Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ

ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ.

Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ
ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಉಗ್ರ
Follow us
| Updated By: Lakshmi Hegde

Updated on: Aug 17, 2021 | 3:00 PM

ಕಾಬೂಲ್​ ಏರ್​ಪೋರ್ಟ್ (Kabul Airport)​ಗೆ ನುಗ್ಗಲು ಯತ್ನಿಸಿದ ಅಫ್ಘಾನಿಸ್ತಾನ್​ (Afghanistan) ನಾಗರಿಕನೊಬ್ಬನತ್ತ ತಾಲಿಬಾನ್​ ಉಗ್ರ (Taliban Terrorist) ಗುಂಡು ಹಾರಿಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ತಾಲಿಬಾನ್​ ಉಗ್ರರ ನಿಯಂತ್ರಣದಿಂದ ಅಸ್ತವ್ಯಸ್ತಗೊಂಡ ಕಾಬೂಲ್ (Kabul)​​ನಲ್ಲಿ ನಡೆಯುತ್ತಿರುವವ ಒಂದೊಂದು ಬೆಳವಣಿಗೆಗಳೂ ಆತಂಕ ಸೃಷ್ಟಿಸಿದ್ದು, ಅಲ್ಲಿನ ಹಲವು ಫೋಟೋ-ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ನಾಗರಿಕನೆಡೆಗೆ ಉಗ್ರ ಗುಂಡು ಹಾರಿಸಿದ ವಿಡಿಯೋವನ್ನು ಅಸ್ವಕಾ ನ್ಯೂಸ್​ ಶೇರ್​ ಮಾಡಿದೆ. ಕಾಬೂಲ್​ ಏರ್​ಪೋರ್ಟ್​​ ಒಳ ನುಸುಳಲು ವ್ಯಕ್ತಿಯೊಬ್ಬ, ಹೊರಗಿನಿಂದ ಅತ್ಯಂತ ಎತ್ತರದ ಗೋಡೆಯನ್ನು ಹತ್ತಿ ಕುಳಿತು, ಇನ್ನೇನು ಏರ್​ಪೋರ್ಟ್​​ ಒಳಗೆ ಹಾರಬೇಕು ಎನ್ನುವಷ್ಟರಲ್ಲಿ, ಕಪ್ಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಆತನೆಡೆಗೆ ಗುಂಡು ಹಾರಿಸಿದ್ದಾನೆ. ಹಾಗಂತ ಆ ನಾಗರಿಕನಿಗೆ ಯಾವುದೇ ಗಾಯವೂ ಆಗಲಿಲ್ಲ. ಆದರೆ ಹೆದರಿದ ವ್ಯಕ್ತಿ ಹೊರಗೆ ಜಿಗಿದಿದ್ದಾನೆ. ಇನ್ನು ಅಪ್ಘಾನಿಸ್ತಾನದಿಂದ ಸಾವಿರಾರು ಮಂದಿ ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.

ಕಾಬೂಲ್​ ಏರ್​ಪೋರ್ಟ್​​ನಲ್ಲಿ ಸಿಕ್ಕ ವಿಮಾನವನ್ನ ನೂಕು-ನುಗ್ಗಲಿನಲ್ಲಿ ಏರುವ ದೃಶ್ಯ ನೋಡಿದರೆ ಜೀವ ಹಿಂಡಿದಂತಾಗುತ್ತದೆ. ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ. ಹಾಗೇ, ಭಾರತೀಯರನ್ನು ವಾಪಸ್​ ಕರೆತರಲಾಗಿದೆ. ಇನ್ನು ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಭಾರತದಲ್ಲಿ ಸಹಾಯವಾಣಿಯನ್ನೂ ಪ್ರಾರಂಭಿಸಲಾಗಿದೆ. ಒಟ್ಟಾರೆ, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದು, ಅಲ್ಲಿನವರ ಜೀವನ ಅಭದ್ರತೆಗೆ ಸಿಲುಕಿದೆ.

ಇದನ್ನೂ ಓದಿ: Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 22,999 ರೂ.

8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ