AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು

Pakistan: ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು.

ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು
ಪಾಕಿಸ್ತಾನ ಶಾಲೆಯೊಂದರ ಚಿತ್ರ
TV9 Web
| Edited By: |

Updated on:Sep 09, 2021 | 9:58 AM

Share

ಇನ್ನುಮುಂದೆ ಶಾಲಾ-ಕಾಲೇಜುಗಳ ಶಿಕ್ಷಕಿಯರು ಜೀನ್ಸ್ ಪ್ಯಾಂಟ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಪಾಕಿಸ್ತಾನದ ಫೆಡರಲ್​ ಶಿಕ್ಷಣ ನಿರ್ದೇಶನಾಲಯ (FDE) ಅಧಿಸೂಚನೆ ಹೊರಡಿಸಿದೆ. ಇದು ಪುರುಷ ಶಿಕ್ಷಕರಿಗೂ ಅನ್ವಯ. ಅವರೂ ಕೂಡ ಬಿಗಿಯಾದ ಟಿ-ಶರ್ಟ್, ಜೀನ್ಸ್​ ಪ್ಯಾಂಟ್​ಗಳನ್ನು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ. ಈ ಅಧಿಸೂಚನೆಯನ್ನು ಎಫ್​ಡಿಇ ಎಲ್ಲ ಶಾಲಾ-ಕಾಲೇಜುಗಳ ಪ್ರಿನ್ಸಿಪಲ್​, ಆಡಳಿತ ಮಂಡಳಿಗೂ ಕಳಿಸಿಕೊಟ್ಟಿದೆ. ‘ಇನ್ನು ಮುಂದೆ ಪ್ರತಿ ಶಿಕ್ಷಕರೂ ಶಿಸ್ತು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಪಾಲನೆ ಮಾಡಬೇಕು. ಆ ಬಗ್ಗೆ ಗಮನ ಇಡಲಾಗವುದು’ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾಗಿ  ಎಂದು ಪಾಕ್​ ಪತ್ರಿಕೆ ಡಾನ್ ವರದಿ ಮಾಡಿದೆ.  

ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು. ಇನ್ನು ಪುರುಷರು ತಮ್ಮ ಗಡ್ಡಗಳನ್ನು ಆಗಾಗ ಟ್ರಿಮ್​ ಮಾಡಿ, ಶಿಸ್ತಿನಿಂದ ಇಟ್ಟುಕೊಳ್ಳಬೇಕು. ತಲೆಕೂದಲು ಬಿಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷಕರು ತಮ್ಮ ಶಾಲಾ ಅವಧಿಯಲ್ಲಿ, ಶಾಲಾ-ಕಾಲೇಜುಗಳ ಕ್ಯಾಂಪಸ್​​ನಲ್ಲಿ ಇನ್ಯಾವುದೇ ಕಾರಣಕ್ಕೆ ಇದ್ದಾಗ ಮತ್ತು ಸಭೆಗಳಲ್ಲಿ ಪಾಲ್ಗೊಳ್ಳುವಾಗ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಮಹಿಳೆಯರ ಉಡುಪು ಹೇಗಿರಬೇಕು? ಮಹಿಳಾ ಶಿಕ್ಷಕರು ಜೀನ್ಸ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸರಳವಾದ, ಶಿಸ್ತಿನಿಂದ ಇರುವ ಸಲ್ವಾರ್​ ಕಮೀಜ್​, ಪೈಜಾಮಾ ಮಾದರಿಯ ಪ್ಯಾಂಟ್​, ಸಡಿಲವಾದ ಶರ್ಟ್​ ಬಳಸಬಹುದು. ದುಪ್ಪಟ್ಟಾ, ಶಾಲುಗಳು ಇರಬೇಕು. ಹಿಜಾಬ್​, ಬುರ್ಕಾ ಧರಿಸಬಹುದು. ಚಳಿಗಾಲಲ್ಲಿ ಸ್ವೆಟರ್​, ಬ್ಲೇಜರ್​, ಕೋಟ್​ ಇತ್ಯಾದಿಗಳನ್ನು ಧರಿಸಬಹುದು. ಇದು ಪುರುಷರಿಗೂ ಅನ್ವಯ ಆಗಲಿದೆ.  ಆದರೆ ಪಾಕಿಸ್ತಾನದ ಈ ಹೊಸ ನಿಯಮಗಳು ನೆಟ್ಟಿಗರಿಂದ ಆಕ್ರೋಶಕ್ಕೆ ಗುರಿಯಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಮಾಡಿದಂತೆ, ಇಲ್ಲೂ ಕೂಡ ನಿರ್ಬಂಧ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’ ಚಿತ್ರಗಳ ನಿರ್ಮಾಪಕ ಸಿ. ಜಯರಾಮ್​ ನಿಧನ

Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

Published On - 9:50 am, Thu, 9 September 21

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌