AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದಲ್ಲಿ ಅಪರೂಪವಿದು: 80ವರ್ಷಗಳ ನಂತರ ಶ್ರೀಲಂಕಾದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ

Sri Lanka: ಶ್ರೀಲಂಕಾದ ಈ ಪನ್ನಿವಾಲಾ ಆನೆಗಳ ಅನಾಥಾಲಯ 1975ರಲ್ಲಿ ನಿರ್ಮಿಸಲ್ಪಟ್ಟಿದೆ. ಗಾಯಗೊಂಡ ಆನೆಗಳ ರಕ್ಷಣೆ ಮತ್ತು ಪಾಲಕ ಆನೆಗಳನ್ನು ಕಳೆದುಕೊಂಡು ಅಲೆಮಾರಿಗಳಾದ ಮರಿಗಳನ್ನು ರಕ್ಷಿಸುವ ಸಲುವಾಗಿ ಈ ಆನೆ ಬಿಡಾರ ನಿರ್ಮಿಸಲಾಗಿತ್ತು.

ಅಪರೂಪದಲ್ಲಿ ಅಪರೂಪವಿದು: 80ವರ್ಷಗಳ ನಂತರ ಶ್ರೀಲಂಕಾದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ
ಶ್ರೀಲಂಕಾದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ
TV9 Web
| Edited By: |

Updated on:Sep 02, 2021 | 1:04 PM

Share

ಶ್ರೀಲಂಕಾದಲ್ಲಿ ಕಳೆದ 80 ವರ್ಷಗಳ ನಂತರ ಶ್ರೀಲಂಕಾದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಆನೆಗಳು ಅವಳಿ ಮರಿಗಳಿಗೆ ಜನ್ಮ ನೀಡುವುದು ತುಂಬ ಅಪರೂಪ. ಅದರಲ್ಲೂ ಶ್ರೀಲಂಕಾದಲ್ಲಿ ಕಳೆದ 80 ವರ್ಷಗಳಿಂದ ಈಚೆಗೆ ಇಂಥ ವಿಶೇಷ ಹುಟ್ಟು ನಡೆದಿರಲಿಲ್ಲ. ಇದೀಗ ಪಿನ್ನಾವಾಲ ಆನೆ ಬಿಡಾರದಲ್ಲಿರುವ 25ವರ್ಷ ಆನೆ ಸುರಂಗಿ ಅವಳಿ ಗಂಡುಮರಿಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ. ಈ ಆನೆಮರಿಗಳ ತಂದೆ 17 ವರ್ಷದ ಪಾಂಡು ಆನೆ ಕೂಡ ಅದೇ ಆನೆ ಬಿಡಾರದಲ್ಲಿಯೇ ಇದೆ.

ಎರಡೂ ಮರಿಗಳು ಮತ್ತು ತಾಯಿ ಆನೆ ಆರೋಗ್ಯದಿಂದ ಇವೆ. ಮರಿಗಳು ತುಂಬ ಚಿಕ್ಕದಾಗಿದ್ದರೂ, ಆರೋಗ್ಯವಂತವಾಗಿ ಹುಟ್ಟಿವೆ ಎಂದು ಪನ್ನಿವಾಲಾ ಆನೆ ಬಿಡಾರದ ಮುಖ್ಯಸ್ಥೆ ರೇಣುಕಾ ಬಂಡಾರನಾಯ್ಕೆ ಹೇಳಿದ್ದಾರೆ. ಈ ಹಿಂದೆ ಶ್ರೀಲಂಕಾದಲ್ಲಿ 1941ರಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮನೀಡಿತ್ತು. ಅದಾದ ಮೇಲೆ ಈಗಲೇ ಇಂಥ ಪ್ರಕರಣ ವರದಿಯಾಗಿದೆ ಎಂದು ಬಿಬಿಸಿ ಉಲ್ಲೇಖಿಸಿದೆ.

ಅಪರೂಪ ಇದು ಆನೆಗಳು ಅವಳಿ ಮರಿಗಳಿಗೆ ಜನ್ಮ ನೀಡುವುದು ತುಂಬ ಅಪರೂಪ. ಅಂದರೆ ಶೇ.1ರಷ್ಟು ಮಾತ್ರ ಸಾಧ್ಯತೆ ಇರುತ್ತದೆ. ಅದರಲ್ಲೂ ಆಫ್ರಿಕಾ ಕಾಡಿನಲ್ಲಿ ಕಂಡುಬರುವ ಆನೆಗಳು ಹೀಗೆ ಅವಳಿ ಮಕ್ಕಳಿಗೆ ಜನ್ಮ ನೀಡುವುದು ಹೆಚ್ಚು ಎಂದು ಸೊಸೈಟಿ ಫಾರ್​ ದಿ ಪ್ರೊಟೆಕ್ಷನ್​ ಆಫ್​ ಎನಿಮಲ್​ ಅಬ್ರೋಡ್​ ತಿಳಿಸಿದೆ.

ಶ್ರೀಲಂಕಾದ ಈ ಪನ್ನಿವಾಲಾ ಆನೆಗಳ ಅನಾಥಾಲಯ 1975ರಲ್ಲಿ ನಿರ್ಮಿಸಲ್ಪಟ್ಟಿದೆ. ಗಾಯಗೊಂಡ ಆನೆಗಳ ರಕ್ಷಣೆ ಮತ್ತು ಪಾಲಕ ಆನೆಗಳನ್ನು ಕಳೆದುಕೊಂಡು ಅಲೆಮಾರಿಗಳಾದ ಮರಿಗಳನ್ನು ರಕ್ಷಿಸುವ ಸಲುವಾಗಿ ಈ ಆನೆ ಬಿಡಾರ ನಿರ್ಮಿಸಲಾಗಿತ್ತು. ಅಂತೆಯೇ ಕಾಡಿನಿಂದ ತಪ್ಪಿಸಿಕೊಂಡ, ಗಾಯಗೊಂಡ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಇದೀಗ ಈ ಆನೆ ಬಿಡಾರದಲ್ಲಿ 90 ಆನೆಗಳು ಇವೆ. ಈ ಸಾಲಿಗೆ ಈಗ ಎರಡು ಪುಟ್ಟ ಆನೆಮರಿಗಳು ಸೇರಿವೆ.

ಇದನ್ನೂ ಓದಿ: ಎಟಿಎಂ ಕಾರ್ಡ್ ನೀಡುವುದಾಗಿ ಹೇಳಿ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ; ರೈತನ ಖಾತೆಯಿಂದ ಕೆಲವೇ ಸೆಕೆಂಡಿನಲ್ಲಿ 1 ಲಕ್ಷ ಮಂಗಮಾಯ!

ಕಲಬುರಗಿ ರೈತರಿಗೆ ಕೈಕೊಟ್ಟ ಬಿತ್ತನೆ ಬೀಜ; ಲಕ್ಷಾಂತರ ರೂಪಾಯಿ ನಷ್ಟ!

Published On - 1:04 pm, Thu, 2 September 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ