AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ

ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ
ಹೊತ್ತಿ ಉರಿದ ಟೆಸ್ಲಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 25, 2022 | 7:25 PM

ಕೆನಡಾದಲ್ಲಿ (Canada) ಶುಕ್ರವಾರ ಟೆಸ್ಲಾ (Tesla Model Y )ಮಾಲೀಕರು ತಮ್ಮ 2021 ಮಾಡೆಲ್ ವೈ ಅನ್ನು ಚಾಲನೆ ಮಾಡುತ್ತಿದ್ದಾಗ, ಕಾರು ದೋಷದ ಬಗ್ಗೆ ಎಚ್ಚರಿಕೆ ರವಾನೆಯಾಯಿತು. ಪವರ್ ಡೌನ್ ಆಯ್ತು. ಒಳಗೆ ಲಾಕ್ ಆಗಿರುವ ಮಾಲೀಕ. ತಕ್ಷಣವೇ ದಟ್ಟವಾದ ಹೊಗೆ ಬರಲು ಶುರುವಾಯ್ತು. ಈ ಹೊತ್ತಲ್ಲಿ ವಾಹನದಿಂದ ಹೊರಬರಲು ಕಾರಿನ ಕಿಟಕಿಯನ್ನು ಒಡೆಯುವುದನ್ನು ಬಿಟ್ಟರೆ ಮಾಲೀಕರಿಗೆ ಬೇರೆ ದಾರಿ ಇರಲಿಲ್ಲ. ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ರೆಕಾರ್ಡ್ ಮಾಡಿ ಅದರ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸುಮಾರು ಐದು ನಿಮಿಷಗಳನ್ನು ತೆಗೆದುಕೊಂಡರು. ಬಾಗಿಲು ತೆರೆಯಲಾಗಲಿಲ್ಲ ಎಂದು ಜೂಥಾ ಹೇಳಿರುವುದಾಗಿ ಕೆನಡಾದ ಸುದ್ದಿ ಸಂಸ್ಥೆಯಾದ ಸಿಟಿವಿ ನ್ಯೂಸ್‌ನಿಂದ ಉಲ್ಲೇಖಿಸಿದೆ. ಕಿಟಕಿಗಳನ್ನು ಕೆಳಗಿಳಿಸಿಲು ಆಗುತ್ತಿರಲಿಲ್ಲ ನೀವು ಸಿಕ್ಕಿಬಿದ್ದಿರುವಾಗ ಒಂದು ಕ್ಷಣದಲ್ಲಿ ಭಯಭೀತರಾಗಿ ಬಿಡುತ್ತೀರಿ. ನಾನು ಕಿಟಕಿಯನ್ನು ಒಡೆದುಹೊರಬಂದೆ ತಕ್ಷಣವೇ 911 ಗೆ ಕರೆ ಮಾಡಿದೆ, ”ಎಂದು ಜೂಥಾ ಹೇಳಿದರು.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿನ ಕಥೆಗಳನ್ನು ಒಳಗೊಂಡಿರುವ ವೆಬ್‌ಸೈಟ್ ಎಲೆಕ್ಟ್ರೆಕ್ ಪ್ರಕಾರ ಜುಥಾ ಕೇವಲ ಎಂಟು ತಿಂಗಳ ಹಿಂದೆ ವಾಹನವನ್ನು ಖರೀದಿಸಿದ್ದಾರೆ. ಟೆಸ್ಲಾ ವಾಹನದ ಬಾಗಿಲುಗಳನ್ನು ತನ್ನಿಂದತಾನೇ ಕಾರ್ಯ ನಿರ್ವಹಿಸುವವು ಆಗಿದ್ದರೂ ವಿದ್ಯುತ್ ಕಡಿತದ ಸಂದರ್ಭದಲ್ಲಿ ಅವು ಕಾರ್ಯನಿರ್ವಹಿಸುವುದಿಲ್ಲ. ಇವುಗಳನ್ನು ಕೈಯಿಂದಲೂ ತೆರೆಯಲು ಸಾಧ್ಯ ಆಟೋಮೊಬೈಲ್ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ಇದು ಆಗಾಗ ಸಮಸ್ಯೆಯಾಗಿದೆ. ಏಕೆಂದರೆ ಅವರು ಕಾರಿನ ಬಾಗಿಲು ತಂತಾನೇ ತೆರೆಯುವ ಬದಲಿಗೆ ಕೈಯಿಂದ ತೆರೆಯುತ್ತಾರೆ ಎಂದು ಎಲೆಕ್ಟ್ರೆಕ್ ವರದಿ ಹೇಳಿದೆ.

ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ