಲಿ ಹುಟ್ಟಿ ಬೆಳೆದ ಲಿಲ್ಲೀ 2010ರಲ್ಲಿ ಯುಟ್ಯೂಬ್ ವಿಡಿಯೊಗಳನ್ನು ಮಾಡಲು ಆರಂಭಿಸಿದ್ದರು, 2016ರಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಆದಾಯಗಳಿಸುವ ಯುಟ್ಯೂಬರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಲಿಲ್ಲೀ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಇದನ್ನೂ ಓದಿ:  ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್ 

India Together ಹ್ಯಾಷ್​ಟ್ಯಾಗ್​ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್

Published On - 1:43 pm, Mon, 15 March 21

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ