AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶಾನ್ಯ ಖಾರ್ಕಿವ್‌ನಲ್ಲಿ ಉಕ್ರೇನ್‌ನ ಪ್ರತಿದಾಳಿ ನಂತರ ಸೇನಾ ಪಡೆಗಳನ್ನು ಹಿಂಪಡೆದ ರಷ್ಯಾ

ಸುಮಾರು ಏಳು ತಿಂಗಳ ಯುದ್ಧದ ಪ್ರಾರಂಭದಲ್ಲಿ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ರಷ್ಯನ್ನರ ಹಿಮ್ಮೆಟ್ಟುವಿಕೆಯು ಉಕ್ರೇನಿಯನ್ ಪಡೆಗಳಿಗೆ ಅತಿದೊಡ್ಡ ಯಶಸ್ಸಾಗಿದೆ.

ಈಶಾನ್ಯ ಖಾರ್ಕಿವ್‌ನಲ್ಲಿ ಉಕ್ರೇನ್‌ನ ಪ್ರತಿದಾಳಿ ನಂತರ ಸೇನಾ ಪಡೆಗಳನ್ನು ಹಿಂಪಡೆದ ರಷ್ಯಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 11, 2022 | 7:18 PM

Share

ಕೈವ್: ಉಕ್ರೇನಿಯನ್ (Ukraine) ಪಡೆಗಳು ಭಾನುವಾರ ದೇಶದ ಪೂರ್ವದಲ್ಲಿ ಪ್ರತಿದಾಳಿ ನಡೆಸಿದ್ದು, ಇದು ಸಂಘರ್ಷದ ಹಾದಿಯನ್ನು ತೀವ್ರವಾಗಿ ಬದಲಾಯಿಸಿದೆ. ಈಶಾನ್ಯ ಖಾರ್ಕಿವ್ (Kharkiv) ಪ್ರದೇಶದಲ್ಲಿ ರಷ್ಯಾ-ಆಕ್ರಮಿತ ಪ್ರದೇಶಗಳನ್ನು ಮರುಪಡೆಯುವುದಕ್ಕಾಗಿ ಉಕ್ರೇನ್‌ನ ತ್ವರಿತ ಕ್ರಮವು ಮಾಸ್ಕೋ ತನ್ನ ಪಡೆಗಳನ್ನು ಸುತ್ತುವರಿಯದಂತೆ ತಡೆದವು. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಭಾನುವಾರ 200 ದಿನಗಳನ್ನು ಪೂರೈಸಿದ್ದು ಆತುರದ ಹಿಮ್ಮೆಟ್ಟುವಿಕೆಯಲ್ಲಿ ಗಮನಾರ್ಹ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ತಡರಾತ್ರಿ ನೀಡಿದ ವಿಡಿಯ ಸಂದೇಶದಲ್ಲಿ ರಷ್ಯನ್ನರನ್ನು ಲೇವಡಿ ಮಾಡಿದ್ದುಈ ದಿನಗಳಲ್ಲಿ ರಷ್ಯಾದ ಸೈನ್ಯವು ತಾನು ಮಾಡಬಹುದಾದ ಅತ್ಯುತ್ತಮವಾದುದನ್ನು ಪ್ರದರ್ಶಿಸುತ್ತಿದೆ, ಅದು ಹಿಂದಡಿಯಿಡುತ್ತಿದೆ ಎಂದು ಹೇಳಿದರು. ಭಾನುವಾರ ಝೆಲೆನ್ಸ್ಕಿ ಉಕ್ರೇನಿಯನ್ ಸೈನಿಕರು ಚ್ಕಾಲೋವ್ಸ್ಕೆ ಮೇಲೆ ರಾಷ್ಟ್ರ  ಧ್ವಜವನ್ನು ಹಾರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದರು. ಈ ಪಟ್ಟಣವನ್ನು ಪ್ರತಿದಾಳಿಯಲ್ಲಿ ರಷ್ಯನ್ನರಿಂದ ಉಕ್ರೇನ್ ಸೈನಿಕರು ಮರುಪಡೆದಿದ್ದಾರೆ.

ಸೆಪ್ಟೆಂಬರ್ ಆರಂಭದಿಂದ ಉಕ್ರೇನ್ ಸುಮಾರು 3,000 ಚದರ ಕಿಮೀ (ಸುಮಾರು 1,160 ಚದರ ಮೈಲುಗಳು) ವಿಮೋಚನೆಗೊಳಿಸಿದೆ ಎಂದು ಉಕ್ರೇನ್‌ನ ಮಿಲಿಟರಿ ಮುಖ್ಯಸ್ಥ ಜನರಲ್ ವ್ಯಾಲೆರಿ ಜಲುಜ್ನಿ ಭಾನುವಾರ ಹೇಳಿದ್ದಾರೆ. ಉಕ್ರೇನಿಯನ್ ಪಡೆಗಳು ಈಗ ರಷ್ಯಾದ ಗಡಿಯಿಂದ ಕೇವಲ 50 ಕಿಮೀ (ಸುಮಾರು 30 ಮೈಲುಗಳು) ದೂರದಲ್ಲಿವೆ ಎಂದು ಅವರು ಹೇಳಿದ್ದಾರೆ.

ಸುಮಾರು ಏಳು ತಿಂಗಳ ಯುದ್ಧದ ಪ್ರಾರಂಭದಲ್ಲಿ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ರಷ್ಯನ್ನರ ಹಿಮ್ಮೆಟ್ಟುವಿಕೆಯು ಉಕ್ರೇನಿಯನ್ ಪಡೆಗಳಿಗೆ ಅತಿದೊಡ್ಡ ಯಶಸ್ಸಾಗಿದೆ. ಖಾರ್ಕಿವ್ ಪ್ರದೇಶದಲ್ಲಿ ಉಕ್ರೇನ್‌ನ ದಾಳಿಯು ಮಾಸ್ಕೋಗೆ ಅಚ್ಚರಿಯನ್ನುಂಟು ಮಾಡಿದೆ. ಇದರ ಬೆನ್ನಲ್ಲೇ ರಷ್ಯಾ ತನ್ನ ಅನೇಕ ಸೈನ್ಯವನ್ನು ಪ್ರದೇಶದಿಂದ ದಕ್ಷಿಣಕ್ಕೆ ಸ್ಥಳಾಂತರಿಸಿತು.

ರಷ್ಯಾದ ರಕ್ಷಣಾ ಸಚಿವಾಲಯವು ಶನಿವಾರ ಖಾರ್ಕಿವ್ ಪ್ರದೇಶದ ಇಝಿಯಂ ಮತ್ತು ಇತರ ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಂಡಿದ್ದು ದಕ್ಷಿಣಕ್ಕೆ ನೆರೆಯ ಡೊನೆಟ್ಸ್ಕ್ ಪ್ರದೇಶದಲ್ಲಿ ರಷ್ಯಾದ ಪಡೆಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ಈ ವರ್ಷದ ಆರಂಭದಲ್ಲಿ ಅವರು ರಾಜಧಾನಿಯನ್ನು ವಶಕ್ಕೆ ಪಡೆಯಲು ವಿಫಲವಾದಾಗ ಕೈವ್ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಲು ರಷ್ಯಾ ನೀಡಿದ ಸಮರ್ಥನೆಯಂತೆ ಇದು ಕಾಣುತ್ತಿದೆ. ಡೊನೆಟ್ಸ್ಕ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಮಾಸ್ಕೋದ ಪ್ರಯತ್ನದಲ್ಲಿ ಇಝಿಯಂ ಸುತ್ತಲಿನ ರಷ್ಯಾದ ಪಡೆಗಳ ಗುಂಪು ಪ್ರಮುಖ ಪಾತ್ರವಹಿಸಿವೆ. ಸೇನಾ ಪಡೆಯ  ಹಿಂತೆಗೆದುಕೊಳ್ಳುವಿಕೆಯು ಈಗ ಉಕ್ರೇನಿಯನ್ ಭದ್ರಕೋಟೆಗಳಾದ ಸ್ಲೋವಿಯನ್ಸ್ಕ್ ಮತ್ತು ಕ್ರಾಮಾಟೋರ್ಸ್ಕ್ಗೆ  ಮೇಲೆ  ರಷ್ಯಾದ ಆಕ್ರಮಣವನ್ನು ದುರ್ಬಲಗೊಳಿಸಲಿದೆ.

Published On - 7:13 pm, Sun, 11 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?