AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ವದಂತಿಗಳ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡ ತಾಲಿಬಾನ್ ಮುಖ್ಯಸ್ಥ ಹೈಬತುಲ್ಲಾ ಅಖುಂಡಜಾದ

Haibatullah Akhundzada ಶನಿವಾರ ಕಂದಹಾರ್‌ನಲ್ಲಿರುವ ಧಾರ್ಮಿಕ ಶಾಲೆಯಾದ ಜಾಮಿಯಾ ದಾರುಲ್ ಅಲೂಮ್ ಹಕಿಮಿಯಾಗೆ ಸರ್ವೋಚ್ಚ ನಾಯಕ ಭೇಟಿ ನೀಡಿದ್ದರು ಎಂದು ಅಖುಂಡ್‌ಜಾದಾ ಅವರೊಂದಿಗೆ ಹಾಜರಿದ್ದ ಹಿರಿಯ ತಾಲಿಬಾನ್ ನಾಯಕ ರಾಯಿಟರ್ಸ್‌ಗೆ ತಿಳಿಸಿದರು.

ಸಾವಿನ ವದಂತಿಗಳ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡ ತಾಲಿಬಾನ್ ಮುಖ್ಯಸ್ಥ ಹೈಬತುಲ್ಲಾ ಅಖುಂಡಜಾದ
ಹೈಬತುಲ್ಲಾ ಅಖುಂಡಜಾದ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 31, 2021 | 3:01 PM

ಕಾಬೂಲ್: ತಾಲಿಬಾನ್‌ನ ಏಕಾಂಗಿ ಸರ್ವೋಚ್ಚ ನಾಯಕ, ಹೈಬತುಲ್ಲಾ ಅಖುಂಡಜಾದ (Haibatullah Akhundzada)  ದಕ್ಷಿಣ ನಗರವಾದ ಕಂದಹಾರ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ ಎಂದು ತಾಲಿಬಾನ್ ಮೂಲಗಳು ಭಾನುವಾರ ತಿಳಿಸಿದ್ದು, ಅವರ ಸಾವಿನ ವ್ಯಾಪಕ ವದಂತಿಗಳನ್ನು ಸುಳ್ಳು ಮಾಡಿದೆ. ನಿಷ್ಠಾವಂತ ನಾಯಕ ಅಥವಾ ಅಮೀರ್ ಉಲ್ ಮೊಮಿನೀನ್ ಎಂದು ಕರೆಯಲ್ಪಡುವ ಅಖುಂಡಜಾದ, ತಾಲಿಬಾನ್ ಆಗಸ್ಟ್ ನಲ್ಲಿ ದೇಶವನ್ನು ವಶಪಡಿಸಿಕೊಂಡ ನಂತರವೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಇದು ಊಹಾಪೋಹಗಳಿಗೆ ಕಾರಣವಾಗಿತ್ತು. ಶನಿವಾರ ಕಂದಹಾರ್‌ನಲ್ಲಿರುವ ಧಾರ್ಮಿಕ ಶಾಲೆಯಾದ ಜಾಮಿಯಾ ದಾರುಲ್ ಅಲೂಮ್ ಹಕಿಮಿಯಾಗೆ ಸರ್ವೋಚ್ಚ ನಾಯಕ  ಅಖುಂಡಜಾದ ಭೇಟಿ ನೀಡಿದ್ದರು ಎಂದು  ಅವರೊಂದಿಗೆ ಹಾಜರಿದ್ದ ಹಿರಿಯ ತಾಲಿಬಾನ್ ನಾಯಕ ರಾಯಿಟರ್ಸ್‌ಗೆ ತಿಳಿಸಿದರು.

ಯುಎಸ್ ನೇತೃತ್ವದ ಪಡೆಗಳು ಹಿಂತೆಗೆದುಕೊಂಡ ನಂತರ ಸೆಪ್ಟೆಂಬರ್‌ನಲ್ಲಿ ತಾಲಿಬಾನಿಗಳು ತನ್ನ ಮಧ್ಯಂತರ ಸರ್ಕಾರವನ್ನು ಅನಾವರಣಗೊಳಿಸುತ್ತಿದ್ದಂತೆ, ನಿಗೂಢ ಅಖುಂಡಜಾದ 2016 ರಿಂದ ಸರ್ವೋಚ್ಚ ನಾಯಕನ ಪಾತ್ರವನ್ನು ಉಳಿಸಿಕೊಂಡರು. ಇವರಿಗೆ ಗುಂಪಿನ ರಾಜಕೀಯ, ಧಾರ್ಮಿಕ ಮತ್ತು ಮಿಲಿಟರಿ ವ್ಯವಹಾರಗಳ ಮೇಲಿನ ಅಂತಿಮ ಅಧಿಕಾರವಿತ್ತು.

ಕೆಲವು ಅಧಿಕಾರಿಗಳ ಪ್ರಕಾರ ಅಖುಂಡಜಾದ ಅವರು ಈ ಹಿಂದೆ ಸಾರ್ವಜನಿಕವಾಗಿ ಪ್ರಕಟವಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮೇ 2016 ರಲ್ಲಿ ತಾಲಿಬಾನ್ ಟ್ವಿಟರ್ ಫೀಡ್‌ನಲ್ಲಿ ಪೋಸ್ಟ್ ಮಾಡಿದ ದಿನಾಂಕವಿಲ್ಲದ ಚಿತ್ರ ಮಾತ್ರ ರಾಯಿಟರ್ಸ್ ಅವರ ಬಗ್ಗೆ ಪರಿಶೀಲಿಸಲು ಸಾಧ್ಯವಾಯಿತು. ಈ ಹಿಂದೆ, ತಾಲಿಬಾನ್ ತಮ್ಮ ಸಂಸ್ಥಾಪಕ ಮತ್ತು ಮೂಲ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಸಾವನ್ನು ವರ್ಷಗಳವರೆಗೆ ದೃಢಪಡಿಸಿರಲಿಲ್ಲ.

ಇದನ್ನೂ ಓದಿ: 2022ರ ಅಂತ್ಯದ ಹೊತ್ತಿಗೆ 5ಬಿಲಿಯನ್​ ಡೋಸ್​ ಕೊರೊನಾ ಲಸಿಕೆ ಉತ್ಪಾದನೆ: ಜಿ20 ನಾಯಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್