AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಯಾರ್ಕ್ ನಗರದ ಅಂಗಡಿಯೊಂದರಲ್ಲಿ ಥ್ಯಾಂಕ್ಸ್ ಯಾಕೆ ಹೇಳಲಿಲ್ಲ ಕೇಳಿದ್ದಕ್ಕೆ ನಡೆಯಿತೊಂದು ಕೊಲೆ!

ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಖಾರೆಫ್ ಅಲ್ಸೈದಿ ಹೇಳಿರುವ ಪ್ರಕಾರ ವ್ಯಕ್ತಿ ತಿವಿಸಿಕೊಂಡ ಬಳಿಕ ಅವನಿಗೆ ವಿಪರೀತ ರಕ್ತಸ್ರಾವವಾಗಿ ಅಂಗಡಿಯ ಪ್ರವೇಶದ್ವಾರದ ಬಳಿ ಕುಸಿದುಬಿದ್ದಿದ್ದಾನೆ. ನೆಲಕ್ಕೆ ಒರಗಿಯೇ, ‘ಅವನು ನನ್ನನ್ನು ತಿವಿದ, ಅವು ನನ್ನನ್ನು ತಿವಿದ’ ಅಂತ ಚೀರುತ್ತಿದ್ದನಂತೆ.

ನ್ಯೂ ಯಾರ್ಕ್ ನಗರದ ಅಂಗಡಿಯೊಂದರಲ್ಲಿ ಥ್ಯಾಂಕ್ಸ್ ಯಾಕೆ ಹೇಳಲಿಲ್ಲ ಕೇಳಿದ್ದಕ್ಕೆ ನಡೆಯಿತೊಂದು ಕೊಲೆ!
ತಿವಿತಕ್ಕೆ ಮೊದಲು ನಡೆದ ಜಗಳ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 24, 2022 | 8:06 AM

Share

ಹಿಂಸೆಯ ಪ್ರಕರಣಗಳು ಹೆಚ್ಚುತ್ತಿರುವ ಅಮೆರಿಕದ ನ್ಯೂ ಯಾರ್ಕ್ (New York) ನಗರದಲ್ಲಿ ಒಂದು ಥ್ಯಾಂಕ್ಸ್ ಹೇಳದ್ದಕ್ಕೂ ಕೊಲೆ ನಡೆಯುತ್ತದೆ ಅಂದರೆ ನಂಬುತ್ತೀರಾ? ನಗರದ ಅಂಗಡಿಯೊಂದರಲ್ಲಿ ಒಬ್ಬ ಗ್ರಾಹಕ (shopper) ಮತ್ತೊಬ್ಬ ಗ್ರಾಹಕ ಒಳಗೆ ಪ್ರವೇಶಿಸುವಾಗ ಅವನಿಗೆ ಅನುಕೂಲವಾಗಲೆಂದು ಡೋರನ್ನು ತೆರೆದು ಹಿಡಿದು ನಿಂತಾಗ ಒಳಗೆ ಬಂದವನು ಇವನ ಮುಖವನ್ನೂ ನೋಡದೆ ಅಂಗಡಿಯೊಳಗೆ ಹೋದಾಗ, ವ್ಯಗ್ರಗೊಂಡ ಇವನು, ‘ಒಂದು ಥ್ಯಾಂಕ್ಸ್ ಹೇಳಕ್ಕಾಗಲ್ವೇನಯ್ಯ ನಿನ್ ಕೈಲಿ,’ ಅಂದಿದ್ದಾನೆ. ಅದಿಷ್ಟಕ್ಕೇ ಅವರಿಬ್ಬರ ನಡುವೆ ವಾಗ್ವಾದ ಶುರುವಾಗಿ ಬ್ರೂಕ್ಲಿನ್ ಸ್ಮೋಕ್ ಶಾಪ್ (Brooklyn smoke shop) ಹೊರಗಡೆ 37-ವರ್ಷ-ವಯಸ್ಸಿನ ವ್ಯಕ್ತಿ (ಬಾಗಿಲು ತೆರೆದು ನಿಂತವನು) ತಿವಿತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ.

ನ್ಯೂ ಯಾರ್ಕ್ ನಗರದ ಗೊವಾನಸನಲ್ಲಿರುವ ನಾಲ್ಕನೇ ಅವೆನ್ಯೂ ಟೊಬ್ಯಾಕೊ ರೋಡ್ ಕಾರ್ಪೋರೆಶನ್ ನಲ್ಲಿ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ 10:20ಕ್ಕೆ ಸಂಭವಿಸಿದೆ.

ಮೃತ ವ್ಯಕ್ತಿ ಶಂಕಿತನಿಗೆ ನೀನ್ಯಾಕೆ ನನಗೆ ಥ್ಯಾಂಕ್ಸ್ ಹೇಳಲಿಲ್ಲ ಅಂಯ ಕೇಳಿದ್ದಕ್ಕೆ ಅವನಿಗೆ ಭಯಂಕರ ಕೋಪ ಬಂತಂತೆ.

ಅದಾದ ಮೇಲೆ ಅವರಿಬ್ಬರ ನಡುವೆ ಮಾತಿನ ಚಿಕಮಕಿ ಶುರುವಾಗಿದೆ. ಶಂಕಿತ ಅಲ್ಲಿಂದ ಹೊರಡಲು ಮುಂದಾದಾಗ ಬಲಿಯಾದ ವ್ಯಕ್ತಿ ಅವನಿಗೆ ಒಂದೇಟು ಹಾಕಿದ್ದಾನೆ.

ಮತ್ತಷ್ಟು ಕೋಪಗೊಂಡ ಶಂಕಿತ ಅವನಿಗೆ ಚಾಕುನಿಂದ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತಿವಿದಿದ್ದಾನೆ.

ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಖಾರೆಫ್ ಅಲ್ಸೈದಿ ಹೇಳಿರುವ ಪ್ರಕಾರ ವ್ಯಕ್ತಿ ತಿವಿಸಿಕೊಂಡ ಬಳಿಕ ಅವನಿಗೆ ವಿಪರೀತ ರಕ್ತಸ್ರಾವವಾಗಿ ಅಂಗಡಿಯ ಪ್ರವೇಶದ್ವಾರದ ಬಳಿ ಕುಸಿದುಬಿದ್ದಿದ್ದಾನೆ. ನೆಲಕ್ಕೆ ಒರಗಿಯೇ, ‘ಅವನು ನನ್ನನ್ನು ತಿವಿದ, ಅವು ನನ್ನನ್ನು ತಿವಿದ’ ಅಂತ ಚೀರುತ್ತಿದ್ದನಂತೆ.

ತಿವಿತಕ್ಕೊಳಗಾದವನನ್ನು ಬ್ರೂಕ್ಲಿನ್ ಮೆಥೋಡಿಸ್ಟ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿನ ವೈದ್ಯರು ಅವನ ಪ್ರಾಣ ಹೋಗಿಬಿಟ್ಟಿದೆ ಅಂತ ಹೇಳಿದರು.

ಸುದ್ದಿ ಮಾಧ್ಯಮವೊಂದರ ಜೊತೆ ಮಾತಾಡಿರುವ ಅಲ್ಸೈದಿ, ‘ಬಾಗಿಲು ತೆರೆದಿದ್ದುಕ್ಕೆ ಥ್ಯಾಂಕ್ಸ್ ಹೇಳದ ಕಾರಣ ಇಷ್ಟೆಲ್ಲ ನಡೆಯಿತು’ ಎಂದು ಹೇಳಿದ್ದಾನೆ.

’ನಾನು ಬಾಗಿಲು ತೆರೆದಿದ್ದಕ್ಕೆ ನೀನ್ಯಾಕೆ ಥ್ಯಾಂಕ್ಸ್ ಹೇಳಲಿಲ್ಲ, ಎಂದು ತಿವಿಸಿಕೊಂಡ ವ್ಯಕ್ತಿ ಕೇಳಿದ,’ ಎಂದು ಅಲ್ಸೈದಿ ಹೇಳಿದ್ದಾನೆ.

ಅವರ ನಡೆಯುತ್ತಿದ್ದ ಜಗಳ ಬಿಡಿಸಿ ಶಂಕಿತನಿಂದ ಆಯುಧ ಕಸಿದುಕೊಳ್ಳುವ ನನ್ನ ಪ್ರಯತ್ನ ವಿಫಲವಾಯಿತು, ಅಂತ ಅಂಗಡಿಯ ಉದ್ಯೋಗಿ ಹೇಳಿದ್ದಾನೆ.

ಪೊಲೀಸರು ಶಂಕಿತನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?