AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ

ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ
ಹೊತ್ತಿ ಉರಿದ ಟೆಸ್ಲಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 25, 2022 | 7:25 PM

Share

ಕೆನಡಾದಲ್ಲಿ (Canada) ಶುಕ್ರವಾರ ಟೆಸ್ಲಾ (Tesla Model Y )ಮಾಲೀಕರು ತಮ್ಮ 2021 ಮಾಡೆಲ್ ವೈ ಅನ್ನು ಚಾಲನೆ ಮಾಡುತ್ತಿದ್ದಾಗ, ಕಾರು ದೋಷದ ಬಗ್ಗೆ ಎಚ್ಚರಿಕೆ ರವಾನೆಯಾಯಿತು. ಪವರ್ ಡೌನ್ ಆಯ್ತು. ಒಳಗೆ ಲಾಕ್ ಆಗಿರುವ ಮಾಲೀಕ. ತಕ್ಷಣವೇ ದಟ್ಟವಾದ ಹೊಗೆ ಬರಲು ಶುರುವಾಯ್ತು. ಈ ಹೊತ್ತಲ್ಲಿ ವಾಹನದಿಂದ ಹೊರಬರಲು ಕಾರಿನ ಕಿಟಕಿಯನ್ನು ಒಡೆಯುವುದನ್ನು ಬಿಟ್ಟರೆ ಮಾಲೀಕರಿಗೆ ಬೇರೆ ದಾರಿ ಇರಲಿಲ್ಲ. ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ರೆಕಾರ್ಡ್ ಮಾಡಿ ಅದರ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸುಮಾರು ಐದು ನಿಮಿಷಗಳನ್ನು ತೆಗೆದುಕೊಂಡರು. ಬಾಗಿಲು ತೆರೆಯಲಾಗಲಿಲ್ಲ ಎಂದು ಜೂಥಾ ಹೇಳಿರುವುದಾಗಿ ಕೆನಡಾದ ಸುದ್ದಿ ಸಂಸ್ಥೆಯಾದ ಸಿಟಿವಿ ನ್ಯೂಸ್‌ನಿಂದ ಉಲ್ಲೇಖಿಸಿದೆ. ಕಿಟಕಿಗಳನ್ನು ಕೆಳಗಿಳಿಸಿಲು ಆಗುತ್ತಿರಲಿಲ್ಲ ನೀವು ಸಿಕ್ಕಿಬಿದ್ದಿರುವಾಗ ಒಂದು ಕ್ಷಣದಲ್ಲಿ ಭಯಭೀತರಾಗಿ ಬಿಡುತ್ತೀರಿ. ನಾನು ಕಿಟಕಿಯನ್ನು ಒಡೆದುಹೊರಬಂದೆ ತಕ್ಷಣವೇ 911 ಗೆ ಕರೆ ಮಾಡಿದೆ, ”ಎಂದು ಜೂಥಾ ಹೇಳಿದರು.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿನ ಕಥೆಗಳನ್ನು ಒಳಗೊಂಡಿರುವ ವೆಬ್‌ಸೈಟ್ ಎಲೆಕ್ಟ್ರೆಕ್ ಪ್ರಕಾರ ಜುಥಾ ಕೇವಲ ಎಂಟು ತಿಂಗಳ ಹಿಂದೆ ವಾಹನವನ್ನು ಖರೀದಿಸಿದ್ದಾರೆ. ಟೆಸ್ಲಾ ವಾಹನದ ಬಾಗಿಲುಗಳನ್ನು ತನ್ನಿಂದತಾನೇ ಕಾರ್ಯ ನಿರ್ವಹಿಸುವವು ಆಗಿದ್ದರೂ ವಿದ್ಯುತ್ ಕಡಿತದ ಸಂದರ್ಭದಲ್ಲಿ ಅವು ಕಾರ್ಯನಿರ್ವಹಿಸುವುದಿಲ್ಲ. ಇವುಗಳನ್ನು ಕೈಯಿಂದಲೂ ತೆರೆಯಲು ಸಾಧ್ಯ ಆಟೋಮೊಬೈಲ್ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ಇದು ಆಗಾಗ ಸಮಸ್ಯೆಯಾಗಿದೆ. ಏಕೆಂದರೆ ಅವರು ಕಾರಿನ ಬಾಗಿಲು ತಂತಾನೇ ತೆರೆಯುವ ಬದಲಿಗೆ ಕೈಯಿಂದ ತೆರೆಯುತ್ತಾರೆ ಎಂದು ಎಲೆಕ್ಟ್ರೆಕ್ ವರದಿ ಹೇಳಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ