AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅಫ್ಘಾನ್​ ಹೋರಾಟಗಾರರು; ಪರ್ಯಾಯ ಸರ್ಕಾರ ಘೋಷಣೆಗೆ ಸಿದ್ಧತೆ

ಈ ತಾಲಿಬಾನಿಗಳ ಸರ್ಕಾರಕ್ಕೆ ವಿಶ್ವಸಂಸ್ಥೆ, ಸಾರ್ಕ್ ಸೇರಿ ಯಾವುದೇ ಅಂತಾರಾಷ್ಟ್ರೀಯ ಸಂಘಟನೆಗಳು ಸಹಕಾರ ನೀಡಬಾರದು ಎಂದು ಸ್ಥಳೀಯ ಪ್ರತಿರೋಧ ಪಡೆ ಆಗ್ರಹಿಸಿದೆ.

ತಾಲಿಬಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅಫ್ಘಾನ್​ ಹೋರಾಟಗಾರರು; ಪರ್ಯಾಯ ಸರ್ಕಾರ ಘೋಷಣೆಗೆ ಸಿದ್ಧತೆ
ಸ್ಥಳೀಯ ಪ್ರತಿರೋಧಕ ಪಡೆಯ ಸಿಬ್ಬಂದಿ
TV9 Web
| Edited By: |

Updated on:Sep 08, 2021 | 4:27 PM

Share

ನಾವೀಗ ಇಡೀ ಅಫ್ಘಾನಿಸ್ತಾನ (Afghanistan)ವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿರುವ ತಾಲಿಬಾನಿ (Taliban)ಗಳು ನೂತನ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. ಪ್ರಧಾನಿ ಅಭ್ಯರ್ಥಿಯನ್ನೂ ಘೋಷಿಸಿದ್ದಾರೆ. ಆದರೆ ಇತ್ತ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧಕ ಪಡೆಯಾದ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್​ (NRF) ಮತ್ತೆ ತಿರುಗಿಬಿದ್ದಿದೆ. ತಾಲಿಬಾನಿಗಳ ಸರ್ಕಾರ ಕಾನೂನು ಬಾಹಿರವಾಗಿದ್ದಾಗಿದೆ. ಅದನ್ನು ನಾವು ಒಪ್ಪೋದಿಲ್ಲ. ತಾಲಿಬಾನ್​ ಸರ್ಕಾರಕ್ಕೆ ಸಮಾನಾಂತರವಾಗಿ ನಾವು ಮತ್ತೊಂದು ಸರ್ಕಾರವನ್ನು ರಚಿಸುತ್ತೇವೆ ಎಂದು ಎನ್​ಆರ್​ಎಫ್​ನ ಮುಖಂಡರಲ್ಲಿ ಒಬ್ಬರಾದ ಅಹ್ಮದ್ ಮಸೂದ್ (Ahmad Masoud)​ ತಿಳಿಸಿದ್ದಾರೆ. ಕೆಲವು ರಾಜಕಾರಣಿಗಳ ಜತೆ ಮಾತುಕತೆ, ಸಮಾಲೋಚನೆ ಬಳಿಕ ನಾವು ಹೊಸ ಸರ್ಕಾರ ಘೋಷಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ನಾವು ಪರಿವರ್ತನೆ, ಪ್ರಜಾಪ್ರಭುತ್ವ ಮತ್ತು ಕಾನೂನು ಬದ್ಧ ಸರ್ಕಾರ ರಚನೆ ಮಾಡುತ್ತೇವೆ. ನಾವು ಜನರ ಓಟುಗಳನ್ನು ಪಡೆದು, ಅಂತಾರಾಷ್ಟ್ರೀಯ ಸಮುದಾಯ ಒಪ್ಪಿ, ಸ್ವೀಕರಿಸುವಂಥ ಪರ್ಯಾಯ ಸರ್ಕಾರ ರಚಿಸುತ್ತೇವೆ’ ಎಂದು ರೆಸಿಸ್ಟೆನ್ಸ್​ ಪಡೆ ಹೇಳಿದ್ದಾಗಿ ವರದಿಯಾಗಿದೆ.  ಹಾಗೇ, ತಾಲಿಬಾನಿಗಳ ಕಾನೂನು ಬಾಹಿರ ಸರ್ಕಾರ ಅಫ್ಘಾನ್​ ಜನರ ವಿರುದ್ಧ ದ್ವೇಷ ಸಾದಿಸುವ ಗುಂಪಿನ ಸರ್ಕಾರ. ಇದು ಅಫ್ಘಾನಿಸ್ತಾನವಷ್ಟೇ ಅಲ್ಲ, ಇಡೀ ಜಗತ್ತಿನ ಸ್ಥಿರತೆ ಮತ್ತು ಭದ್ರತೆಗೆ ಮಾರಕವಾಗಲಿದೆ’ ಎಂದೂ ಎನ್​ಆರ್​ಎಫ್​ ಪಡೆಗಳು ಪ್ರತಿಪಾದಿಸಿವೆ. ಇನ್ನು ಈ ತಾಲಿಬಾನಿಗಳ ಸರ್ಕಾರಕ್ಕೆ ವಿಶ್ವಸಂಸ್ಥೆ, ಸಾರ್ಕ್ ಸೇರಿ ಯಾವುದೇ ಅಂತಾರಾಷ್ಟ್ರೀಯ ಸಂಘಟನೆಗಳು ಸಹಕಾರ ನೀಡಬಾರದು ಎಂದೂ ಕರೆ ಕೊಟ್ಟಿದ್ದಾರೆ.

ಈಗಾಗಲೇ ಸರ್ಕಾರ ರಚನೆಯ ಬಗ್ಗೆ ಘೋಷಿಸಿರುವ ತಾಲಿಬಾನಿಗಳು ಮೊಹಮ್ಮದ್ ಹಸನ್ ಅಕುಂದ್ ಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ.  ಮುಲ್ಲಾ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಮಂತ್ರಿಯಾಗಲಿದ್ದಾರೆ. ಅಬಾಸ್ ಸ್ಟಾನಿಕ್​ಜೈ ವಿದೇಶಾಂಗ ಖಾತೆಯ ಉಪ ಸಚಿವರಾಗಲಿದ್ದಾರೆ. ಅಮೀರ್ ಖಾನ್ ಮುತಾಖಿ ಅಫ್ಘಾನ್​ನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:  Shubhman Gill: ಟೀಂ ಇಂಡಿಯಾದ ಭವಿಷ್ಯದ ನಾಯಕ, ವಿಶ್ವ ವಿಜೇತ ಆಟಗಾರ ಶುಭ್​ಮನ್ ಗಿಲ್​ಗೆ ಇಂದು ಜನ್ಮದಿನ

ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್

(Resistance group will declare a parallel government against Taliban)

Published On - 3:54 pm, Wed, 8 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ