AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಖಾತೆ ವಿವರ ಬಹಿರಂಗವಾಗಿ ಹಂಚಿಕೊಂಡಿದ್ದ ಸ್ವಿಸ್​ ಬ್ಯಾಂಕ್​ ಕೋರ್ಟ್​ ಕಟಕಟೆಗೆ ಎಳೆದ ದಂಪತಿ: ಏನಿದರ ವೃತ್ತಾಂತ?

ಎಸ್ತರ್​ ಜುಹೋವಿಟ್​ಸ್ಕಿ ಯುಎಸ್ ಪೌರತ್ವ ಹೊಂದಿಲ್ಲ. ಆದರೂ ​ಐಆರ್​ಎಸ್ ಆಣಿತಿಯಂತೆ ತನ್ನ ಪತ್ನಿಯ ಬ್ಯಾಂಕ್​ ವಿವರವನ್ನು ಸ್ವಿಸ್​ ಬ್ಯಾಂಕ್ ಯುಬಿಎಸ್ ಹಸ್ತಾಂತರಿಸಿತ್ತು. ಇದು ಸರಿಯಲ್ಲ ಎಂಬುದು ದಂಪತಿಯ ವಾದವಾಗಿದೆ. ಈ ಸಂಬಂಧ ಆರ್ಥಿಕ ನಗರಿ ಮ್ಯಾನ್​ಹಟ್ಟನ್ ನಲ್ಲಿರುವ ಫೆಡರಲ್​ ಕೋರ್ಟ್​ಗೆ ಅರ್ಜಿ ಹಾಕಿಕೊಂಡಿದ್ದಾರೆ.​ ಎಸ್ತರ್​ ಜುಹೋವಿಟ್​ಸ್ಕಿ ಇಸ್ರೇಲ್​ ಮತ್ತು ಆಸ್ಟ್ರಿಯಾ ದೇಶಗಳ ಪೌರತ್ವ ಹೊಂದಿದ್ದಾರೆ. ಅವತು ಮೆದುಳು ಸಂಬಂಧಿ ಕಾಯಿಲೆಯಿಂದ (ಡಿಸ್ಲೆಕ್ಸಿಯಾ -dyslexia) ಬಳಲುತ್ತಿದ್ದರು.

ಪತ್ನಿಯ ಖಾತೆ ವಿವರ ಬಹಿರಂಗವಾಗಿ ಹಂಚಿಕೊಂಡಿದ್ದ ಸ್ವಿಸ್​ ಬ್ಯಾಂಕ್​ ಕೋರ್ಟ್​ ಕಟಕಟೆಗೆ ಎಳೆದ ದಂಪತಿ: ಏನಿದರ ವೃತ್ತಾಂತ?
ಪತ್ನಿಯ ಖಾತೆ ವಿವರ ಬಹಿರಂಗವಾಗಿ ಹಂಚಿಕೊಂಡಿದ್ದ ಸ್ವಿಸ್​ ಬ್ಯಾಂಕ್​ ಕೋರ್ಟ್​ ಕಟಕಟೆಗೆ ಎಳೆದ ದಂಪತಿ
TV9 Web
| Edited By: |

Updated on:Dec 30, 2021 | 1:01 PM

Share

ನ್ಯೂಯಾರ್ಕ್​: ಪತ್ನಿಯ ಬ್ಯಾಂಕ್​ ಖಾತೆ ವಿವರಗಳನ್ನು (UBS Bank Account Info) ಬಹಿರಂಗವಾಗಿ ಹಂಚಿಕೊಂಡಿದ್ದ ಸ್ವಿಸ್​ ಬ್ಯಾಂಕ್ ಯುಬಿಎಸ್​ (Swiss Bank UBS) ವಿರುದ್ಧ ದಂಪತಿ (Couple) ಕೋರ್ಟ್​ ಮೆಟ್ಟಿಲೇರಿದ್ದಾರೆ. ನಷ್ಟದ ಬಾಬತು ಸರಿದೂಗಿಸಲು ಲಕ್ಷಾಂತರ ಅಮೆರಿಕನ್​ ಡಾಲರ್​ ನೀಡುವಂತೆ ಸೂಚಿಸಲಾಗಿದೆ. ಜೊನಾಥನ್​ ಮತ್ತು ಎಸ್ತರ್​ ಜುಹೋವಿಟ್​ಸ್ಕಿ ದಂಪತಿ ಸ್ವಿಸ್​ ಬ್ಯಾಂಕ್ ಯುಬಿಎಸ್​ ವಿರುದ್ಧ ಕಾನೂನು ಸಮರ ಸಾರಿದ್ದು, ಕೂಲಂಕಷ ಆಡಿಟ್​ ತನಿಖೆ ಬಳಿಕ ಭಾರೀ ಪ್ರಮಾಣದಲ್ಲಿ ಖಾತೆಯಲ್ಲಿ ನಷ್ಟ ಅನುಭವಿಸಿರುವುದು ಬೆಳಕಿಗೆ ಬಂತು. ಒಂದು ಹಂತದಲ್ಲಿ ಐಆರ್​ಎಸ್ ಅಪರಾಧ ವಿಭಾಗದ (IRS criminal division) ವಿರುದ್ಧವೂ ಪ್ರಕರಣ ದಾಖಲಿಸಲು ಉಲ್ಲೇಖ ಮಾಡಿದೆವು. ತಮ್ಮ ಖಾತೆ ಮಾಹಿತಿ ಹಂಚಿಕೆ ಅಗಾಧ ಪ್ರಮಾಣದಲ್ಲಿ ಏರುಪೇರು ಕಂಡಬಂದಿತ್ತು. ಕೊನೆಗೆ ಮಿಲಿಯನ್​ಗಟ್ಟಲೆ ದಂಡ ಕಟ್ಟಲು ಬ್ಯಾಂಕ್​ ಒಪ್ಪಿತು ಎಂದು ದಂಪತಿ ತಿಳಿಸಿದ್ದಾರೆ.

ಎಸ್ತರ್​ ಜುಹೋವಿಟ್​ಸ್ಕಿ ಯುಎಸ್ ಪೌರತ್ವ (U.S. citizen) ಹೊಂದಿಲ್ಲ. ಆದರೂ ​ಐಆರ್​ಎಸ್ (Internal Revenue Service) ಆಣಿತಿಯಂತೆ ತನ್ನ ಪತ್ನಿಯ ಬ್ಯಾಂಕ್​ ವಿವರವನ್ನು ಸ್ವಿಸ್​ ಬ್ಯಾಂಕ್ ಯುಬಿಎಸ್ ಹಸ್ತಾಂತರಿಸಿತ್ತು. ಇದು ಸರಿಯಲ್ಲ ಎಂಬುದು ದಂಪತಿಯ ವಾದವಾಗಿದೆ. ಈ ಸಂಬಂಧ ಆರ್ಥಿಕ ನಗರಿ ಮ್ಯಾನ್​ಹಟ್ಟನ್ ನಲ್ಲಿರುವ ಫೆಡರಲ್​ ಕೋರ್ಟ್​ಗೆ ಅರ್ಜಿ ಹಾಕಿಕೊಂಡಿದ್ದಾರೆ.​ ಎಸ್ತರ್​ ಜುಹೋವಿಟ್​ಸ್ಕಿ ಇಸ್ರೇಲ್​ ಮತ್ತು ಆಸ್ಟ್ರಿಯಾ ದೇಶಗಳ ಪೌರತ್ವ ಹೊಂದಿದ್ದಾರೆ. ಅವತು ಮೆದುಳು ಸಂಬಂಧಿ ಕಾಯಿಲೆಯಿಂದ (ಡಿಸ್ಲೆಕ್ಸಿಯಾ -dyslexia) ಬಳಲುತ್ತಿದ್ದರು. ಅವರ ಖಾತೆಯನ್ನು ಪತಿ ಜೊನಾಥನ್ ನಿರ್ವಹಿಸುತ್ತಿದ್ದರು. ಆದರೆ ಜೊನಾಥನ್ ದ್ವಿಪೌರತ್ವ ಪಡೆದಿದ್ದರು.

ಕಾಳ ಧನ ಸಂಗ್ರಹಕ್ಕೆ ಸ್ವರ್ಗವೆನಿಸಿದ್ದ ಸ್ವಿಸ್​ ಬ್ಯಾಂಕ್​ಗಳ ಮೇಲೆ ಅಮೆರಿಕಾದ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಅಮೆರಿಕ ಪ್ರಜೆಗಳು ತೆರಿಗೆ ತಪ್ಪಿಸಿ, ಈ ಬ್ಯಾಂಕ್​ಗಳಲ್ಲಿ ಹಣ ಠೇವಣಿಯಿಡುವುದಕ್ಕೆ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ UBS ಬ್ಯಾಂಕ್​ಗಳಿಗೆ 780 ದಶಲಕ್ಷ ಡಾಲರ್​ ದಂಡ ವಿಧಿಸಿದ್ದರು. ಅದಾದ ಬಳಿಕ ಸಾವಿರಾರು ಅಮೆರಿಕ ಪ್ರಜೆಗಳ ಮಾಹಿತಿಯನ್ನು UBS ಬ್ಯಾಂಕ್​ ಅಮೆರಿಕಾದ ತೆರಿಗೆ ಅಧಿಕಾರಿಗಳಿಗೆ ಒದಗಿಸಿತ್ತು.

ಎಸ್​ಬಿಐ ಬ್ಯಾಂಕ್​ ರಾಬರಿ, ಓರ್ವ ಉದ್ಯೋಗಿ ಹತ್ಯೆ, ಕ್ಯಾಮರಾದಲ್ಲಿ ಘಟನೆ ಸೆರೆ ಮುಂಬೈ: ಆಘಾತಕಾರಿ ಘಟನೆಯಲ್ಲಿ ಮುಂಬೈನ ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದ ದಹಿಸರ್​ ಶಾಖೆಯಲ್ಲಿ ದರೋಡೆ ನಡೆದಿದ್ದು, ಘಟನೆಯ ವೇಳೆ ಓರ್ವ ಉದ್ಯೋಗಿ ಹತ್ಯೆಗೀಡಾಗಿದ್ದು, ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಸಾಯಂಕಾಲ ಈ ಘಟನೆ ನಡೆದಿದೆ. ಬ್ಯಾಂಕ್​ನ ಸರ್ವೈಲೆನ್ಸ್ ಕ್ಯಾಮರಾಗಳಲ್ಲಿ ಇಡೀ ವೃತ್ತಾಂತ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಯ ಬಳಿಕ ಇಬ್ಬರೂ ಆಗುಂತಕರು ಪರಾರಿಯಾಗಿದ್ದಾರೆ. ಮೃತ ಉದ್ಯೋಗಿ ಎಸ್​ಬಿಐನ ಹೊರಗುತ್ತಿಗೆ ನೌಕರ ಎಂದು ತಿಳಿದುಬಂದಿದೆ.

ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್​ ಝಳಪಿಸುತ್ತಾ ಬ್ಯಾಂಕ್​ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದ ದಹಿಸರ್​ ಶಾಖೆಯಲ್ಲಿ ದರೋಡೆ ನಡೆಸುವಾಗ ಗುಂಡು ಹಾರಿಸಿ, ಒಬ್ಬ ಸಿಬ್ಬಂದಿಯನ್ನು ಸಾಯಿಸಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ಸುಮಾರು 2.5 ಲಕ್ಷ ರೂಪಾಯಿ ಹಣ ಮತ್ತು ಆಯುಧಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪೊಲೀಸ್​ ತಂಡಗಳು ದರೋಡೆಕೋರರ ಬೆನ್ನುಹತ್ತಿದ್ದವು.

Published On - 12:59 pm, Thu, 30 December 21

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು