AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಡ್ಡಿ ಹಾಕಿಕೊಂಡೇ ತಾಳಿಕಟ್ಟಿದ ವರ; ತನ್ನ ಪತಿಯೇಕೆ ಬಟ್ಟೆ ಧರಿಸಿಲ್ಲ ಎಂಬುದಕ್ಕೆ ಕಾರಣ ಹೇಳಿದ ವಧು

ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದು. ವಧು ಕಪ್ಪನೆಯ ಉಡುಪು ಧರಿಸಿ, ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡು ಕುಳಿತಿದ್ದರೆ, ಅವರ ಪಕ್ಕ ವರ ಕೆಂಪು ಚಡ್ಡಿ ಹಾಕಿಕೊಂಡು, ಶರ್ಟ್ ಇಲ್ಲದೆ, ಯಾವುದೇ ಅಲಂಕಾರವೂ ಇಲ್ಲದೆ ಕುಳಿತಿದ್ದಾರೆ.

ಚಡ್ಡಿ ಹಾಕಿಕೊಂಡೇ ತಾಳಿಕಟ್ಟಿದ ವರ; ತನ್ನ ಪತಿಯೇಕೆ ಬಟ್ಟೆ ಧರಿಸಿಲ್ಲ ಎಂಬುದಕ್ಕೆ ಕಾರಣ ಹೇಳಿದ ವಧು
ಜಕಾರ್ತಾದಲ್ಲಿ ನಡೆದ ವಿವಾಹ
Follow us
Lakshmi Hegde
|

Updated on: Apr 08, 2021 | 12:29 PM

ಗಂಡಾಗಲಿ, ಹೆಣ್ಣಾಗಲಿ ತಮ್ಮ ಮದುವೆ ಬಗ್ಗೆ ತುಂಬ ಕನಸು ಹೊಂದಿರುತ್ತಾರೆ. ಈ ದಿನವನ್ನು ವಿಶೇಷ ದಿನವೆಂದೇ ಪರಿಗಣಿಸುತ್ತಾರೆ. ಹಾಗೇ ಅಂದು ವಧು ಮತ್ತು ವರ ಇಬ್ಬರೂ ಅದ್ದೂರಿಯಾದ, ಚೆಂದನೆಯ ಉಡುಪುಗಳನ್ನು ಧರಿಸುತ್ತಾರೆ. ವಿಶೇಷವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗುತ್ತಾರೆ. ಆದರೆ ಈ ಮದುವೆ ತುಸು ವಿಭಿನ್ನವಾಗಿ ನಡೆದಿದೆ. ವಧು ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡಿದ್ದರೂ ವರನ ಮೈಮೇಲೆ ಕೆಂಪು ಬರ್ಮುಡಾ ಹೊರತು ಪಡಿಸಿ ಬೇರೇನೂ ಇಲ್ಲ. ಈ ಫೋಟೋ ಈಗ ತುಂಬ ವೈರಲ್ ಆಗುತ್ತಿದೆ.

ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದು. ವಧು ಕಪ್ಪನೆಯ ಉಡುಪು ಧರಿಸಿ, ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡು ಕುಳಿತಿದ್ದರೆ, ಅವರ ಪಕ್ಕ ವರ ಕೆಂಪು ಚಡ್ಡಿ ಹಾಕಿಕೊಂಡು, ಶರ್ಟ್ ಇಲ್ಲದೆ, ಯಾವುದೇ ಅಲಂಕಾರವೂ ಇಲ್ಲದೆ ಕುಳಿತಿದ್ದಾರೆ. ಅವರ ಕೈಯಿಗೆ ಏನೋ ಗಾಯವಾದಂತೆ ಕಾಣುತ್ತಿದೆ. ಕುಟುಂಬದವರು, ಆಪ್ತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಆದರೆ ಯಾಕೆ ಹೀಗೆ ಎಂಬ ಪ್ರಶ್ನೆಗೆ ವಧು ಎಲಿಂದಾ ಡ್ವಿ ಕ್ರಿಸ್ಟಿಯಾನಿ ಸ್ಪಷ್ಟನೆ ನೀಡಿದ್ದಾರೆ. ಇಂಡೋನೇಷ್ಯಾದ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಮದುವೆಗೆ ಮೂರು ದಿನ ಮೊದಲು ನನ್ನ ಪತಿ ಸುಪ್ರಾಪ್ತೋ ಪೆಟ್ರೋಲ್​ ತರಲು ಹೋಗಿದ್ದಾಗ ಅಪಘಾತ ಆಗಿತ್ತು. ಬೈಕ್​​ನಿಂದ ಬಿದ್ದ ಪರಿಣಾಮ ಪ್ರಜ್ಞೆಯೇ ಹೊರಟುಹೋಗಿತ್ತು. ಭುಜಕ್ಕೆ ಗಾಯವಾದ ಪರಿಣಾಮ ಸರ್ಜರಿ ಮಾಡಲಾಗಿದೆ. ಹಾಗಾಗಿ ಉಡುಪು ಧರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಮದುವೆ ದಿನ ಬರ್ಮುಡಾ ಮಾತ್ರ ಧರಿಸಿದ್ದರು ಎಂದು ಹೇಳಿದ್ದಾರೆ. ಈ ಫೋಟೋಗಳು ಮಾತ್ರ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ನೆಟ್ಟಿಗರು ಕೆಲವರು ಜೋಕ್ ಮಾಡಿದ್ದರೆ, ಇನ್ನೂ ಹಲವರು ಜೋಡಿಯನ್ನು ಹೊಗಳಿದ್ದಾರೆ.

Jakartha

ಇದನ್ನೂ ಓದಿ: ಹಾವೇರಿ: ಬೆಳಗಾಗುತ್ತಲೆ ಪಾನ್ ಶಾಪ್​ಗೆ ಹಾಜರಾಗುವ ಕೆಂಪು ಮಂಗಗಳು: ಯಾಕೆ ಗೊತ್ತಾ?

ಕುಮಾರಸ್ವಾಮಿ ಬೆಳ್ಳಗಿದ್ದಾರಾ..! ಇರೋದೇ ಕಪ್ಪು ಅಂದ್ರೆ ತಪ್ಪೇನು? ಶಾಸಕ ಜಮೀರ್ ಅಹ್ಮದ್ ಟಾಂಗ್

(Groom Wears Pair of Shorts on His Wedding Day in Jakarta)

ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್