AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ

ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ.

Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ
ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಉಗ್ರ
TV9 Web
| Edited By: |

Updated on: Aug 17, 2021 | 3:00 PM

Share

ಕಾಬೂಲ್​ ಏರ್​ಪೋರ್ಟ್ (Kabul Airport)​ಗೆ ನುಗ್ಗಲು ಯತ್ನಿಸಿದ ಅಫ್ಘಾನಿಸ್ತಾನ್​ (Afghanistan) ನಾಗರಿಕನೊಬ್ಬನತ್ತ ತಾಲಿಬಾನ್​ ಉಗ್ರ (Taliban Terrorist) ಗುಂಡು ಹಾರಿಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ತಾಲಿಬಾನ್​ ಉಗ್ರರ ನಿಯಂತ್ರಣದಿಂದ ಅಸ್ತವ್ಯಸ್ತಗೊಂಡ ಕಾಬೂಲ್ (Kabul)​​ನಲ್ಲಿ ನಡೆಯುತ್ತಿರುವವ ಒಂದೊಂದು ಬೆಳವಣಿಗೆಗಳೂ ಆತಂಕ ಸೃಷ್ಟಿಸಿದ್ದು, ಅಲ್ಲಿನ ಹಲವು ಫೋಟೋ-ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ನಾಗರಿಕನೆಡೆಗೆ ಉಗ್ರ ಗುಂಡು ಹಾರಿಸಿದ ವಿಡಿಯೋವನ್ನು ಅಸ್ವಕಾ ನ್ಯೂಸ್​ ಶೇರ್​ ಮಾಡಿದೆ. ಕಾಬೂಲ್​ ಏರ್​ಪೋರ್ಟ್​​ ಒಳ ನುಸುಳಲು ವ್ಯಕ್ತಿಯೊಬ್ಬ, ಹೊರಗಿನಿಂದ ಅತ್ಯಂತ ಎತ್ತರದ ಗೋಡೆಯನ್ನು ಹತ್ತಿ ಕುಳಿತು, ಇನ್ನೇನು ಏರ್​ಪೋರ್ಟ್​​ ಒಳಗೆ ಹಾರಬೇಕು ಎನ್ನುವಷ್ಟರಲ್ಲಿ, ಕಪ್ಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಆತನೆಡೆಗೆ ಗುಂಡು ಹಾರಿಸಿದ್ದಾನೆ. ಹಾಗಂತ ಆ ನಾಗರಿಕನಿಗೆ ಯಾವುದೇ ಗಾಯವೂ ಆಗಲಿಲ್ಲ. ಆದರೆ ಹೆದರಿದ ವ್ಯಕ್ತಿ ಹೊರಗೆ ಜಿಗಿದಿದ್ದಾನೆ. ಇನ್ನು ಅಪ್ಘಾನಿಸ್ತಾನದಿಂದ ಸಾವಿರಾರು ಮಂದಿ ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.

ಕಾಬೂಲ್​ ಏರ್​ಪೋರ್ಟ್​​ನಲ್ಲಿ ಸಿಕ್ಕ ವಿಮಾನವನ್ನ ನೂಕು-ನುಗ್ಗಲಿನಲ್ಲಿ ಏರುವ ದೃಶ್ಯ ನೋಡಿದರೆ ಜೀವ ಹಿಂಡಿದಂತಾಗುತ್ತದೆ. ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ. ಹಾಗೇ, ಭಾರತೀಯರನ್ನು ವಾಪಸ್​ ಕರೆತರಲಾಗಿದೆ. ಇನ್ನು ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಭಾರತದಲ್ಲಿ ಸಹಾಯವಾಣಿಯನ್ನೂ ಪ್ರಾರಂಭಿಸಲಾಗಿದೆ. ಒಟ್ಟಾರೆ, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದು, ಅಲ್ಲಿನವರ ಜೀವನ ಅಭದ್ರತೆಗೆ ಸಿಲುಕಿದೆ.

ಇದನ್ನೂ ಓದಿ: Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 22,999 ರೂ.

8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?