Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ
ಪಾಕಿಸ್ತಾನದಲ್ಲಿ ಗಲಾಟೆ
Follow us
TV9 Web
| Updated By: Lakshmi Hegde

Updated on:Apr 13, 2022 | 6:07 PM

ಪಾಕಿಸ್ತಾನ ತೆಹ್ರೀಕ್​-ಇ ಇನ್ಸಾಫ್​ (ಪಿಟಿಐ) ಪಕ್ಷದವರೇ ಆಗಿದ್ದರೂ ಅದರೊಂದಿಗೆ ಭಿನ್ನಮತ ಹೊಂದಿರುವ, ಸದಾ ಪಿಟಿಐನ್ನು ಟೀಕಿಸುವ ನಾಯಕ ನೂರ್ ಅಲಾಮ್ ಖಾನ್​, ನಿನ್ನೆ (ಮಂಗಳವಾರ) ಇಸ್ಲಮಾಬಾದ್​ನ ಖಾಸಗಿ ಹೋಟೆಲ್​ವೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಜತೆ ಜಗಳವಾಡಿದ್ದಾರೆ. ಹೋಟೆಲ್​ನಲ್ಲಿ ವೃದ್ಧ ನಾಗರಿಕ, ಅಲಾಮ್​ ಖಾನ್​ರನ್ನು ಪಕ್ಷಾಂತರಿ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಿರಂತರವಾಗಿ ಅವರ ವಿರುದ್ಧ ದೋಷಾರಾಪ ಮಾಡುತ್ತಲೇ ಇದ್ದರು. ಇದರಿಂದ ಕಿರಿಕಿರಿಗೊಂಡ ನೂರ್ ಅಲಾಮ್ ಖಾನ್ ಹಿರಿಯ ನಾಗರಿಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.  ಜಿಯೋ ನ್ಯೂಸ್​​ನ ವರದಿಗಾರರೊಬ್ಬರು ಈ ವಿಡಿಯೋವನ್ನೂ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಈ ಹಿರಿಯ ನಾಗರಿಕ ಕೂಡ ಬಂದಿದ್ದರು. ಇವರು ಪಿಟಿಐ ಪಕ್ಷದ ಕಾರ್ಯಕರ್ತ. ಪಿಪಿಪಿ ಮುಖಂಡರೊಂದಿಗೆ ಅಲಾಮ್​ ಖಾನ್​ರನ್ನು ನೋಡಿದ ಆ ವೃದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಖಾನ್​ ಮತ್ತು ಖೋಖರ್​ಗೆ ಬಾಟಲಿಗಳನ್ನೂ ಎಸೆದಿದ್ದಾರೆ. ಆಗ ಇವರಿಬ್ಬರೂ ಬಂದು ಆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅದಾದ ಮೇಲೆ ಹೋಟೆಲ್​​ನಲ್ಲಿದ್ದ ಪಿಪಿಪಿ ಮತ್ತು ಪಿಟಿಐ ಬೆಂಬಲಿಗರು ಹೊಡೆ

ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವದ ಪರಿಸ್ಥಿತಿ ಇದೆ. ಅಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್​ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಪ್ರತಿಪಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್​ ಮುಖ್ಯಸ್ಥ ಶಹಬಾಜ್ ಷರೀಫ್​ ಅವರನ್ನು ಪ್ರಧಾನಮಂತ್ರಿ ಮಾಡಿದಾಗಿನಿಂದಲ ದೇಶದಲ್ಲಿ ವಿವಿಧೆಡೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಿಪಿಪಿ ಮತ್ತು ಇತರ ಪಕ್ಷಗಳ ನಾಯಕರು, ಇಮ್ರಾನ್ ಖಾನ್ ಕೆಳಗಿಳಿದಿದ್ದಕ್ಕೆ ಸಂಭ್ರಮದ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆಗಾಗ ಈ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತನಿಖೆ ಕೈಗೆತ್ತಿಕೊಂಡ ಆ್ಯಂಟಿ ಟೆರರಿಸಂ ಸೆಲ್

Published On - 6:07 pm, Wed, 13 April 22

ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು