AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Made in India syrup: ಭಾರತೀಯ ಔಷಧಿ ಕಂಪನಿ ತಯಾರಿಸಿದ ಸಿರಪ್ ಕುಡಿದು 18 ಮಕ್ಕಳು ಸಾವು: ಉಜ್ಬೇಕಿಸ್ತಾನ್

ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ಉಜ್ಬೇಕಿಸ್ತಾನ್ ದೇಶದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

Made in India syrup: ಭಾರತೀಯ ಔಷಧಿ ಕಂಪನಿ ತಯಾರಿಸಿದ ಸಿರಪ್ ಕುಡಿದು 18 ಮಕ್ಕಳು ಸಾವು: ಉಜ್ಬೇಕಿಸ್ತಾನ್
ಸಾಂದರ್ಭಿಕ ಚಿತ್ರ Image Credit source: india today
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 28, 2022 | 7:33 PM

ಉಜ್ಬೇಕಿಸ್ತಾನ್‌: ಗ್ಯಾಂಬಿಯಾದಲ್ಲಿ (Gambia) ಮಕ್ಕಳ ಸಾವಿನ ಪ್ರಕರಣದ ನಂತರ, ಉಜ್ಬೇಕಿಸ್ತಾನ್‌(Uzbekistan) ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ತೀವ್ರ ಉಸಿರಾಟದ ಕಾಯಿಲೆ ಇರುವ 21 ಮಕ್ಕಳಲ್ಲಿ 18 ಮಕ್ಕಳು ಡಾಕ್-1 ಮ್ಯಾಕ್ಸ್ ಸಿರಪ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಔಷಧಿ ಕಂಪನಿಯ ಮೇರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್​ದಾಗಿದ್ದು, ಇದನ್ನು ಉಜ್ಬೇಕಿಸ್ತಾನ್‌ನಲ್ಲಿ 2012ರಲ್ಲಿ ನೋಂದಾಯಿಸಲಾಗಿದೆ.

ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್-1 ಮ್ಯಾಕ್ಸ್ ಸಿರಪ್ ಸೇವಿಸಿದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಡಾಕ್-1 ಮ್ಯಾಕ್ಸ್ ಸಿರಪ್‌ನ ಈ ಸರಣಿಯು ಎಥಿಲೀನ್ ಗ್ಲೈಕೋಲ್ ಅನ್ನು ಹೊಂದಿರುತ್ತದೆ ಎಂದು ಪ್ರಾಥಮಿಕ ಪ್ರಯೋಗಾಲಯ ಅಧ್ಯಯನಗಳು ತಿಳಿಸಿದೆ. “ಈ ಸಿರಪ್‌ ವಿಷಕಾರಿಯಾಗಿದೆ, ಮತ್ತು ಸುಮಾರು 1-2 ಮಿಲಿ / ಕೆಜಿ 95% ಕೇಂದ್ರೀಕೃತ ದ್ರಾವಣವು ರೋಗಿಯ ಆರೋಗ್ಯದಲ್ಲಿ ಗಂಭೀರ ಬದಲಾವಣೆಗಳನ್ನು ಉಂಟುಮಾಡಬಹುದು, ಉದಾಹರಣೆಗೆ ವಾಂತಿ, ಮೂರ್ಛೆ, ಸೆಳೆತ, ಹೃದಯರಕ್ತನಾಳದ ಸಮಸ್ಯೆಗಳು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯವಾಗಬಹುದು ಎಂದು ಸಚಿವಾಲಯ ಗಮನಸೆಳೆದಿದೆ.

ಒಟ್ಟು ಏಳು ಜವಾಬ್ದಾರಿಯುತ ಉದ್ಯೋಗಿಗಳನ್ನು ಕರ್ತವ್ಯಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಜಾಗರೂಕತೆಗಾಗಿ ಅವರನ್ನು ವಜಾಗೊಳಿಸಲಾಯಿದೆ ಮತ್ತು ಈ ಬಗ್ಗೆ ಹಲವಾರು ತಜ್ಞರಿಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಸ್ತುತ, ಡಾಕ್ -1 ಮ್ಯಾಕ್ಸ್ ಔಷಧದ ಮಾತ್ರೆಗಳು ಮತ್ತು ಸಿರಪ್ಗಳನ್ನು ದೇಶದ ಎಲ್ಲಾ ಔಷಧಾಲಯಗಳಲ್ಲಿ ನಿಗದಿತ ರೀತಿಯಲ್ಲಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮತ್ತು ಔಷಧಾಲಯಗಳಲ್ಲಿ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಮೂಲಕ ಮಾತ್ರ ಖರೀದಿಸಲು ಸಚಿವಾಲಯವು ಹೇಳಿದೆ.

ಇದನ್ನು ಓದಿ:ಗಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ ಭಾರತದ ಕೆಮ್ಮಿನ ಸಿರಪ್​​ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ:ಡಿಸಿಜಿಐ

ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತೀಯ ಔಷಧ ತಯಾರಕ ಮೈಡೆನ್ ಫಾರ್ಮಾ ತಯಾರಿಸಿದ ನಾಲ್ಕು ಕಲುಷಿತ”ಕೆಮ್ಮು ಸಿರಪ್‌ಗಳಿಗೆ ಎಚ್ಚರಿಕೆಯನ್ನು ನೀಡಿದ ಕೆಲವು ತಿಂಗಳುಗಳ ನಂತರ ಈ ಘಟನೆ ನಡೆದಿದೆ. ಮೃತ ಮಕ್ಕಳು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ಮೊದಲು, ಈ ಔಷಧಿಯನ್ನು 2-7 ದಿನಗಳವರೆಗೆ ದಿನಕ್ಕೆ 3-4 ಬಾರಿ, 2.5-5 ಮಿಲಿ, ಮಕ್ಕಳಿಗೆ ಔಷಧದ ಪ್ರಮಾಣಿತ ಪ್ರಮಾಣದಲ್ಲಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಔಷಧದ ಮುಖ್ಯ ಅಂಶವೆಂದರೆ ಪ್ಯಾರಸಿಟಮಾಲ್ ಆಗಿರುವುದರಿಂದ, ಡಾಕ್ -1 ಮ್ಯಾಕ್ಸ್ ಸಿರಪ್​ನ್ನು ಪೋಷಕರು ಶೀತ-ವಿರೋಧಿ ಔಷಧಿಯಾಗಿ ತಮ್ಮ ಸ್ವಂತ ಅಥವಾ ಔಷಧಾಲಯ ಮಾರಾಟಗಾರರ ಶಿಫಾರಸಿನ ಮೇರೆಗೆ ತಪ್ಪಾಗಿ ಬಳಸಿದ್ದಾರೆ.

ಗಾಂಬಿಯಾದಲ್ಲಿ 66 ಮಕ್ಕಳು ಸಾವು

ಸರ್ಕಾರವು ಪರೀಕ್ಷಿಸಿದ ಮೇಡನ್ ಫಾರ್ಮಾಸ್ಯುಟಿಕಲ್ಸ್‌ನ ಎಲ್ಲಾ ನಾಲ್ಕು ಕೆಮ್ಮಿನ ಸಿರಪ್ ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಕಂಡುಬಂದಿತ್ತು ಎಂದು ರಾಷ್ಟ್ರೀಯ ಔಷಧ ನಿಯಂತ್ರಕರು ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ತಿಳಿಸಿತ್ತು. ಅದೇ ವೇಳೆ ಗಾಂಬಿಯಾದಲ್ಲಿ ಸಾವುಗಳನ್ನು ಸ್ಥಾಪಿಸಲು ಭಾರತವು ಇನ್ನೂ ಡೇಟಾವನ್ನು ಸ್ವೀಕರಿಸಿಲ್ಲ ಎಂದು ಪುನರುಚ್ಚರಿಸಿತು. ಭಾರತೀಯ ಔಷಧ ತಯಾರಕ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಸಿರಪ್‌ ಸೇವಿಸಿ ಗಾಂಬಿಯಾದಲ್ಲಿ ಕನಿಷ್ಠ 66 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು.

ಅಕ್ಟೋಬರ್ 5 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಾಲ್ಕು ಕೆಮ್ಮಿನ ಸಿರಪ್‌ಗಳ ಮೇಲೆ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯನ್ನು ನೀಡಿತು. ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಮೇಡನ್ ಫಾರ್ಮಾದಿಂದ ತಯಾರಿಸಲ್ಪಟ್ಟ ಕೆಮ್ಮಿನ ಸಿರಪ್ ಆಗಿದ್ದು, ಇದನ್ನು ರಫ್ತು ಮಾಡಲಾಗಿತ್ತು. ನಾಲ್ಕು ಕೆಮ್ಮು ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕೋಲ್ ಎಂಬ ಎರಡು ವಿಷಕಾರಿ ವಸ್ತುಗಳು ಕಂಡುಬಂದಿವೆ ಎಂದು ಡಬ್ಲ್ಯುಎಚ್‌ಒ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ. ಈ 4 ಉತ್ಪನ್ನಗಳ ಮಾದರಿಗಳನ್ನು ಪಡೆದಿದ್ದು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಸರ್ಕಾರಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಲಾಗಿತ್ತು.

ಸರ್ಕಾರಿ ಪ್ರಯೋಗಾಲಯದಿಂದ ಪಡೆದ ಪರೀಕ್ಷಾ ವರದಿಗಳ ಪ್ರಕಾರ, 4 ಉತ್ಪನ್ನಗಳ ಎಲ್ಲಾ ನಿಯಂತ್ರಣ ಮಾದರಿಗಳು ಮಾನದಂಡಗಳನ್ನು ಅನುಸರಿಸುತ್ತಿವೆ ಎಂದು ಕಂಡುಬಂದಿದೆ ಎಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೋಮಾನಿ ಅವರು ವಿಶ್ವಸಂಸ್ಥೆಯ ನಿಯಂತ್ರಣ ಮತ್ತು ಪೂರ್ವ ಅರ್ಹತೆ, ನಿರ್ದೇಶಕ ರೋಜೆರಿಯೊ ಗ್ಯಾಸ್ಪರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Wed, 28 December 22

ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್