AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ
ಪಾಕಿಸ್ತಾನದಲ್ಲಿ ಗಲಾಟೆ
TV9 Web
| Edited By: |

Updated on:Apr 13, 2022 | 6:07 PM

Share

ಪಾಕಿಸ್ತಾನ ತೆಹ್ರೀಕ್​-ಇ ಇನ್ಸಾಫ್​ (ಪಿಟಿಐ) ಪಕ್ಷದವರೇ ಆಗಿದ್ದರೂ ಅದರೊಂದಿಗೆ ಭಿನ್ನಮತ ಹೊಂದಿರುವ, ಸದಾ ಪಿಟಿಐನ್ನು ಟೀಕಿಸುವ ನಾಯಕ ನೂರ್ ಅಲಾಮ್ ಖಾನ್​, ನಿನ್ನೆ (ಮಂಗಳವಾರ) ಇಸ್ಲಮಾಬಾದ್​ನ ಖಾಸಗಿ ಹೋಟೆಲ್​ವೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಜತೆ ಜಗಳವಾಡಿದ್ದಾರೆ. ಹೋಟೆಲ್​ನಲ್ಲಿ ವೃದ್ಧ ನಾಗರಿಕ, ಅಲಾಮ್​ ಖಾನ್​ರನ್ನು ಪಕ್ಷಾಂತರಿ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಿರಂತರವಾಗಿ ಅವರ ವಿರುದ್ಧ ದೋಷಾರಾಪ ಮಾಡುತ್ತಲೇ ಇದ್ದರು. ಇದರಿಂದ ಕಿರಿಕಿರಿಗೊಂಡ ನೂರ್ ಅಲಾಮ್ ಖಾನ್ ಹಿರಿಯ ನಾಗರಿಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.  ಜಿಯೋ ನ್ಯೂಸ್​​ನ ವರದಿಗಾರರೊಬ್ಬರು ಈ ವಿಡಿಯೋವನ್ನೂ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಈ ಹಿರಿಯ ನಾಗರಿಕ ಕೂಡ ಬಂದಿದ್ದರು. ಇವರು ಪಿಟಿಐ ಪಕ್ಷದ ಕಾರ್ಯಕರ್ತ. ಪಿಪಿಪಿ ಮುಖಂಡರೊಂದಿಗೆ ಅಲಾಮ್​ ಖಾನ್​ರನ್ನು ನೋಡಿದ ಆ ವೃದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಖಾನ್​ ಮತ್ತು ಖೋಖರ್​ಗೆ ಬಾಟಲಿಗಳನ್ನೂ ಎಸೆದಿದ್ದಾರೆ. ಆಗ ಇವರಿಬ್ಬರೂ ಬಂದು ಆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅದಾದ ಮೇಲೆ ಹೋಟೆಲ್​​ನಲ್ಲಿದ್ದ ಪಿಪಿಪಿ ಮತ್ತು ಪಿಟಿಐ ಬೆಂಬಲಿಗರು ಹೊಡೆ

ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವದ ಪರಿಸ್ಥಿತಿ ಇದೆ. ಅಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್​ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಪ್ರತಿಪಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್​ ಮುಖ್ಯಸ್ಥ ಶಹಬಾಜ್ ಷರೀಫ್​ ಅವರನ್ನು ಪ್ರಧಾನಮಂತ್ರಿ ಮಾಡಿದಾಗಿನಿಂದಲ ದೇಶದಲ್ಲಿ ವಿವಿಧೆಡೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಿಪಿಪಿ ಮತ್ತು ಇತರ ಪಕ್ಷಗಳ ನಾಯಕರು, ಇಮ್ರಾನ್ ಖಾನ್ ಕೆಳಗಿಳಿದಿದ್ದಕ್ಕೆ ಸಂಭ್ರಮದ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆಗಾಗ ಈ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತನಿಖೆ ಕೈಗೆತ್ತಿಕೊಂಡ ಆ್ಯಂಟಿ ಟೆರರಿಸಂ ಸೆಲ್

Published On - 6:07 pm, Wed, 13 April 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?