ಕರ್ತವ್ಯಲೋಪವೆಸಗುವ ಅಧಿಕಾರಿಗಳನ್ನು ಮಂತ್ರಿಗಳು ಸಾರ್ವಜನಿಕವಾಗಿ ನಿಂದಿಸುವುದು ಸರಿಯೇ?
ಶಿವರಾಜ ತಂಗಡಗಿ ಅಧಿಕಾರಿಗಳೊಂದಿಗೆ ಸಭ್ಯವಾಗಿ ಮಾತಾಡಲ್ಲ ಎಂಬ ದೂರಿದೆ. ಪ್ರಮಾದವೆಸಗುವ, ಕರ್ತವ್ಯಲೋಪವೆಸಗುವ, ನಿರ್ಲಕ್ಷ್ಯ ಅಥವಾ ನಿಷ್ಕ್ರಿಯತೆ ಪ್ರದರ್ಶಿಸುವ ಅಧಿಕಾರಿಗಳ ಬೆಂಡೆತ್ತುವುದರಲ್ಲಿ ತಪ್ಪಿಲ್ಲ. ಅದರೆ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಾ ಮನಸಸ್ಸಿಗೆ ಬಂದಂತೆ ನಿಂದಿಸುವುದು ಮಂತ್ರಿಗಳ ಘನತೆಗೆ ಶೋಭೆ ನೀಡದು. ತಂಗಡಿಗೆ ಅವರು ಕೃಷ್ಣ ಭೈರೇಗೌಡರಿಂದ ಕಲಿಯುವುದು ಸಾಕಷ್ಟಿದೆ.
ಕೊಪ್ಪಳ, ಫೆ.28: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ (Shivaraj Tangadigi) ಅಭಯ ಹಸ್ತ ಅಂತ ನಡೆಸುವ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಭೆ ಸರ್ಕಾರೀ ನೌಕರರಿಗಂತೂ ಅಭಯವಲ್ಲ! ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಸಭೆ ನಡೆಸಿದ ಸಚಿವ ಗ್ರಾಮದಲ್ಲಿ ವಿದ್ಯುತ್ ಕಂಬಿಗಳಿಂದ ಜೀವಂತ ತಂತಿಗಳು ಜೋತಾಡುತ್ತಿರುವ ಬಗ್ಗೆ ಊರ ನಿವಾಸಿಗಳು ಪದೇಪದೆ ಗಮನಕ್ಕೆ ತಂದರೂ ಜೆಸ್ಕಾಂನ ಸಂಬಂಧಪಟ್ಟ ಜೂನಿಯರ್ ಇಂಜಿನೀಯರ್ ಸರಿ ಮಾಡುವ ಗೋಜಿಗೆ ಹೋಗಿಲ್ಲ. ತಂಗಡಿಗಿ ಜೆಈಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೊಪ್ಪಳ: ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಸಾವು!