Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಕೊವಿಡ್ ರೋಗಿ ವುಹಾನ್ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು: ವೈರಾಲಜಿಸ್ಟ್

ವೈರಾಲಜಿಸ್ಟ್ (virologist) ಮೈಕೆಲ್ ವೊರೊಬೆಯ(Michael Worobey) ಪ್ರಕಾರ, ವುಹಾನ್‌ನ ಅಕೌಂಟೆಂಟ್ ಕೊವಿಡ್ ತಗುಲಿದ ಮೊದಲ ವ್ಯಕ್ತಿ ಎಂದು ವ್ಯಾಪಕವಾಗಿ ಭಾವಿಸಲಾಗಿದೆ, ಆರಂಭದಲ್ಲಿ ವರದಿ ಮಾಡಿದ್ದಕ್ಕಿಂತ ಎಂಟು ದಿನಗಳ ನಂತರ ರೋಗಲಕ್ಷಣಗಳನ್ನು ಅವರಲ್ಲಿ ಕಂಡುಬಂದಿತ್ತು.

ಮೊದಲ ಕೊವಿಡ್ ರೋಗಿ ವುಹಾನ್ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು: ವೈರಾಲಜಿಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 19, 2021 | 4:12 PM

ಬೀಜಿಂಗ್ : ಕೊರೊನಾವೈರಸ್ (Coronavirus) ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿನಾಶವನ್ನುಂಟುಮಾಡುವುದನ್ನು ಮುಂದುವರೆಸುತ್ತಿರುವಾಗ, ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ( Wuhan market) ಕೊವಿಡ್ -19 ರ ಮೊದಲ ಪ್ರಕರಣವನ್ನು ಗುರುತಿಸಲಾಗಿದೆ ಎಂದು ಉನ್ನತ ವೈರಾಲಜಿಸ್ಟ್ ಬಹಿರಂಗಪಡಿಸಿದ್ದಾರೆ. ವೈರಾಲಜಿಸ್ಟ್ (virologist) ಮೈಕೆಲ್ ವೊರೊಬೆಯ(Michael Worobey) ಪ್ರಕಾರ, ವುಹಾನ್‌ನ ಅಕೌಂಟೆಂಟ್ ಕೊವಿಡ್ ತಗುಲಿದ ಮೊದಲ ವ್ಯಕ್ತಿ ಎಂದು ವ್ಯಾಪಕವಾಗಿ ಭಾವಿಸಲಾಗಿದೆ, ಆರಂಭದಲ್ಲಿ ವರದಿ ಮಾಡಿದ್ದಕ್ಕಿಂತ ಎಂಟು ದಿನಗಳ ನಂತರ ರೋಗಲಕ್ಷಣಗಳನ್ನು ಅವರಲ್ಲಿ ಕಂಡುಬಂದಿತ್ತು. ಆದರೆ ಈ ಮೊದಲು ಕುಖ್ಯಾತ ಹುವಾನಾನ್ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಲ್ಲಿ ಪ್ರಕರಣ ಕಂಡುಬಂದಿತ್ತು ಎಂದು ಹೇಳಲಾಗಿತ್ತು. “ಮೂಲ ರೋಗಿಯು ಕಾಡು ಮತ್ತು ಸಾಕುಪ್ರಾಣಿಗಳನ್ನು ಮಾರಾಟ ಮಾಡುವ ವುಹಾನ್ ಮಾರುಕಟ್ಟೆಗೆ ಎಂದಿಗೂ ಹೋಗದ ವ್ಯಕ್ತಿಯಾಗುವುದಕ್ಕಿಂತ ಹೆಚ್ಚಾಗಿ, ಕೊವಿಡ್ -19 ರ ಮೊದಲ ಪ್ರಕರಣವು ಮಾರುಕಟ್ಟೆಯಲ್ಲಿ ಕೆಲಸ ಮಾಡಿದ ಮಹಿಳೆ ಎಂದು ತಿಳಿದುಬಂದಿದೆ” ಎಂದು ವೊರೊಬೆ ವಿಜ್ಞಾನ ಪತ್ರಿಕೆಯಲ್ಲಿ ಗುರುವಾರ ಬರೆದಿದ್ದಾರೆ. ವೊರೊಬೆಯ ಸಂಶೋಧನೆಯು ಹುವಾನಾನ್ ಮಾರುಕಟ್ಟೆಯು ಆರಂಭಿಕ ಏಕಾಏಕಿ ಮೂಲವಾಗಿದೆ ಮತ್ತು SARS-CoV-2 ವೈರಸ್ ಸೂಪರ್-ಸ್ಪ್ರೆಡಿಂಗ್ ಕಾರಣವಾಗಿದೆ ಎಂದು ಸೂಚಿಸುತ್ತದೆ.

ಹುವಾನಾನ್ ಮಾರುಕಟ್ಟೆ ಅಥವಾ ವುಹಾನ್‌ನಲ್ಲಿನ ಯಾವುದೇ ಜೀವಂತ-ಪ್ರಾಣಿ ಮಾರುಕಟ್ಟೆಯಲ್ಲಿ ಸಂಗ್ರಹಿಸಲಾದ ಯಾವುದೇ ಜೀವಂತ ಸಸ್ತನಿಗಳನ್ನು SARS-CoV-2-ಸಂಬಂಧಿತ ವೈರಸ್‌ಗಳಿಗಾಗಿ ಪರೀಕ್ಷಿಸಲಾಗಿಲ್ಲ.  ಜನವರಿ 1 ರಂದು ಹುವಾನಾನ್ ಮಾರುಕಟ್ಟೆಯನ್ನು ಮುಚ್ಚಲಾಯಿತು ಮತ್ತು ಸೋಂಕುರಹಿತಗೊಳಿಸಲಾಯಿತು ಎಂದು ವೊರೊಬೆ ತನ್ನ ಅಧ್ಯಯನದಲ್ಲಿ ಸೂಚಿಸಿದ್ದಾರೆ.

“ಅದೇನೇ ಇದ್ದರೂ, ಹೆಚ್ಚಿನ ಆರಂಭಿಕ ರೋಗಲಕ್ಷಣದ ಪ್ರಕರಣಗಳು ಹುವಾನಾನ್ ಮಾರುಕಟ್ಟೆಗೆ ಸಂಬಂಧಿಸಿವೆ . ನಿರ್ದಿಷ್ಟವಾಗಿ ರಕೂನ್ ನಾಯಿಗಳನ್ನು ಪಂಜರದಲ್ಲಿ ಇರಿಸಲಾಗಿರುವ ಪಶ್ಚಿಮ ವಿಭಾಗ ಸಾಂಕ್ರಾಮಿಕದ ಜೀವಂತ-ಪ್ರಾಣಿ ಮಾರುಕಟ್ಟೆ ಮೂಲದ ಬಲವಾದ ಪುರಾವೆಗಳನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.

ಜಾಗತಿಕ ಕೊವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ ಜಾಗತಿಕ ಕೊವಿಡ್ 19 ಪ್ರಕರಣಗಳು 255,994,694 ಪ್ರಕರಣಗಳಿಗೆ ಏರಿದೆ ಮತ್ತು 5,131,102 ಜನರು ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಆನ್‌ಲೈನ್ ಡ್ಯಾಶ್‌ಬೋರ್ಡ್ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ ಅದರ ಇತ್ತೀಚಿನ ಅಪ್‌ಡೇಟ್‌ನಲ್ಲಿ,ಯುನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (CSSE) ಪ್ರಸ್ತುತ ಜಾಗತಿಕ ಪ್ರಕರಣ 255,994,694, ಸಾವಿನ ಸಂಖ್ಯೆ 5,131,102 ಮತ್ತು ನೀಡಿರುವ ಒಟ್ಟು ಲಸಿಕೆ ಪ್ರಮಾಣಗಳು 7,596,483,034ರಷ್ಟಿದೆ ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ:  Farm Laws Timeline ಕೃಷಿ ಕಾನೂನು ಅಂಗೀಕಾರದಿಂದ ರದ್ದತಿ ನಿರ್ಧಾರವರೆಗೆ ಏನೆಲ್ಲಾ ನಡೆಯಿತು?

Published On - 4:09 pm, Fri, 19 November 21

ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು