AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಕೊರೊನಾ ಬರಲಿದೆಯೇ? ಚೀನಾದ ಖ್ಯಾತ ವೈರಾಲಜಿಸ್ಟ್ ಬ್ಯಾಟ್​​ವುಮನ್ ಹೇಳಿದ್ದೇನು?

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಿ ಮತ್ತು ಅವರ ತಂಡವು 40 ವಿವಿಧ ಕೊರೊನಾವೈರಸ್ ಪ್ರಭೇದಗಳ ಮೌಲ್ಯಮಾಪನವನ್ನು ನಡೆಸಿದ್ದು, ಇದರಲ್ಲಿ ಅರ್ಧದಷ್ಟು "ಅತ್ಯಂತ ಅಪಾಯಕಾರಿ" ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಆರು ಈಗಾಗಲೇ ಮಾನವರಲ್ಲಿ ರೋಗಗಳನ್ನು ಉಂಟುಮಾಡಿದೆ. ಆದರೆ ಪುರಾವೆಗಳನ್ನು ನೋಡಿದರೆ ಮೂರು ಇತರ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿವೆ ಎಂದು ಸೂಚಿಸಿವೆ.

ಮತ್ತೊಂದು ಕೊರೊನಾ ಬರಲಿದೆಯೇ? ಚೀನಾದ ಖ್ಯಾತ ವೈರಾಲಜಿಸ್ಟ್ ಬ್ಯಾಟ್​​ವುಮನ್ ಹೇಳಿದ್ದೇನು?
ಕೊರೊನಾವೈರಸ್
ರಶ್ಮಿ ಕಲ್ಲಕಟ್ಟ
|

Updated on: Sep 25, 2023 | 2:24 PM

Share

ಬೀಜಿಂಗ್ ಸೆಪ್ಟೆಂಬರ್ 25: ಪ್ರಾಣಿಗಳಿಂದ ಹುಟ್ಟುವ ವೈರಸ್‌ಗಳ ಕುರಿತು ತನ್ನ ವ್ಯಾಪಕ ಸಂಶೋಧನೆಯಿಂದಾಗಿ “ಬ್ಯಾಟ್‌ವುಮನ್” (batwoman) ಎಂದು ಪ್ರಸಿದ್ಧವಾಗಿರುವ ಚೀನಾದ ಪ್ರಮುಖ ವೈರಾಲಜಿಸ್ಟ್ (Chinese virologist) ಶಿ ಝೆಂಗ್ಲಿ (Shi Zhengli) ಆತಂಕಕಾರಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಮತ್ತೊಂದು ಕೊರೊನಾವೈರಸ್ (Coronavirus) ಬರುವ ಸಾಧ್ಯತೆಯಿದೆ ಎಂದು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ಬರೆದ ಸಂಶೋಧನಾ ಲೇಖನದಲ್ಲಿ ಶಿ ಒತ್ತಿ ಹೇಳಿದ್ದಾರೆ. ಈ ಎಚ್ಚರಿಕೆಯ ಟಿಪ್ಪಣಿಯು ಆಕೆಯ ಪರಿಣತಿಯನ್ನು ಆಧರಿಸಿದೆ.  ಏಕೆಂದರೆ ಕೊರೊನಾವೈರಸ್ ಈ ಹಿಂದೆ 2003 ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (SARS) ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗಗಳಂತಹ ಪ್ರಮುಖ ರೋಗ ಹರಡುವಿಕೆಗೆ ಕಾರಣವಾಗಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಿ ಮತ್ತು ಅವರ ತಂಡವು 40 ವಿವಿಧ ಕೊರೊನಾವೈರಸ್ ಪ್ರಭೇದಗಳ ಮೌಲ್ಯಮಾಪನವನ್ನು ನಡೆಸಿದ್ದು, ಇದರಲ್ಲಿ ಅರ್ಧದಷ್ಟು “ಅತ್ಯಂತ ಅಪಾಯಕಾರಿ” ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಆರು ಈಗಾಗಲೇ ಮಾನವರಲ್ಲಿ ರೋಗಗಳನ್ನು ಉಂಟುಮಾಡಿದೆ. ಆದರೆ ಪುರಾವೆಗಳನ್ನು ನೋಡಿದರೆ ಮೂರು ಇತರ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿವೆ ಎಂದು ಸೂಚಿಸಿವೆ.

ಮತ್ತೊಂದು ಕೊರೊನಾವೈರಸ್ ಸಂಬಂಧಿತ ಸಾಂಕ್ರಾಮಿಕ ಹೆಚ್ಚಿನ ಸಂಭವನೀಯತೆಯೊಂದಿಗೆ “ಭವಿಷ್ಯದ ಕಾಯಿಲೆಯ ಹೊರಹೊಮ್ಮುವಿಕೆ” ಬಹುತೇಕ ಖಚಿತವಾಗಿದೆ ಎಂದು ಸಂಶೋಧನೆ ಹೇಳಿದೆ. ಜನಸಂಖ್ಯೆಯ ಡೈನಾಮಿಕ್ಸ್, ಆನುವಂಶಿಕ ವೈವಿಧ್ಯತೆ, ರೋಗ ತಗಲುವ ಪ್ರಬೇಧಗಳು ಮತ್ತು ಝೂನೋಟಿಕ್ ಪ್ರಸರಣದ ಇತಿಹಾಸ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು) ಸೇರಿದಂತೆ ವಿವಿಧ ವೈರಲ್ ಗುಣಲಕ್ಷಣಗಳ ವಿಶ್ಲೇಷಣೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಶಿ ಅವರ ಕೆಲಸದ ಸುತ್ತ ವಿವಾದ

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಸಂಭಾವ್ಯ ಲ್ಯಾಬ್ ಸೋರಿಕೆಯಿಂದ ಕೋವಿಡ್ -19 ಹುಟ್ಟಿಕೊಂಡಿದೆ ಎಂಬ ಅನುಮಾನಗಳೊಂದಿಗೆ, ವಿಶೇಷವಾಗಿ ಕೆಲವು ಅಮೆರಿಕದ ರಾಜಕಾರಣಿಗಳಲ್ಲಿ, ಶಿ ಝೆಂಗ್ಲಿ ಅವರ ಕೆಲಸದ ಬಗ್ಗೆ ವಿವಾದವುಂಟಾಗಿತ್ತು.

ಪ್ರಯೋಗಾಲಯ-ಸೋರಿಕೆ ಸಿದ್ಧಾಂತವು ವಿವಾದಾಸ್ಪದವಾಗಿಯೇ ಉಳಿದಿದೆ, ಅನೇಕ ವಿಜ್ಞಾನಿಗಳು ವೈರಸ್ ಮಧ್ಯವರ್ತಿ ವಾಹಕ ಮೂಲಕ ಮನುಷ್ಯರಿಗೆ ಹರಡುವ ಮೊದಲು ಪ್ರಾಣಿಗಳಲ್ಲಿ, ಬಹುಶಃ ಬಾವಲಿಗಳಿಂದಾಗಿ ಹುಟ್ಟಿಕೊಂಡಿರಬಹುದು ಎಂಬ ಊಹೆಯನ್ನು ಬೆಂಬಲಿಸುತ್ತಾರೆ. ಜೂನ್‌ನಲ್ಲಿ ಬಿಡುಗಡೆಯಾದ ಡಿಕ್ಲಾಸಿಫೈಡ್ US ಗುಪ್ತಚರ ದಾಖಲೆಗಳು ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ಬೆಂಬಲಿಸುವ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲದಿದ್ದರೂ, ಅದನ್ನು ಖಚಿತವಾಗಿ ತಳ್ಳಿಹಾಕಲಾಗುವುದಿಲ್ಲ ಎಂದು ಗಮನಿಸಿದರು.

ಇದನ್ನೂ ಓದಿ:ನೀವು ಇಂಡಿಯನ್ಸ್ ಮೂರ್ಖರು; ಸಿಂಗಾಪುರದಲ್ಲಿ ಮಹಿಳೆಯನ್ನು ನಿಂದಿಸಿದ ಚೀನಾದ ಕ್ಯಾಬ್ ಡ್ರೈವರ್

ಪ್ರತ್ಯೇಕವಾಗಿ, ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅನಾಮಧೇಯ ವಿಜ್ಞಾನಿಯೊಬ್ಬರು ಚೀನಾದ ಕೋವಿಡ್-19 ನಿರ್ವಹಣೆಯಲ್ಲಿ ಗ್ರಹಿಸಬಹುದಾದ ಬದಲಾವಣೆಯನ್ನು ಗಮನಿಸಿದ್ದು, ಚೀನಾದ ಅಧಿಕಾರಿಗಳು ವೈರಸ್‌ನ ಮಹತ್ವವನ್ನು ಕಡಿಮೆ ಮಾಡುತ್ತಿರಬಹುದು ಎಂದು ಸೂಚಿಸಿದ್ದಾರೆ. ಕೆಲವು ನಗರಗಳು ಸೋಂಕಿನ ಡೇಟಾವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿವೆ. ಇದು ಸಾರ್ವಜನಿಕ ಆರೋಗ್ಯದ ಆದ್ಯತೆಗಳಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ