ವಾಸ್ತವದಲ್ಲಿ ರಷ್ಯಾ ಉದ್ದೇಶವೇನು?-ಯುದ್ಧ 8ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದೇನು?

| Updated By: Lakshmi Hegde

Updated on: Mar 03, 2022 | 3:24 PM

ಝೆಲೆನ್ಸ್ಕಿ ಅವರು ಭದ್ರತಾ ಖಾತರಿ ಬೇಡಿಕೆ ಇಟ್ಟಿದ್ದಾರೆ. ಇದೊಂದು ಧನಾತ್ಮಕ ಹೆಜ್ಜೆಯಾಗಿದ್ದು, ಈ ಬಗ್ಗೆ ಉಕ್ರೇನ್​ನೊಂದಿಗೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವ ಹೇಳಿದ್ದಾರೆ.

ವಾಸ್ತವದಲ್ಲಿ ರಷ್ಯಾ ಉದ್ದೇಶವೇನು?-ಯುದ್ಧ 8ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದೇನು?
ರಷ್ಯಾ ವಿದೇಶಾಂಗ ಇಲಾಖೆ ಮಂತ್ರಿ
Follow us on

ಉಕ್ರೇನ್​ ಮೇಲೆ ರಷ್ಯಾ ದಾಳಿ (Russia Attack On Ukraine) ನಡೆಸಿ 8ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ, ಇಂದು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಕ್ರೇನ್​ನಲ್ಲಿ ನಡೆಸಲಾಗುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಮೂಲ ಉದ್ದೇಶ ಉಕ್ರೇನ್​ ಸೇನೆ ಶಸ್ತ್ರತ್ಯಜಿಸುವಂತೆ ಮಾಡುವುದೇ ಹೊರತು ಇನ್ನೇನೂ ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಉಕ್ರೇನ್​ ಅಧ್ಯಕ್ಷರು ತಮ್ಮ ಮಾತುಗಳ ಮೂಲಕ ಜನರಲ್ಲಿ ರಷ್ಯಾ ವಿರೋಧಿ ಮನೋಭಾವವನ್ನು ಉತ್ತೇಜಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ರಷ್ಯಾ ವಿರುದ್ಧ ದ್ವೇಷ ಹುಟ್ಟುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ವೊಲೊಡಿಮಿರ್​ ಝೆಲೆನ್ಸ್ಕಿಯವರು ಉಕ್ರೆನ್​​ನ ಕಾನೂನು ಬದ್ಧ ಅಧ್ಯಕ್ಷ ಎಂದೇ ರಷ್ಯಾ ಮಾನ್ಯ ಮಾಡುತ್ತದೆ. ನಮ್ಮ ಗುರಿ ಏನಿದ್ದರೂ ಉಕ್ರೇನ್​​ ಸೈನ್ಯವನ್ನು ಹಿಮ್ಮೆಟ್ಟಿಸುವುದು. ಅವರು ತಮ್ಮ ಶಸ್ತ್ರ ತ್ಯಜಿಸಬೇಕು ಎಂದು ಸೆರ್ಗೆ ಲಾವ್ರೊವ್ ಪುನರುಚ್ಚರಿಸಿದ್ದಾರೆ.  ಪ್ರಾರಂಭದಿಂದಲೂ ರಷ್ಯಾ ಇದನ್ನೇ ಹೇಳುತ್ತ ಬಂದಿದ್ದರೂ, ಅದಕ್ಕೂ ಮಿಗಿಲಾಗಿ ಯುದ್ಧ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸುತ್ತಲೇ ಬಂದಿದೆ. ಫೆ.24ರಂದು ಯುದ್ಧ ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಉಕ್ರೇನ್​ನಲ್ಲಿ 2 ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಝೆಲೆನ್ಸ್ಕಿ ಅವರು ಭದ್ರತಾ ಖಾತರಿ ಬೇಡಿಕೆ ಇಟ್ಟಿದ್ದಾರೆ. ಇದೊಂದು ಧನಾತ್ಮಕ ಹೆಜ್ಜೆಯಾಗಿದ್ದು, ಈ ಬಗ್ಗೆ ಉಕ್ರೇನ್​ನೊಂದಿಗೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ ಉಕ್ರೇನ್​ ನಮ್ಮೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಲು ವಾಷಿಂಗ್ಟನ್​​ ಅನುಮತಿಗಾಗಿ ಕಾಯುತ್ತಿದೆ. ಹಾಗಾಗಿ ಇನ್ನೂ ಸಮಯ ನಿಗದಿಯಾಗಿಲ್ಲ. ಅಮರಿಕ ಒಪ್ಪಿಗೆ ಕೊಡುತ್ತಿಲ್ಲ ಎಂದು ಅನ್ನಿಸುತ್ತಿದೆ ಎಂದು ಸೆರ್ಗೆ ಲಾವ್ರೊವ್ ಹೇಳಿದ್ದಾರೆ.  ರಷ್ಯಾ ಯುದ್ದ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ವಾರ್​ಕ್ರೈಮ್​ ನಡೆಸುತ್ತಿದೆ ಎಂದು ಉಕ್ರೇನ್​ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೂ ದೂರು ನೀಡಿದೆ. ಆದರೆ ರಷ್ಯಾ ತಮ್ಮ ಉದ್ದೇಶ ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದು ಎಂದೇ ಹೇಳಿಕೊಂಡು ಬರುತ್ತಿದೆ.

ಇದನ್ನೂ ಓದಿ: ಮೈಸೂರು: ಐ ಫೋನ್ ಖರೀದಿಗಾಗಿ ಮನೆಯವರ ಜೊತೆ ಮುನಿಸಿಕೊಂಡು ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ