AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

No Death: ಇಲ್ಲಿ ಸಾಯುವುದು ಅಪರಾಧ! ಹಾಗಾಗಿ 70 ವರ್ಷಗಳಿಂದ ಇದುವರೆಗೆ ಇಲ್ಲಿ ಯಾರೂ ಸತ್ತಿಲ್ಲ, ಇದು ಹೇಗೆ ಸಾಧ್ಯ?

Loganiterben: ಈ ನಗರದ ಇನ್ನೊಂದು ವಿಶೇಷತೆಯೆಂದರೆ ಮೇ ನಿಂದ ಜುಲೈವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಸತತ 76 ದಿನಗಳ ಕಾಲ ಸೂರ್ಯ ಇಲ್ಲಿ ಬೆಳಗುತ್ತಲೇ ಇರುತ್ತಾನೆ. ಈ ಕಾರಣಕ್ಕಾಗಿ, ನಾರ್ವೆಯನ್ನು ಸೂರ್ಯ ಅಸ್ತಮಾನವಾಗದ ನಗರ ಎಂದೂ ಕರೆಯುತ್ತಾರೆ. ಕೆಲವು ತಿಂಗಳುಗಳಿಂದ ಇಲ್ಲಿ ಚಳಿ ಹೆಚ್ಚಾಗಿರುವುದರಿಂದ ಜನರ ರಕ್ತ ಗಡ್ಡೆ ಕಟ್ಟಿದೆ.

No Death: ಇಲ್ಲಿ ಸಾಯುವುದು ಅಪರಾಧ! ಹಾಗಾಗಿ 70 ವರ್ಷಗಳಿಂದ ಇದುವರೆಗೆ ಇಲ್ಲಿ ಯಾರೂ ಸತ್ತಿಲ್ಲ, ಇದು ಹೇಗೆ ಸಾಧ್ಯ?
ಇಲ್ಲಿ ಸಾಯುವುದು ಅಪರಾಧ! ಹಾಗಾಗಿ 70 ವರ್ಷಗಳಿಂದ ಇಲ್ಲಿ ಯಾರೂ ಸತ್ತಿಲ್ಲ
Follow us
ಸಾಧು ಶ್ರೀನಾಥ್​
|

Updated on: Oct 20, 2023 | 2:58 PM

ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯುತ್ತದೆ. ನಾವು ಹುಟ್ಟಿದ ಕ್ಷಣವೇ, ನಮಗೆ ಮುಂದೊಂದು ದಿನ ಸಾವು ಖಚಿತ ಎಂದು ನಮಗೆಲ್ಲರಿಗೂ ತಿಳಿದಿದೆ. ಸಮಯ ಬಂದಾಗ ಯಮರಾಜನು ನಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಆ ಯಮ ಧರ್ಮರಾಯನನ್ನು (God yama) ಯಾರಾದರೂ ನಿಲ್ಲಿಸ ಲು ಸಾಧ್ಯವಾ? ಇದು ಅಕ್ಷರಶಃ ಸತ್ಯ.. ಆದರೆ, ನೀವು ಹೆಚ್ಚು ಕಾಲ ಬದುಕಲು ಬಯಸಿದರೆ, ಜಗತ್ತಿನಲ್ಲಿ ಒಂದು ನಗರವಿದೆ. ಇದು ನಾರ್ವೆಯ ಒಂದು ಪ್ರಾಂತ್ಯ. ಈ ನಗರದ ಬಗ್ಗೆ ತಿಳಿದರೆ ಯಮರಾಜನಿಗೂ ಕೂಡ ಇಲ್ಲಿಗೆ ಪ್ರವೇಸ ಇಲ್ಲ ಅನಿಸುತ್ತದೆ. ಕಳೆದ 70 ವರ್ಷಗಳಿಂದ ಇಲ್ಲಿ ಯಾರೂ ಸಾವಿಗೀಡಾಗಿಲ್ಲ (death). ಇದು ಸುಳ್ಳಲ್ಲ; ನಿಜ. ಈ ಸ್ಥಳದ ಬಗ್ಗೆ ತಿಳಿದರೆ ನೀವೂ ಆಶ್ಚರ್ಯ ಪಡುತ್ತೀರಿ. ಆದರೆ, ಇದು ನಿಜ. ನಾರ್ವೇಯ (Norway) ಉತ್ತರ ಧ್ರುವದಲ್ಲಿರುವ ಲಾಂಗ್‌ಇಯರ್‌ಬೈನ್ (Loganiterben) ಎಂಬ ಈ ನಗರವು ವರ್ಷವಿಡೀ ತುಂಬಾ ತಂಪಾಗಿರುತ್ತದೆ. ಇಲ್ಲಿನ ಜನರು (People) ಸದಾ ಸ್ವೆಟರ್ ಧರಿಸುತ್ತಾರೆ. ಇದು ಡೀಪ್ ಫ್ರೀಜರ್‌ನಂತಹ ನಗರವಾಗಿದ್ದರೆ, ಮನುಷ್ಯನ ಸಾವಿನ ನಂತರ ಮೃತ ದೇಹಗಳು ಇಲ್ಲಿ ಕೊಳೆತುಹೋಗುತ್ತವೆಯಾ? ಈ ಕಾರಣಕ್ಕಾಗಿ ಇಲ್ಲಿನ ಸರ್ಕಾರ ಇಲ್ಲಿ ಮನುಷ್ಯರು ಸಾಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಥವಾ ಬೇರೊಂದು ಅರ್ಥದಲ್ಲಿ ಹೇಳಬೇಕು ಅಂದರೆ ಇಲ್ಲಿ ಸತ್ತವರನ್ನು ತಕ್ಷಣ ಇಲ್ಲಿಂದ ಬೇರೆಡೆಗೆ ಸಾಗಿಸುತ್ತಾರೆ ಅನ್ನಿಸುತ್ತದೆ. ಅಂದರೆ ಇಲ್ಲಿ ಮೃತದೇಹವನ್ನು ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಈ ನಗರದ ಇನ್ನೊಂದು ವಿಶೇಷತೆಯೆಂದರೆ ಮೇ ನಿಂದ ಜುಲೈವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಸತತ 76 ದಿನಗಳ ಕಾಲ ಸೂರ್ಯ ಇಲ್ಲಿ ಬೆಳಗುತ್ತಲೇ ಇರುತ್ತಾನೆ. ಈ ಕಾರಣಕ್ಕಾಗಿ, ನಾರ್ವೆಯನ್ನು ಸೂರ್ಯ ಅಸ್ತಮಾನವಾಗದ ನಗರ ಎಂದೂ ಕರೆಯುತ್ತಾರೆ. ಕೆಲವು ತಿಂಗಳುಗಳಿಂದ ಇಲ್ಲಿ ಚಳಿ ಹೆಚ್ಚಾಗಿರುವುದರಿಂದ ಜನರ ರಕ್ತ ಗಡ್ಡೆ ಕಟ್ಟಿದೆ. ಆದಾಗ್ಯೂ, ಲಾಂಗ್ ಇಯರ್ ಬೈನ್ ನಗರದಲ್ಲಿ ಕೊನೆಯ ಸಾವು 1917 ರಲ್ಲಿ ಸಂಭವಿಸಿತು. ಅಂದಿನಿಂದ ಇಲ್ಲಿಯವರೆಗೆ ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಯಮರಾಜ ಇಲ್ಲಿನ ವಿಳಾಸವನ್ನು ಮರೆತಿದ್ದಾರೆ ಎಂದು ಜನ ಭಾವಿಸಿದ್ದಾರೆ.

ಇದನ್ನೂ ಓದಿ: ಬಾವಲಿಗಳ ಉಲ್ಟಾ ಲೋಕದಲ್ಲಿ… ಅಸಲಿಗೆ ಬಾವಲಿ ಯಾವ ದೇವರ ಸಂಕೇತ, ಏನಿದು ಬಾವಲಿ ಪೂಜೆ? ಎಲ್ಲಿದೆ ಇದರ ಆಚರಣೆ?

ಆದಾಗ್ಯೂ, 1917 ರಲ್ಲಿ ಮೃತಪಟ್ಟವರ ಸಾವಿಗೆ ಕಾರಣವೆಂದರೆ ಇನ್ಫ್ಲುಯೆನ್ಜಾ. ಆಗ ಇಲ್ಲಿ ಒಂದು ಶವವನ್ನು ಹೂಳಲಾಗಿದೆ, ಆದರೆ ಆ ಮೃತದೇಹ ಇನ್ನೂ ಕೊಳೆತಿಲ್ಲವೆಂದು ಹೇಳಲಾಗಿದೆ. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಇನ್ನೂ ಜೀವಂತವಾಗಿವೆ ಎಂದು ಹೇಳಲಾಗುತ್ತದೆ. ಇದರಿಂದ ಇತರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಇಲ್ಲಿನ ಜನರು ಸಾವಿನ ಭಯದಲ್ಲಿದ್ದಾರೆ. ಆದರೆ, ಸಾವು ಪ್ರಕೃತಿಯ ನಿಯಮ. ಅದಕ್ಕೆ ಪರಿಹಾರವಿಲ್ಲ. ಆದರೆ ಇಲ್ಲಿ ಸರ್ಕಾರ ಸಾಯುತ್ತಿರುವವರಿಗಾಗಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಪ್ರಕಾರ, ಯಾರಾದರೂ ಸತ್ತರೆ ಅಥವಾ ಸಾಯುವ ಸ್ಥಿತಿಯಲ್ಲಿ ಕಂಡುಬಂದರೆ, ಅವರನ್ನು ಹೆಲಿಕಾಪ್ಟರ್‌ನಲ್ಲಿ ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದಲ್ಲದೆ, ಈ ನಗರವು ತುಂಬಾ ಚಿಕ್ಕದಾಗಿದೆ. ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 2,000. ಹಾಗಾಗಿ ಇದೆಲ್ಲ ಸಾಧ್ಯವಾಗಿದೆ. ಇದರಿಂದ ಇಲ್ಲಿಯವರೆಗೂ ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎನ್ನಬಹುದು!

ಜೀವನಶೈಲಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ