Sign In

By signing in or creating an account, you agree with Associated Broadcasting Company's Terms & Conditions and Privacy Policy.

Qatar minimum wage law: ಕತಾರ್​ನಲ್ಲಿ ಜಾರಿಗೆ ಬಂತು ಕನಿಷ್ಠ ವೇತನದ ಹೊಸ ಕಾನೂನು

ಕತಾರ್ ದೇಶದಲ್ಲಿ ವಲಸಿಗ ಕಾರ್ಮಿಕರ ಸಂಖ್ಯೆಯು ವಿಪರೀತ ಹೆಚ್ಚು. ಆ ದೇಶದಲ್ಲಿ ಈಗ ಕನಿಷ್ಠ ವೇತನದ ಹೊಸ ಕಾನೂನು ತರಲಾಗಿದೆ. ಶನಿವಾರದಿಂದ ಜಾರಿ ಆಗುತ್ತಿರುವ ಆ ಕಾನೂನಿನ ಪ್ರಕಾರ, ಕಾರ್ಮಿಕರೊಬ್ಬರಿಗೆ ನೀಡುವ ಕನಿಷ್ಠ ವೇತನ ಎಷ್ಟು ಗೊತ್ತಾ?

Qatar minimum wage law: ಕತಾರ್​ನಲ್ಲಿ ಜಾರಿಗೆ ಬಂತು ಕನಿಷ್ಠ ವೇತನದ ಹೊಸ ಕಾನೂನು
2022ರಲ್ಲಿ ಕತಾರ್​ನಲ್ಲಿ ಫುಟ್​ಬಾಲ್ ವಿಶ್ವಕಪ್ ನಡೆಯಲಿದೆ
Follow us
Srinivas Mata
|

Updated on: Mar 20, 2021 | 2:08 PM

ಕತಾರ್​ನಲ್ಲಿ ಶನಿವಾರದಿಂದ (ಮಾರ್ಚ್ 20, 2021) ಹೊಸ ಕನಿಷ್ಠ ವೇತನ ಕಾನೂನು ಜಾರಿಗೆ ಬಂದಿದೆ. ಇದರಿಂದ ಲಕ್ಷಾಂತರ ಸಂಖ್ಯೆಯ ವಲಸಿಗ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಹೊಸ ಕಾನೂನಿನ ಪ್ರಕಾರ, ಎಲ್ಲ ಸಿಬ್ಬಂದಿಯು ಕನಿಷ್ಠ ತಿಂಗಳ ವೇತನ 1000 ಕತಾರ್ ರಿಯಾಲ್ (19,900 ರೂಪಾಯಿ) ಪಡೆಯಲಿದ್ದಾರೆ. ಒಂದು ವೇಳೆ ಉದ್ಯೋಗದಾತರೇ ಉಳಿದುಕೊಳ್ಳುವುದಕ್ಕೆ ಮನೆ ಹಾಗೂ ಆಹಾರ ನೀಡದಿದ್ದಲ್ಲಿ, ಮನೆಗೆ 500 ರಿಯಾಲ್ (9950 ರೂಪಾಯಿ) ಮತ್ತು ಆಹಾರಕ್ಕೆ 300 ರಿಯಾಲ್ (5968 ರೂಪಾಯಿ) ಹೆಚ್ಚುವರಿಯಾಗಿ ಪಡೆಯುತ್ತಾರೆ. 4,00,000ಕ್ಕೂ ಹೆಚ್ಚು ಕಾರ್ಮಿಕರು ಅಥವಾ ಶೇಕಡಾ 20ರಷ್ಟು ಖಾಸಗಿ ವಲಯದವರು ಈ ಹೊಸ ಕಾನೂನಿನಿಂದ ನೇರವಾಗಿ ಅನುಕೂಲ ಪಡೆಯಲಿದ್ದಾರೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ತಿಳಿಸಿದೆ.

ಕತಾರ್​ನ ಒಟ್ಟು ಜನಸಂಖ್ಯೆ 27 ಲಕ್ಷ. ಆದರೆ ಅದರಲ್ಲಿ ಅಲ್ಲಿನ ನಾಗರಿಕರು ಎಂದಿರುವುದು ಕೇವಲ 3,00,000 ಮಾತ್ರ. ಕತಾರ್ ಸರ್ಕಾರದ ಮಾಹಿತಿಯ ಪ್ರಕಾರ, ಈಗಾಗಲೇ 5000ಕ್ಕೂ ಹೆಚ್ಚು ಕಂಪೆನಿಗಳು ಹೊಸ ವೇತನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಹೊಸ ಕಾನೂನು ಜಾರಿಗೆ ಬದ್ಧವಾಗಿದ್ದಾರೆ. ಈಚಿನ ವರ್ಷಗಳಲ್ಲಿ ಕತಾರ್​ನಲ್ಲಿ ಸರಣಿಯಾಗಿ ಕಾರ್ಮಿಕ ಕಾನೂನುಗಳ ಸುಧಾರಣೆ ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರಮುಖವಾದ ಘೋಷಣೆಯೊಂದನ್ನು ಅಲ್ಲಿನ ಸರ್ಕಾರ ಮಾಡಿತು. ಅದರ ಪ್ರಕಾರ, ಉದ್ಯೋಗಿ ಕೆಲಸ ಬದಲಿಸಬೇಕಿದ್ದಲ್ಲಿ ಉದ್ಯೋಗದಾತರ ಅನುಮತಿ ಪಡೆಯಬೇಕೆಂದೇನೂ ಇಲ್ಲ.

ಅದಕ್ಕೂ ಮುಂಚೆ ಕತಾರ್​ನ “ಕಫಲಾ” ಅಥವಾ ಪ್ರಾಯೋಜಿತ ವ್ಯವಸ್ಥೆ ಅಡಿಯಲ್ಲಿ ಕಾರ್ಮಿಕರು ತಮ್ಮ ಉದ್ಯೋಗ ಬದಲಿಸುವ ಮುಂಚೆ ಉದ್ಯೋಗದಾತರ ಅನುಮತಿ ಪಡೆಯಬೇಕಿತ್ತು. ಆಗ ಕಾರ್ಮಿಕರು ತಮಗೆ ಉದ್ಯೋಗ ನೀಡಿದವರಿಂದ ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಇನ್ನೂ ತಮಗೆ ಉದ್ಯೋಗ ಬದಲಾವಣೆ ವೇಳೆ ಬೆದರಿಕೆ, ಆತಂಕ ಹಾಗೂ ಶೋಷಣೆ ನಿಂತಿಲ್ಲ ಎಂದು ಕೆಲವು ಕಾರ್ಮಿಕರು ಮಾಧ್ಯಮವೊಂದರ ಬಳಿ ಹೇಳಿಕೊಂಡಿದ್ದಾರೆ. ಎಷ್ಟೋ ಮಂದಿ ಕಾರ್ಮಿಕರನ್ನು ಜೈಲಿಗೆ ಕಳಿಸುವ ಹಾಗೂ ಗಡೀಪಾರು ಮಾಡುವುದರೊಂದಿಗೆ ಪ್ರಹಸನ ಕೊನೆಯಾಗುವ ಉದಾಹರಣೆಗಳು ಈಗಲೂ ಇವೆ.

2022ನೇ ಇಸವಿಯ ಫುಟ್​ಬಾಲ್ ವಿಶ್ವಕಪ್ ಆಯೋಜಿಸುವ ಅವಕಾಶವು 2010ರಲ್ಲಿ ಕತಾರ್​ಗೆ ದೊರೆಯಿತು. ಆಗಿನಿಂದ ಆ ದೇಶದಲ್ಲಿ ವಲಸಿಗ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಗಮನ ಹೆಚ್ಚು ನೀಡಲಾಗುತ್ತಿದೆ. 2018ರಲ್ಲಿ ಕತಾರ್​ನಲ್ಲಿ ಬಹುತೇಕ ವಲಸಿಗ ಕಾರ್ಮಿಕರಿಗೆ ಹೊರಹೋಗುವ ವೀಸಾ ಇಲ್ಲದಿದ್ದರೂ ದೇಶವನ್ನು ಬಿಟ್ಟು ಹೋಗುವುದಕ್ಕೆ ಅನುವು ಮಾಡಿಕೊಡಲು ಕಾನೂನು ತಿದ್ದುಪಡಿ ಮಾಡಲಾಯಿತು. ಕತಾರ್​ನ ವಿಶ್ವಕಪ್ ಆಯೋಜಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಅಲ್- ಥವದಿ ಮಾತನಾಡಿ, ಈ ವಿಶ್ವಕಪ್​ನಿಂದ ಕತಾರ್ ಮತ್ತು ವಿಶ್ವದ ಇತರ ಭಾಗಗಳ ಕಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅನೂಹ್ಯ ಬದಲಾವಣೆಗಳಾಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು