AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ
ಪಾಕಿಸ್ತಾನದಲ್ಲಿ ಗಲಾಟೆ
TV9 Web
| Edited By: |

Updated on:Apr 13, 2022 | 6:07 PM

Share

ಪಾಕಿಸ್ತಾನ ತೆಹ್ರೀಕ್​-ಇ ಇನ್ಸಾಫ್​ (ಪಿಟಿಐ) ಪಕ್ಷದವರೇ ಆಗಿದ್ದರೂ ಅದರೊಂದಿಗೆ ಭಿನ್ನಮತ ಹೊಂದಿರುವ, ಸದಾ ಪಿಟಿಐನ್ನು ಟೀಕಿಸುವ ನಾಯಕ ನೂರ್ ಅಲಾಮ್ ಖಾನ್​, ನಿನ್ನೆ (ಮಂಗಳವಾರ) ಇಸ್ಲಮಾಬಾದ್​ನ ಖಾಸಗಿ ಹೋಟೆಲ್​ವೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಜತೆ ಜಗಳವಾಡಿದ್ದಾರೆ. ಹೋಟೆಲ್​ನಲ್ಲಿ ವೃದ್ಧ ನಾಗರಿಕ, ಅಲಾಮ್​ ಖಾನ್​ರನ್ನು ಪಕ್ಷಾಂತರಿ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಿರಂತರವಾಗಿ ಅವರ ವಿರುದ್ಧ ದೋಷಾರಾಪ ಮಾಡುತ್ತಲೇ ಇದ್ದರು. ಇದರಿಂದ ಕಿರಿಕಿರಿಗೊಂಡ ನೂರ್ ಅಲಾಮ್ ಖಾನ್ ಹಿರಿಯ ನಾಗರಿಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.  ಜಿಯೋ ನ್ಯೂಸ್​​ನ ವರದಿಗಾರರೊಬ್ಬರು ಈ ವಿಡಿಯೋವನ್ನೂ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಈ ಹಿರಿಯ ನಾಗರಿಕ ಕೂಡ ಬಂದಿದ್ದರು. ಇವರು ಪಿಟಿಐ ಪಕ್ಷದ ಕಾರ್ಯಕರ್ತ. ಪಿಪಿಪಿ ಮುಖಂಡರೊಂದಿಗೆ ಅಲಾಮ್​ ಖಾನ್​ರನ್ನು ನೋಡಿದ ಆ ವೃದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಖಾನ್​ ಮತ್ತು ಖೋಖರ್​ಗೆ ಬಾಟಲಿಗಳನ್ನೂ ಎಸೆದಿದ್ದಾರೆ. ಆಗ ಇವರಿಬ್ಬರೂ ಬಂದು ಆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅದಾದ ಮೇಲೆ ಹೋಟೆಲ್​​ನಲ್ಲಿದ್ದ ಪಿಪಿಪಿ ಮತ್ತು ಪಿಟಿಐ ಬೆಂಬಲಿಗರು ಹೊಡೆ

ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವದ ಪರಿಸ್ಥಿತಿ ಇದೆ. ಅಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್​ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಪ್ರತಿಪಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್​ ಮುಖ್ಯಸ್ಥ ಶಹಬಾಜ್ ಷರೀಫ್​ ಅವರನ್ನು ಪ್ರಧಾನಮಂತ್ರಿ ಮಾಡಿದಾಗಿನಿಂದಲ ದೇಶದಲ್ಲಿ ವಿವಿಧೆಡೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಿಪಿಪಿ ಮತ್ತು ಇತರ ಪಕ್ಷಗಳ ನಾಯಕರು, ಇಮ್ರಾನ್ ಖಾನ್ ಕೆಳಗಿಳಿದಿದ್ದಕ್ಕೆ ಸಂಭ್ರಮದ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆಗಾಗ ಈ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತನಿಖೆ ಕೈಗೆತ್ತಿಕೊಂಡ ಆ್ಯಂಟಿ ಟೆರರಿಸಂ ಸೆಲ್

Published On - 6:07 pm, Wed, 13 April 22

Follow Us
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!