AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ

ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ ‘ಮೊಸ್​ಕ್​ವಾ’ ಕ್ಷಿಪಣಿ ವಾಹನ ನೌಕೆಯ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದೆ.

ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ
ರಷ್ಯಾ ನೌಕಾಪಡೆಯ ಮಹತ್ವದ ಯುದ್ಧನೌಕೆ ಮೊಸ್​ಕ್​ವಾ (ಸಂಗ್ರಹ ಚಿತ್ರ)
TV9 Web
| Edited By: |

Updated on: Apr 14, 2022 | 2:55 PM

Share

ಕೀವ್: ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ ‘ಮೊಸ್​ಕ್​ವಾ’ ಕ್ಷಿಪಣಿ ವಾಹನ ನೌಕೆಯ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಯುದ್ಧನೌಕೆಗೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಯುದ್ಧನೌಕೆಯ ಮೇಲೆ ಕ್ಷಿಪಣಿ ಸ್ಫೋಟಗೊಂಡಾಗ, ನೌಕೆಯಲ್ಲಿದ್ದ ಸ್ಫೋಟಕಗಳು ಸಹ ಸ್ಫೋಟಿಸಿದವು. ನೌಕೆಯಲ್ಲಿದ್ದ ಯಾವೊಬ್ಬ ಸಿಬ್ಬಂದಿಯೂ ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾದ ರಕ್ಷಣಾ ಇಲಾಖೆಯು ಈವರೆಗೂ ಉಕ್ರೇನ್ ದಾಳಿಯಿಂದ ಯುದ್ಧನೌಕೆ ಹಾನಿಗೀಡಾಗಿದೆ ಎಂಬ ವರದಿಗಳನ್ನು ಪುಷ್ಟೀಕರಿಸಿಲ್ಲ. ‘ಸ್ಫೋಟದ ನಿಜವಾದ ಕಾರಣ ಏನು ಎಂಬ ಬಗ್ಗೆ ತನಿಖೆಯ ನಂತರ ಮಾಹಿತಿ ನೀಡಲಾಗುವುದು’ ಎಂದಷ್ಟೇ ಹೇಳುತ್ತಿದೆ.

ಉಕ್ರೇನ್​ನ ಒಡೆಸ್ಸಾ ತೀರದಿಂದ ಮರಿಯುಪೋಲ್​ವರೆಗಿನ ಸಾಗರ ಗಡಿಯನ್ನು ರಷ್ಯಾ ನಿರ್ಬಂಧಿಸಿತ್ತು. ಈ ನಿರ್ಬಂಧ ಆದೇಶ ಜಾರಿಗೊಳಿಸುವಲ್ಲಿ ಮೊಸ್​ಕ್​ವಾ ಯುದ್ಧನೌಕೆಯು ಮಹತ್ವದ ಪಾತ್ರ ನಿರ್ವಹಿಸಿತ್ತು. ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿದ ಆರಂಭದ ದಿನಗಳಲ್ಲಿ ಮೊಸ್​ಕ್​ವಾ ನೇತೃತ್ವದ ಇತರ ಯುದ್ಧನೌಕೆಗಳು ಉಕ್ರೇನ್​ನ ತೀರ ಪ್ರದೇಶಗಳ ಮೇಲೆ ಅವ್ಯಾಹತ ದಾಳಿ ನಡೆಸಿದ್ದವು. ಉಕ್ರೇನ್​ನ ಸ್ನೇಕ್ ಐಲ್ಯಾಂಡ್​ನಲ್ಲಿ ಶರಣಾಗಲು ನಿರಾಕರಿಸಿದ ಉಕ್ರೇನ್ ಯೋಧರ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಮಸ್​ಕ್​ವಾ ಯುದ್ಧ ನೌಕೆಯು ವಿಶ್ವದ ಗಮನ ಸೆಳೆದಿತ್ತು. ಈ ಮೊದಲು ರಷ್ಯಾ ಇದೇ ಯುದ್ಧನೌಕೆಯನ್ನು ಸಿರಿಯಾ ಮೇಲಿನ ದಾಳಿಗೂ ನಿಯೋಜಿಸಿತ್ತು. ಅಲ್ಲಿ ರಷ್ಯಾದ ಸಶಸ್ತ್ರಪಡೆಗಳಿಗೆ ಕಾವಲುನೌಕೆಯಾಗಿ ಕಾರ್ಯನಿರ್ವಹಿಸಿತ್ತು.

ರಷ್ಯಾದ ಭೂಗಡಿಯೊಳಗಿರುವ ತೈಲಸಂಗ್ರಹಾಗಾರದ ಮೇಲೆ ದಾಳಿ ನಡೆಸಿ ವ್ಯಾಪಕ ಹಾನಿ ಮಾಡಿದ್ದ ಉಕ್ರೇನ್, ಇದೀಗ ರಷ್ಯಾ ರಕ್ಷಣಾ ವ್ಯವಸ್ಥೆಯ ಅತಿ ಪ್ರಮುಖ ಯುದ್ಧನೌಕೆಯನ್ನು ಹಾಳುಗೆಡವಿದೆ. ಈ ಬೆಳವಣಿಗೆಗಳಿಂದ ಸಿಟ್ಟಿಗೆದ್ದಿರುವ ರಷ್ಯಾ, ಕೀವ್ ನಗರದ ಮೇಲೆ ಮತ್ತೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ರಷ್ಯಾ ಪಡೆಗಳು ಹಿಂದಿರುಗಿದ ನಂತರ ತುಸು ನೆಮ್ಮದಿಯಾಗಿದ್ದ ಕೀವ್ ನಿವಾಸಿಗಳಲ್ಲಿ ಈ ಬೆದರಿಕೆ ಹೊಸ ಆತಂಕಕ್ಕೆ ಕಾರಣವಾಗಿದೆ.

ಉಕ್ರೇನ್ ಮೇಲೆ ದಾಳಿ ಮಾಡಿ ಸುಮಾರು ಎರಡು ತಿಂಗಳಾದರೂ ಇಡೀ ದೇಶ ಇನ್ನೂ ಸಂಪೂರ್ಣವಾಗಿ ರಷ್ಯಾದ ಸುಪರ್ದಿಗೆ ಬಂದಿಲ್ಲ. ಜಾಗತಿಕ ಮಟ್ಟದಲ್ಲಿ ಮಿಲಿಟರಿ ಸೂಪರ್ ಪವರ್ ಎನಿಸಿಕೊಂಡಿರುವ ರಷ್ಯಾಗೆ ಇದು ದೊಡ್ಡ ಹಿನ್ನಡೆಯಾಗಿದೆ. ಕೆಲವೇ ದಿನಗಳಲ್ಲಿ ಮತ್ತಷ್ಟು ಪಡೆಗಳನ್ನು ಒಗ್ಗೂಡಿಸಿಕೊಂಡು ಉಕ್ರೇನ್ ಮೇಲೆ ರಷ್ಯಾ ಮುಗಿಬೀಳಬಹುದು ಎಂಬ ವಿಶ್ಲೇಷಣೆಗಳು ಜಾಗತಿಕ ಮಾಧ್ಯಮಗಳಲ್ಲಿ ಪ್ರಟವಾಗುತ್ತಿವೆ.

ಮತ್ತೊಂದು ಬೆಳವಣಿಗೆಯಲ್ಲಿ ಉಕ್ರೇನ್​ನ ನೆರವಿಗೆ ಅಮೆರಿಕ ಧಾವಿಸಿದ್ದು, ಸಶಸ್ತ್ರ ಪಡೆಗಳ ಗಸ್ತು ವಾಹನಗಳು, ಹೆಲಿಕಾಪ್ಟರ್​ ಒದಗಿಸಲು ಮುಂದಾಗಿದೆ. ಈ ಮೊದಲು ಉಕ್ರೇನ್​ಗೆ ನೀಡಲು ನಿರಾಕರಿಸಿದ್ದ ಕೆಲ ಯುದ್ಧೋಪಕರಣಗಳನ್ನು ಒದಗಿಸಲು ಇದೀಗ ಅಮೆರಿಕ ಸಮ್ಮತಿಸಿದ್ದು, ಉಕ್ರೇನ್ ಸಹ ರಷ್ಯಾದ ಹೊಸ ದಾಳಿಯನ್ನು ಎದುರಿಸಲು ಸಿದ್ಧತೆಯನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ: ಉಕ್ರೇನ್​ಗೆ ಹೆಚ್ಚುವರಿ ನೆರವು ಒದಗಿಸುವ ಕುರಿತು ಬೈಡೆನ್ ಮತ್ತು ಝೆಲೆನ್​ಸ್ಕಿ ನಡುವೆ ಸುದೀರ್ಘ ಮಾತುಕತೆ: ಶ್ವೇತ ಭವನ

ಇದನ್ನೂ ಓದಿಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ