AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು

Pakistan: ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು.

ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು
ಪಾಕಿಸ್ತಾನ ಶಾಲೆಯೊಂದರ ಚಿತ್ರ
TV9 Web
| Edited By: |

Updated on:Sep 09, 2021 | 9:58 AM

Share

ಇನ್ನುಮುಂದೆ ಶಾಲಾ-ಕಾಲೇಜುಗಳ ಶಿಕ್ಷಕಿಯರು ಜೀನ್ಸ್ ಪ್ಯಾಂಟ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಪಾಕಿಸ್ತಾನದ ಫೆಡರಲ್​ ಶಿಕ್ಷಣ ನಿರ್ದೇಶನಾಲಯ (FDE) ಅಧಿಸೂಚನೆ ಹೊರಡಿಸಿದೆ. ಇದು ಪುರುಷ ಶಿಕ್ಷಕರಿಗೂ ಅನ್ವಯ. ಅವರೂ ಕೂಡ ಬಿಗಿಯಾದ ಟಿ-ಶರ್ಟ್, ಜೀನ್ಸ್​ ಪ್ಯಾಂಟ್​ಗಳನ್ನು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ. ಈ ಅಧಿಸೂಚನೆಯನ್ನು ಎಫ್​ಡಿಇ ಎಲ್ಲ ಶಾಲಾ-ಕಾಲೇಜುಗಳ ಪ್ರಿನ್ಸಿಪಲ್​, ಆಡಳಿತ ಮಂಡಳಿಗೂ ಕಳಿಸಿಕೊಟ್ಟಿದೆ. ‘ಇನ್ನು ಮುಂದೆ ಪ್ರತಿ ಶಿಕ್ಷಕರೂ ಶಿಸ್ತು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಪಾಲನೆ ಮಾಡಬೇಕು. ಆ ಬಗ್ಗೆ ಗಮನ ಇಡಲಾಗವುದು’ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾಗಿ  ಎಂದು ಪಾಕ್​ ಪತ್ರಿಕೆ ಡಾನ್ ವರದಿ ಮಾಡಿದೆ.  

ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು. ಇನ್ನು ಪುರುಷರು ತಮ್ಮ ಗಡ್ಡಗಳನ್ನು ಆಗಾಗ ಟ್ರಿಮ್​ ಮಾಡಿ, ಶಿಸ್ತಿನಿಂದ ಇಟ್ಟುಕೊಳ್ಳಬೇಕು. ತಲೆಕೂದಲು ಬಿಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷಕರು ತಮ್ಮ ಶಾಲಾ ಅವಧಿಯಲ್ಲಿ, ಶಾಲಾ-ಕಾಲೇಜುಗಳ ಕ್ಯಾಂಪಸ್​​ನಲ್ಲಿ ಇನ್ಯಾವುದೇ ಕಾರಣಕ್ಕೆ ಇದ್ದಾಗ ಮತ್ತು ಸಭೆಗಳಲ್ಲಿ ಪಾಲ್ಗೊಳ್ಳುವಾಗ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಮಹಿಳೆಯರ ಉಡುಪು ಹೇಗಿರಬೇಕು? ಮಹಿಳಾ ಶಿಕ್ಷಕರು ಜೀನ್ಸ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸರಳವಾದ, ಶಿಸ್ತಿನಿಂದ ಇರುವ ಸಲ್ವಾರ್​ ಕಮೀಜ್​, ಪೈಜಾಮಾ ಮಾದರಿಯ ಪ್ಯಾಂಟ್​, ಸಡಿಲವಾದ ಶರ್ಟ್​ ಬಳಸಬಹುದು. ದುಪ್ಪಟ್ಟಾ, ಶಾಲುಗಳು ಇರಬೇಕು. ಹಿಜಾಬ್​, ಬುರ್ಕಾ ಧರಿಸಬಹುದು. ಚಳಿಗಾಲಲ್ಲಿ ಸ್ವೆಟರ್​, ಬ್ಲೇಜರ್​, ಕೋಟ್​ ಇತ್ಯಾದಿಗಳನ್ನು ಧರಿಸಬಹುದು. ಇದು ಪುರುಷರಿಗೂ ಅನ್ವಯ ಆಗಲಿದೆ.  ಆದರೆ ಪಾಕಿಸ್ತಾನದ ಈ ಹೊಸ ನಿಯಮಗಳು ನೆಟ್ಟಿಗರಿಂದ ಆಕ್ರೋಶಕ್ಕೆ ಗುರಿಯಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಮಾಡಿದಂತೆ, ಇಲ್ಲೂ ಕೂಡ ನಿರ್ಬಂಧ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’ ಚಿತ್ರಗಳ ನಿರ್ಮಾಪಕ ಸಿ. ಜಯರಾಮ್​ ನಿಧನ

Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

Published On - 9:50 am, Thu, 9 September 21

ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ