AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾರೀಡ್ ಎಟ್ ಫರ್ಸ್ಟ್ ಸೈಟ್ ಖ್ಯಾತಿಯ ಗೆಮ್ಮಾ ರೆಸ್ಟುರಾಂಟ್ ನಲ್ಲೇ ತನ್ನೆದಿರು ಲೈಂಗಿಕ ಕ್ರಿಯೆ ಪ್ರದರ್ಶಿಸಿದ್ದಳು ಅಂತ ಅವರ ಪತಿ ಆರೋಪಿಸಿದ್ದಾರೆ!!

ವಿಷಯವನ್ನು ಗೆಮ್ಮಾ ಪತಿ ಗ್ರೂಮ್ ಮ್ಯಾಟ್ ಚ್ಯಾನೆಲ್ 4 ರ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿ ನಟಿಗೆ ಇರುಸು ಮುರುಸು ಉಂಟಾಗುವಂತೆ ಮಾಡಿದರು. ಆಕೆ ಮಾಡುತ್ತಿದ್ದುದ್ದನ್ನು ನೋಡಿ ಹೇವರಿಕೆ ಉಂಟಾಗಿ ತಾನು ರೆಸ್ಟುರಾಂಟ್ ನಿಂದ ಹೊರ ಹೋದೆ ಎಂದು ಮ್ಯಾಟ್ ಹೇಳಿದ್ದಾರೆ. 

ಮ್ಯಾರೀಡ್ ಎಟ್ ಫರ್ಸ್ಟ್ ಸೈಟ್ ಖ್ಯಾತಿಯ ಗೆಮ್ಮಾ ರೆಸ್ಟುರಾಂಟ್ ನಲ್ಲೇ ತನ್ನೆದಿರು ಲೈಂಗಿಕ ಕ್ರಿಯೆ ಪ್ರದರ್ಶಿಸಿದ್ದಳು ಅಂತ ಅವರ ಪತಿ ಆರೋಪಿಸಿದ್ದಾರೆ!!
ಟಿವಿ ಕಾರ್ಯಕ್ರಮದಲ್ಲಿ ಮ್ಯಾಟ್​ರೊಂದಿಗೆ ಗೆಮ್ಮಾ ರೋಸ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 24, 2022 | 7:51 AM

Share

ಹಾಲಿವುಡ್ ನಟ-ನಟಿಯರ ಖಾಸಗಿ ಜೀವನ ಸುಲಭಕ್ಕೆ ಅರ್ಥವಾಗುವಂಥದಲ್ಲ. ಇಂಗ್ಲಿಷ್ ಚ್ಯಾನಲ್ ಗಳನ್ನು ನೋಡುವ ಹವ್ಯಾಸ ನಿಮಗಿದ್ದರೆ ಮ್ಯಾರೀಡ್ ಎಟ್ ಫರ್ಸ್ಟ್ ಸೈಟ್ (Married At First Night) ಶೀರ್ಷಿಕೆಯ ಟೆಲಿ ಧಾರಾವಾಹಿ ನೋಡಿರುತ್ತೀರಿ. ಇದರಲ್ಲಿ ನಟಿಸಿದ್ದ ಖ್ಯಾತ ನಟಿ ಗೆಮ್ಮಾ ರೋಸ್ (Gemma Rose) ಒಂದು ವಿಚಿತ್ರ ಸ್ಥಿತಿಯಲ್ಲಿ ಸಿಕ್ಕಿಕೊಂಡು ತೊಳಲಾಡುತ್ತಿದ್ದಾರೆ. ವಿಷಯವೇನೆಂದರೆ ರೆಸ್ಟುರಾಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಆಕೆ ತನ್ನೆದುರೇ ಹಸ್ತಮೈಥುನದಲ್ಲಿ ತೊಡಗಿದ್ದಳು ಎಂದು ಅವರ ಪತಿ ಆರೋಪಿಸಿದ್ದಾರೆ.

ವಿಷಯವನ್ನು ಗೆಮ್ಮಾ ಪತಿ ಮ್ಯಾಟ್ ಚ್ಯಾನೆಲ್ 4 ರ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿ ನಟಿಗೆ ಇರುಸು ಮುರುಸು ಉಂಟಾಗುವಂತೆ ಮಾಡಿದರು. ಆಕೆ ಮಾಡುತ್ತಿದ್ದುದ್ದನ್ನು ನೋಡಿ ಹೇವರಿಕೆ ಉಂಟಾಗಿ ತಾನು ರೆಸ್ಟುರಾಂಟ್ ನಿಂದ ಹೊರ ಹೋದೆ ಎಂದು ಮ್ಯಾಟ್ ಹೇಳಿದ್ದಾರೆ.

ಆ ಘಟನೆ ನಂತರ ಮ್ಯಾಟ್​ ಗೆಮ್ಮಾಳ ಲೈಂಗಿಕ ಅಧ್ಯತೆಗಳನ್ನು ಮ್ಯಾಟ್ ಬಹಿರಂಗಪಡಿಸುತ್ತಲೇ ಇದ್ದಾರೆ. ಆದರೆ, ಗೆಮ್ಮಾ ಮಾತ್ರ ರೆಸ್ಟುರಾಂಟ್ ಘಟನೆಯನ್ನು ಸುಮ್ಮನೆ ತಮಾಷೆಗೆ ಮಾಡಿದ್ದು ಅಂತ ಹೇಳುತ್ತಿದ್ದಾರೆ.

ಆದರೆ, ಬುಧವಾರ ರಾತ್ರಿ ದಂಪತಿ ತಮ್ಮ ಸಂಬಂಧ ಕುರಿತು ವಾಗ್ವಾದದಲ್ಲಿ ತೊಡಗಿದ್ದಾಗಲೇ ಮ್ಯಾಟ್ ಈ ಸ್ಪೋಟಕ ವಿಷಯವನ್ನು ಬಹಿರಂಗಗೊಳಿಸಿದ್ದು.

ತಮ್ಮ ಮದುವೆ ದಿನದ ಸಂತೋಷ ಮತ್ತು ರಸಗಳಿಗೆಗಳ ಬಗ್ಗೆ ಕಾರ್ಯಕ್ರಮದಲ್ಲಿ ತಜ್ಞರೊಂದಿಗೆ ಮಾತಾಡುವಾಗ ಗೆಮ್ಮಾ ತಾನವತ್ತು ಆಕಾಶದಲ್ಲಿ ತೇಲಾಡುತ್ತಿದ್ದೆ ಅಂತ ಹೇಳಿ ತಮ್ಮ ಕುಟುಂಬದ ಸದಸ್ಯರು ಸಹ ಆನಂದಸಾಗರದಲ್ಲಿ ಮುಳುಗಿದ್ದರು ಅಂತ ಹೇಳಿದ್ದರು. ಮ್ಯಾಟ್ ಅವರನ್ನು ಕೇಳಿದಾಗ, ‘ನಮ್ಮ ನಡುವಿನ ಸೆಕ್ಸ್ ಕೆಮಿಸ್ಟ್ರಿ ಚೆನ್ನಾಗಿತ್ತು, ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆದೆವು,’ ಎಂದಿದ್ದರು.

ಆದರೆ, ಕೊಂಚ ಹೊತ್ತಿನ ಬಳಿಕ ಅವರು ಹನಿಮೂನ್ ಗೆ ಲಿಸ್ಬನ್ ಗೆ ಹೋದ ಸಂಗತಿಯನ್ನು ಮಾತಾಡಲಾರಂಭಿಸಿದಾಗ ಸಂಭಾಷಣೆಯ ಸ್ವರೂಪ ಬದಲಾಯಿತು. ಅ ಸಮಯದಲ್ಲೇ ಅವರ ಮದುವೆ ಮುರಿದುಬಿತ್ತು ಎಂದು ವರದಿಯಾಗಿದೆ.

ಟಿವಿ ಕಾರ್ಯಕ್ರಮದಲ್ಲಿ ಗೆಮ್ಮಾ ಹೇಳಿದ್ದು ಇದು: ನನ್ನ ನಿಲುವಿಗೆ ನಾನು ಬದ್ಧಳಾಗಬೇಕಿದೆ, ಯಾಕೆಂದರೆ ನಿನ್ನ ನಿಲುವನ್ನು ನಾನು ಅಂಗೀಕರಿಸುವುದು ಸಾಧ್ಯವಿಲ್ಲ. ನಮ್ಮ ಬದುಕಲ್ಲಿ ನಡೆದ ಅನೇಕ ಸಂಗತಿಗಳ ಬಗ್ಗೆ ಯಾವತ್ತೂ ಮಾತಾಡುವ ಪ್ರಯತ್ನ ನಾನು ಮಾಡಿಲ್ಲ. ಅವೆಲ್ಲವನ್ನು ನಾನು ಬಹಿರಂಗಪಡಿಸಲಾರೆ ಅಂತ ನನಗೆ ಗೊತ್ತಿದೆ. ಒಂದು ಪಕ್ಷ ಮಾತಾಡಿದರೆ ನಿನಗೆ ಕೋಪ ಬರುತ್ತೆ ಮತ್ತು ನೀನು ಇಲ್ಲಿಂದ ಎದ್ದು ಹೋಗುವೆ. ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಏನು ಮಾಡಿದರೆ ನಿನಗೆ ಕೋಪ ಬರುತ್ತೆ ಅನ್ನೋದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ.’

‘ಓಕೆ, ಸರಿ, ನಾನು ಮೊದಲ ರಾತ್ರಿ ರೆಸ್ಟುರಾಂಟ್ ನಿಂದ ಯಾಕೆ ಆಚೆ ಹೋದೆ ಅಂತ ನೀನು ಇವರಿಗೆಲ್ಲ ವಿವರಿಬಲ್ಲೆಯಾ?’ ಅಂತ ಮ್ಯಾಟ್ ಕೇಳಿದರು.

ಗೆಮ್ಮಾ ಉತ್ತರಿಸದೆ ಹೋದಾಗ ಮ್ಯಾಟ್ ಹೇಳಿದರು: ‘ನಾನು ಎದ್ದು ಆಚೆ ಹೋಗಿದ್ದು ಯಾಕೆ ಅಂದರೆ, ನೀನು ತಿನ್ನುವ ವಸ್ತುವೊಂದನ್ನು ತೆಗೆದುಕೊಂಡು ಅಸಹ್ಯವಾಗಿ ಹಸ್ತಮೈಥುನದಲ್ಲಿ ತೊಡಗಿದ್ದೆ. ಅದಕ್ಕಾಗೇ ನಾನು ರೆಸ್ಟುರಾಂಟ್ ನಿಂದ ಎದ್ದು ಹೋದೆ.’

ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಹ-ಕಲಾವಿದರು ಮ್ಯಾಟ್ ಹೇಳಿದ್ದು ಕೇಳಿ ದಿಗ್ಭ್ರಮೆಗೊಳಗಾದರು. ತೀವ್ರ ಸ್ವರೂಪದ ಅವಮಾನಕ್ಕೀಡಾಗಿದ್ದ ಗೆಮ್ಮಾ, ನಾನು ಹಾಗೆ ನಾನು ಮಾಡಿದ್ದು ತಮಾಷೆಗೆ, ಅದು ನನ್ನ ‘ಹಾಸ್ಯಪ್ರಜ್ಞೆ’ ಅಂತ ಹೇಳುತ್ತಲೇ ಇದ್ದರು.

ಈ ಸಂವಾದ ಕೇಳಿಸಿಕೊಂಡ ವೀಕ್ಷಕರು ಸಹ ಮಾತು ಹೊರಡದಂತಾಗಿ ಟ್ವಟರ್ ನಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಒಬ್ಬರು ತಮ್ಮ ಟ್ವೀಟ್ ನಲ್ಲಿ ‘ನಿಮ್ಮ ‘ಹಾಸ್ಯಪ್ರಜ್ಞೆ’ ಕಿರಿಕಿರಿ ಉಂಟು ಮಾಡುವಂಥದ್ದು, ಗೆಮ್ಮಾ,’ ಅಂತ ಹೇಳಿದ್ದಾರೆ.

ಮತ್ತೊಬ್ಬರು, ‘ಮ್ಯಾಟ್ ಹೇಳಿದ್ದೇನು? ಗೆಮ್ಮಾ ಊಟ ಮಾಡುವಾಗ ಹಸ್ತಮೈಥುನದಲ್ಲಿ  ತೊಡಗಿದ್ದರೆ?’ ಅಂತ ಕಾಮೆಂಟ್ ಮಾಡಿದ್ದಾರೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್