AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಕೇವಲ ಮಿತ್ರರಾಷ್ಟ್ರವಲ್ಲ ಅದೊಂದು ಮಹಾನ್ ಶಕ್ತಿಯಾಗಿದೆ: ಶ್ವೇತಭವನದ ಅಧಿಕಾರಿ

ಅಮೆರಿಕ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೂಡಿಕೆ ಮಾಡಬೇಕಾಗಿದೆ. ತಂತ್ರಜ್ಞಾನ ಮತ್ತು ಇತರ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ನೇರಾ ನೇರ ಜನರ ನಡುವಿನ ಸಂಬಂಧವನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು

ಭಾರತ ಕೇವಲ ಮಿತ್ರರಾಷ್ಟ್ರವಲ್ಲ ಅದೊಂದು ಮಹಾನ್ ಶಕ್ತಿಯಾಗಿದೆ: ಶ್ವೇತಭವನದ ಅಧಿಕಾರಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Dec 09, 2022 | 4:06 PM

Share

ವಾಷಿಂಗ್ಟನ್: ವಿಶಿಷ್ಟವಾದ ಕಾರ್ಯತಂತ್ರದ ಪಾತ್ರವನ್ನು ಹೊಂದಿರುವ ಭಾರತವು ಯುಎಸ್‌ನ (US) ಕೇವಲ ಮಿತ್ರ ರಾಷ್ಟ್ರವಲ್ಲ,ಅದು ಮಹಾನ್ ಶಕ್ತಿಯಾಗಿದೆ ಎಂದು ಶ್ವೇತಭವನದ (White House)ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ 20 ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚು ವೇಗವಾಗಿ “ಆಳವಾದ ಮತ್ತು ಬಲಪಡಿಸುವ” ದ್ವಿಪಕ್ಷೀಯ ಸಂಬಂಧ ಬೇರೆ ಇಲ್ಲ ಎಂದು ಅವರು ಹೇಳಿದ್ದಾರೆ. ಗುರುವಾರ ಇಲ್ಲಿ ನಡೆದ ಆಸ್ಪೆನ್ ಸೆಕ್ಯುರಿಟಿ ಫೋರಂ ಸಭೆಯಲ್ಲಿ ಭಾಗವಹಿಸಿದ್ದಾಗ ಭಾರತದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ವೇತಭವನದ ಏಷ್ಯಾ ಸಂಯೋಜಕ ಕರ್ಟ್ ಕ್ಯಾಂಪ್‌ಬೆಲ್, ತಮ್ಮ ದೃಷ್ಟಿಯಲ್ಲಿ ಭಾರತವು 21 ನೇ ಶತಮಾನದಲ್ಲಿ ಅಮೆರಿಕದ ಜತೆಗಿರುವ ಅತ್ಯಂತ ಪ್ರಮುಖ ದ್ವಿಪಕ್ಷೀಯ ಸಂಬಂಧವಾಗಿದೆ ಎಂದು ಹೇಳಿದರು. ವಾಸ್ತವವೆಂದರೆ, ಕಳೆದ 20 ವರ್ಷಗಳಲ್ಲಿ  ಅಮೆರಿಕ ಮತ್ತು ಭಾರತಕ್ಕಿಂತ ವೇಗವಾಗಿ ಯಾವುದೇ ದ್ವಿಪಕ್ಷೀಯ ಸಂಬಂಧವನ್ನು ಗಾಢವಾಗಿಸುವ ಮತ್ತು ಬಲಪಡಿಸುವ ಬಗ್ಗೆ ನನಗೆ ತಿಳಿದಿಲ್ಲ” ಎಂದು ಅವರು ವಾಷಿಂಗ್ಟನ್ ನಲ್ಲಿ ಸಭಿಕರನ್ನುದ್ದೇಶಿಸಿ ಹೇಳಿದ್ದಾರೆ. ಅಮೆರಿಕ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೂಡಿಕೆ ಮಾಡಬೇಕಾಗಿದೆ. ತಂತ್ರಜ್ಞಾನ ಮತ್ತು ಇತರ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ನೇರಾ ನೇರ ಜನರ ನಡುವಿನ ಸಂಬಂಧವನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಭಾರತವು ವಿಶಿಷ್ಟವಾದ ಕಾರ್ಯತಂತ್ರದ ಪಾತ್ರವನ್ನು ಹೊಂದಿದೆ. ಅದು ಯುನೈಟೆಡ್ ಸ್ಟೇಟ್ಸ್‌ನ ಮಿತ್ರರಾಷ್ಟ್ರವಾಗುವುದಿಲ್ಲ. ಅದು ಸ್ವತಂತ್ರ, ಶಕ್ತಿಯುತ ರಾಜ್ಯವಾಗಬೇಕೆಂಬ ಬಯಕೆಯನ್ನು ಹೊಂದಿದೆ.ಅದು ಮತ್ತೊಂದು ಮಹಾನ್ ಶಕ್ತಿಯಾಗಲಿದೆ. ಆದರೆ ಪ್ರತಿಯೊಂದು ರಂಗದಲ್ಲೂ ನಮ್ಮ ಕಾರ್ಯತಂತ್ರದ ಸಂಬಂಧವು ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ನಂಬಲು ಕಾರಣಗಳಿವೆ ಎಂದು ನಾನು ಭಾವಿಸುತ್ತೇನೆ ” ಎಂದು ಕ್ಯಾಂಪ್‌ಬೆಲ್ ಹೇಳಿದರು.

ಆದಾಗ್ಯೂ ಎರಡೂ ಅಧಿಕಾರಶಾಹಿಗಳಲ್ಲಿ ಪ್ರತಿಬಂಧಗಳಿವೆ, ಅನೇಕ ಸವಾಲುಗಳಿವೆ ಎಂದು ಅವರು ಒಪ್ಪಿಕೊಂಡರು. ಆದರೆ ಇದು ಸ್ವಲ್ಪ ಮಹತ್ವಾಕಾಂಕ್ಷೆಯನ್ನು ಹೊಂದಿರಬೇಕಾದ ಸಂಬಂಧ ಎಂದು ನಾನು ನಂಬುತ್ತೇನೆ. ನಾವು ಒಟ್ಟಾಗಿ ಮಾಡಬಹುದಾದ ಕೆಲಸಗಳನ್ನು ನೋಡಬೇಕು, ಅದು ಬಾಹ್ಯಾಕಾಶದಲ್ಲಿರಲಿ, ಶಿಕ್ಷಣವೇ ಆಗಿರಲಿ, ಹವಾಮಾನದ ಮೇಲಿರಲಿ, ತಂತ್ರಜ್ಞಾನದ ಮೇಲಿರಲಿ ಮತ್ತು ನಿಜವಾಗಿಯೂ ಆ ದಿಕ್ಕಿನಲ್ಲಿ ಸಾಗಬೇಕು. ” ಅವರು ಹೇಳಿದರು.

ನೀವು ಕಳೆದ 20 ವರ್ಷಗಳಿಂದ ನೋಡಿದರೆ ಮತ್ತು ನಮ್ಮ ಎರಡು ಕಡೆಯ ನಡುವಿನ ಅಡೆತಡೆಗಳು ಮತ್ತು ತೊಡಗಿಸಿಕೊಳ್ಳುವಿಕೆಯ ಆಳವನ್ನು ನೋಡಿದರೆ, ಇದು ಗಮನಾರ್ಹವಾಗಿದೆ” ಎಂದು ಅವರು ಹೇಳಿದರು.ಭಾರತ-ಅಮೆರಿಕ ಸಂಬಂಧವು ಕೇವಲ ಚೀನಾದ ಸುತ್ತಲಿನ ಆತಂಕದ ಮೇಲೆ ನಿರ್ಮಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಗಟ್ಟಿಯಾಗಿದೆ. ಅದನ್ನು ನಾವು ನಂಬುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ಕಳೆದ G20 ನಲ್ಲಿ ಅವರ (ಭಾರತದ) ನಾಯಕತ್ವಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದ್ದರಿಂದ, ಪ್ರಮುಖವಾದ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಶ್ರೇಣಿಯಲ್ಲಿ ಭಾರತದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ,” ಜೀನ್-ಪಿಯರ್ ಹೇಳಿದ್ದಾರೆ. ಭಾರತವು ಕಳೆದ ವಾರ ಔಪಚಾರಿಕವಾಗಿ G20 ಅಧ್ಯಕ್ಷತೆ ವಹಿಸಿಕೊಂಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 9 December 22

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?