AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾಕ್​​ನಲ್ಲಿ ಐಸಿಸ್​ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ

Attack on Iraq: ಇರಾಕ್​ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಇದು ಈ ವರ್ಷದ ಅತ್ಯಂತ ಭೀಕರ ದಾಳಿ ಎಂದು ಹೇಳಲಾಗಿದೆ.

ಇರಾಕ್​​ನಲ್ಲಿ ಐಸಿಸ್​ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Sep 05, 2021 | 2:31 PM

Share

ಇರಾಕ್​​ನ ಉತ್ತರದ ಪ್ರದೇಶ ಕಿರ್ಕುಕ್​ ಸಮೀಪದ ಚೆಕ್​ಪಾಯಿಂಟ್​ ಮೇಲೆ ಐಸಿಸ್​ ಉಗ್ರರು (ISIS Group) ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 13 ಪೊಲೀಸರು ಹತರಾಗಿದ್ದಾರೆ ಎಂದು ಇರಾಕ್​ನ ವೈದ್ಯಕೀಯ ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಕಿರ್ಕುಕ್​​ ನಗರದ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿದ್ದಾರೆ. ಇರಾಕ್​ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಈ ದಾಳಿ, ಪ್ರಸಕ್ತ ವರ್ಷದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ದಾಳಿ ಎಂದು ಇರಾಕಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ಕಿರ್ಕುಕ್​ ನಗರದ ದಕ್ಷಿಣದಲ್ಲಿ ಸುಮಾರು 65 ಕಿಮೀ ದೂರದಲ್ಲಿರುವ ಆಲ್​ ರಶದ್​ ಎಂಬ ಪ್ರದೇಶದಲ್ಲಿರುವ ಚೆಕ್​ಪಾಯಿಂಟ್ ಮೇಲೆ ಮಧ್ಯರಾತ್ರಿ ಐಸಿಸ್​ ಉಗ್ರರು ದಾಳಿ ನಡೆಸಿದ್ದಾರೆ.   ಈ ಬಾರಿ ಐಸಿಸ್​ ಸಂಘಟನೆ ಫೆಡರಲ್​ ಪೊಲೀಸ್​ ಚೆಕ್​ಪಾಯಿಂಟ್​ನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದು ಐಸಿಸ್​ ದಾಳಿ ಎಂಬುದು ಸ್ಪಷ್ಟವಾಗಿದೆ..ಆದರೆ ಆ ಸಂಘಟನೆ ಇನ್ನೂ ಹೊಣೆ ಹೊತ್ತುಕೊಂಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಇರಾಕ್​ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾಕ್​​ನಲ್ಲಿ ಐಸಿಸ್​ ದಾಳಿ ಹೊಸದಲ್ಲ. ಇನ್ನು ಸುನ್ನಿ ಉಗ್ರರನ್ನು ನಾವು 2017ರ ಅಂತ್ಯದಲ್ಲಿ  ಸೋಲಿಸಿದ್ದೇವೆ ಎಂದು ಇರಾಕಿ ಸರ್ಕಾರ ಹೇಳಿಕೊಂಡಿದ್ದರೂ, ಆ ಸಂಘಟನೆ ಸ್ಲೀಪರ್ ಸೆಲ್​ಗಳನ್ನು ಉಳಿಸಿಕೊಂಡಿದೆ ಮತ್ತು ಆಗಾಗ ಇರಾಕ್​ನ ಸೇನಾಪಡೆ, ಪೊಲೀಸರ ಮೇಲೆ ದಾಳಿ ಮುಂದುವರಿಸುತ್ತಲೇ ಇದೆ.  ಜುಲೈ 19ರಂದು ಐಸಿಸ್​ ಸಂಘಟನೆ ಬಾಗ್ದಾದ್‌ನ ಶಿಯಾ ಉಪನಗರವಾದ ಸದರ್ ನಗರದ ಅಲ್-ವೊಹೈಲಾಟ್ ಮಾರುಕಟ್ಟೆ ಮೇಲೆ ಬಾಂಬ್ ದಾಳಿ ನಡೆಸಿ, ಅದರಲ್ಲಿ 30 ಜನರು ಹತರಾಗಿದ್ದರು.

ಇದನ್ನೂ ಓದಿ: ಪ್ರತಿದಿನ 5ಜಿಬಿ ಡೇಟಾ: ಜಿಯೋ, ಏರ್ಟೆಲ್​ಗೆ ಪೈಪೋಟಿ ನೀಡುತ್ತಿರುವ ಬಿಎಸ್​ಎನ್​ಎಲ್

ಯಾದಗಿರಿ: ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಕರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ

Published On - 2:14 pm, Sun, 5 September 21

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು