AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಸಂಘರ್ಷದ ನಡುವೆ ಚೀನಾ ಸೇನೆಯಲ್ಲಿ ಮಹತ್ವದ ಬದಲಾವಣೆ; ಕಮಾಂಡರ್​ ಬದಲಾಗಿದ್ದೇಕೆ?

ಚೀನಾ ಮಾಧ್ಯಮಗಳ ಪ್ರಕಾರ, ಕ್ಸಿ ಒಟ್ಟು ನಾಲ್ವರು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ್ದಾರೆ. ಅದರಲ್ಲಿ ಜನರಲ್​ ಝಾಂಗ್​ರಿಗೆ ಕಮಾಂಡರ್​ ಹುದ್ದೆ ನೀಡಲಾಗಿದೆ.

ಗಡಿ ಸಂಘರ್ಷದ ನಡುವೆ ಚೀನಾ ಸೇನೆಯಲ್ಲಿ ಮಹತ್ವದ ಬದಲಾವಣೆ; ಕಮಾಂಡರ್​ ಬದಲಾಗಿದ್ದೇಕೆ?
ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​
Lakshmi Hegde
|

Updated on:Dec 20, 2020 | 6:07 PM

Share

ಬೀಜಿಂಗ್​: ಪೂರ್ವ ಲಡಾಖ್​ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ಸಂಘರ್ಷದ ಕಿಡಿ ಹಾರುತ್ತಲೇ ಇದೆ. ಗಡಿಯಲ್ಲಿ ಚೀನಾ ತನ್ನ ಸೇನೆಗೆ ಬಲ ತುಂಬಲು ಚೀನಾ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತವೂ ಪ್ರತಿನಡೆಯ ಮೂಲಕ ತನ್ನ ನಿಯೋಜನೆ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಭಾರತ-ಚೀನಾ ಗಡಿಯ ಮೇಲ್ವಿಚಾರಣೆ ಮಾಡುತ್ತಿರುವ ಚೀನಾ ಪೀಪಲ್ಸ್​ ಲಿಬರೇಷನ್​ ಆರ್ಮಿಯ ವೆಸ್ಟರ್ನ್​ ಥಿಯೇಟರ್​ ಕಮಾಂಡ್​ಗೆ ಕಮಾಂಡರ್​ ಆಗಿ ಹೊಸ ಜನರಲ್​​ ಒಬ್ಬರನ್ನು ಷಿ ಜಿನ್​ಪಿಂಗ್​ ನೇಮಕ ಮಾಡಿದ್ದಾರೆ. ಕೇಂದ್ರ ಮಿಲಿಟರಿ ಆಯೋಗದ (CMC) ಮಖ್ಯಸ್ಥರೂ ಆಗಿರುವ ಷಿ ಜಿನ್​ಪಿಂಗ್​, ಭಾರತ-ಚೀನಾ ಗಡಿ ವಿವಾದದ ನಡುವೆ ಜನರಲ್​ ಜಾಂಗ್ ಕ್ಸುಡಾಂಗ್​​ರನ್ನು ಕಮಾಂಡರ್​ ಆಗಿ ನೇಮಕ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಚೀನಾ ಮಾಧ್ಯಮಗಳ ಪ್ರಕಾರ, ಷಿ ಒಟ್ಟು ನಾಲ್ವರು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ್ದಾರೆ. ಅದರಲ್ಲಿ ಜನರಲ್​ ಝಾಂಗ್​ರಿಗೆ ಕಮಾಂಡರ್​ ಹುದ್ದೆ ನೀಡಲಾಗಿದೆ.

ಮೇ ತಿಂಗಳಿಂದಲೂ ಪೂರ್ವ ಲಡಾಖ್​ನಲ್ಲಿ ಎರಡೂ ಸೇನೆಗಳ ಮಧ್ಯೆ ಪದೇಪದೆ ಸಂಘರ್ಷ ಏರ್ಪಡುತ್ತಿದೆ. ಭಾರತ-ಚೀನಾ ರಾಜತಾಂತ್ರಿಕ ಮಾತುಕತೆಯ ನಡುವೆಯೂ ಸೇನಾ ಸಂಘರ್ಷಗಳು ಕಡಿಮೆಯಾಗಿಲ್ಲ. ಇಷ್ಟು ದಿನ ಝಾವೋ ಜುಂಗ್ಕಿ ವೆಸ್ಟರ್ನ್​ ಥಿಯೇಟರ್​ ಕಮಾಂಡರ್​ ಆಗಿದ್ದರು. 2017ರಲ್ಲಿ ನಡೆದ ಡೋಕ್ಲಾಮ್​ ಸಂಘರ್ಷದ ವೇಳೆ ಇವರು ನೇಮಕರಾಗಿದ್ದರು. ಇದೀಗ ಝಾವೋ ಸ್ಥಾನಕ್ಕೆ ಜಾಂಗ್ ಕ್ಸುಡಾಂಗ್ ಆಗಮಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ಎನಿಸಿದೆ.

ನೇಪಾಳದಲ್ಲಿ ಹಠಾತ್ ರಾಜಕೀಯ ಬೆಳವಣಿಗೆ: ಸಂಸತ್ತು ವಿಸರ್ಜಿಸಿ ಚುನಾವಣೆ ಘೋಷಿಸಿದ ರಾಷ್ಟ್ರಪತಿ

Published On - 5:45 pm, Sun, 20 December 20

Follow Us
Lakshmi Hegde
Lakshmi Hegde
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ