AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ಕ್ವಾಡ್ ಶೃಂಗಸಭೆ ನಡೆಯುತ್ತಿದ್ದಂತೆ ಜಪಾನ್ ವಾಯುನೆಲೆ ಬಳಿ ಚೀನಾ, ರಷ್ಯಾ ಫೈಟರ್ ಜೆಟ್ ಹಾರಾಟ

ಚೀನಾದ ಎರಡು ಬಾಂಬರ್‌ಗಳು ಜಪಾನ್ ಸಮುದ್ರದಲ್ಲಿ ರಷ್ಯಾದ ಎರಡು ಬಾಂಬರ್‌ಗಳನ್ನು ಸೇರಿಕೊಂಡು ಪೂರ್ವ ಚೀನಾ ಸಮುದ್ರಕ್ಕೆ ಜಂಟಿಯಾಗಿ ಹಾರಾಟ ನಡೆಸಿದವು ಎಂದು ಕಿಶಿ ಸುದ್ದಿಗಾರರಿಗೆ ತಿಳಿಸಿದರು.

Watch: ಕ್ವಾಡ್ ಶೃಂಗಸಭೆ ನಡೆಯುತ್ತಿದ್ದಂತೆ ಜಪಾನ್ ವಾಯುನೆಲೆ ಬಳಿ ಚೀನಾ, ರಷ್ಯಾ ಫೈಟರ್ ಜೆಟ್  ಹಾರಾಟ
ಚೀನಾ, ರಷ್ಯಾ ಫೈಟರ್ ಜೆಟ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: May 24, 2022 | 9:47 PM

Share

ಟೋಕಿಯೊ: ಕ್ವಾಡ್ ನಾಯಕರು (Quad Summit) ಟೋಕಿಯೊದಲ್ಲಿ ಭೇಟಿಯಾಗಿದ್ದು ಈ ವೇಳೆ ಚೀನಾ (China) ಮತ್ತು ರಷ್ಯಾದ (Russia) ಯುದ್ಧ ವಿಮಾನಗಳು ಮಂಗಳವಾರ ಜಪಾನ್ (Japan) ವಾಯು ನೆಲೆ ಬಳಿ ಹಾರಾಟ ನಡೆಸಿವೆ ಎಂದು ಜಪಾನ್ ರಕ್ಷಣಾ ಸಚಿವರು ತಿಳಿಸಿದ್ದಾರೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು ಪ್ರಾದೇಶಿಕ ಭದ್ರತೆಯ ಕುರಿತು ಮಾತುಕತೆ ನಡೆಸುತ್ತಿರುವಾಗ  ರಷ್ಯಾ ಮತ್ತು ಚೀನಾದ ವಿಮಾನಗಳ  ಹಾರಾಟ ಬಗ್ಗೆ ಸರ್ಕಾರವು ಗಂಭೀರ ಕಳವಳ ವನ್ನು ವ್ಯಕ್ತಪಡಿಸಿದೆ ಎಂದು ನೊಬುವೊ ಕಿಶಿ ಹೇಳಿದ್ದಾರೆ.  ವಿಮಾನಗಳು ಪ್ರಾದೇಶಿಕ ವಾಯುಪ್ರದೇಶವನ್ನು ಉಲ್ಲಂಘಿಸಿಲ್ಲ ಎಂದು ರಕ್ಷಣಾ ಸಚಿವಾಲಯ ಎಎಫ್‌ಪಿಗೆ ತಿಳಿಸಿದೆ. ನವೆಂಬರ್‌ನಿಂದ ಇದು ನಾಲ್ಕನೇ ಬಾರಿಗೆ ರಷ್ಯಾ ಮತ್ತು ಚೀನಾದ ದೀರ್ಘ-ದೂರದ ಜಂಟಿ ವಿಮಾನಗಳು ಜಪಾನ್ ಬಳಿ ಕಾಣಿಸಿಕೊಂಡಿವೆ. ಚೀನಾದ ಎರಡು ಬಾಂಬರ್‌ಗಳು ಜಪಾನ್ ಸಮುದ್ರದಲ್ಲಿ ರಷ್ಯಾದ ಎರಡು ಬಾಂಬರ್‌ಗಳನ್ನು ಸೇರಿಕೊಂಡು ಪೂರ್ವ ಚೀನಾ ಸಮುದ್ರಕ್ಕೆ ಜಂಟಿಯಾಗಿ ಹಾರಾಟ ನಡೆಸಿದವು ಎಂದು ಕಿಶಿ ಸುದ್ದಿಗಾರರಿಗೆ ತಿಳಿಸಿದರು. “ಅದರ ನಂತರ, ಒಟ್ಟು ನಾಲ್ಕು ವಿಮಾನಗಳು, ಎರಡು (ಹೊಸ) ಚೀನೀ ಬಾಂಬರ್​​ಗಳು ಮತ್ತು ಎರಡು ರಷ್ಯಾದ ಬಾಂಬರ್​​ಗಳು, ಪೂರ್ವ ಚೀನಾ ಸಮುದ್ರದಿಂದ ಪೆಸಿಫಿಕ್ ಸಾಗರಕ್ಕೆ ಜಂಟಿ ಹಾರಾಟವನ್ನು ನಡೆಸಿತು ಎಂದು ಅವರು ಹೇಳಿದ್ದಾರೆ. ರಷ್ಯಾದ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಮಾನವು ಮಂಗಳವಾರ ಉತ್ತರ ಹೊಕ್ಕೈಡೋದಿಂದ ಮಧ್ಯ ಜಪಾನ್‌ನ ನೋಟೊ ಪರ್ಯಾಯ ದ್ವೀಪಕ್ಕೆ ಹಾರಿದೆ. ಟೋಕಿಯೊದಲ್ಲಿ ನಡೆದ ಶೃಂಗಸಭೆ ವೇಳೆ ಇದು “ಪ್ರಚೋದನಕಾರಿ” ಆಗಿತ್ತು ಎಂದು ಅವರು ಹೇಳಿದ್ದಾರೆ.

ಕ್ವಾಡ್ ನಾಯಕರು ಮಂಗಳವಾರ “ಯಥಾಸ್ಥಿತಿಯನ್ನು ಬಲವಂತವಾಗಿ ಬದಲಾಯಿಸುವ” ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. ಆದಾಗ್ಯೂ ಅವರು ಜಂಟಿ ಹೇಳಿಕೆಯಲ್ಲಿ ರಷ್ಯಾ ಅಥವಾ ಚೀನಾದ ನೇರ ಉಲ್ಲೇಖಗಳನ್ನೇನೂ ಮಾಡಿಲ್ಲ.

ಇದನ್ನೂ ಓದಿ
Image
Quad summit 2022 ಟೋಕಿಯೊದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಚರ್ಚೆಯಾದ ವಿಷಯಗಳೇನು? ಕ್ವಾಡ್ ನಾಯಕರು ಹೇಳಿದ್ದೇನು?
Image
Quad Summit 2022 ಕೊವಿಡ್ ಸಾಂಕ್ರಾಮಿಕವನ್ನು ಭಾರತದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮೋದಿಯನ್ನು ಶ್ಲಾಘಿಸಿದ ವಿಶ್ವ ನಾಯಕರು
Image
ಕ್ವಾಡ್​ ಶಕ್ತಿಯಿಂದ ಇಂಡೊ ಪೆಸಿಫಿಕ್ ವಲಯದಲ್ಲಿ ಸುಧಾರಣೆ: ಟೊಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯ
Image
ಜಪಾನ್​​ನ ಪ್ರಮುಖ ಪತ್ರಿಕೆಯ ಓಪ್-ಎಡ್ ಪುಟದಲ್ಲಿ ಲೇಖನ ಬರೆದ ನರೇಂದ್ರ ಮೋದಿ; ದ್ವಿಪಕ್ಷೀಯ ಸಂಬಂಧ ಬಗ್ಗೆ ಶ್ಲಾಘನೆ

ಜಪಾನ್ ನಮ್ಮ ದೇಶದ ಮತ್ತು ಪ್ರದೇಶದ ಭದ್ರತೆಯ ದೃಷ್ಟಿಕೋನದಿಂದ ನಮ್ಮ ಗಂಭೀರ ಕಾಳಜಿಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ಮಾಡಿದೆ” ಎಂದು ಕಿಶಿ ಹೇಳಿದರು.

“ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣಕ್ಕೆ ಅಂತರರಾಷ್ಟ್ರೀಯ ಸಮುದಾಯವು ಪ್ರತಿಕ್ರಿಯಿಸುತ್ತಿದ್ದಂತೆ, ಆಕ್ರಮಣಕಾರಿಯಾಗಿರುವ ರಷ್ಯಾದ ಸಹಯೋಗದೊಂದಿಗೆ ಚೀನಾ ಇಂತಹ ಕ್ರಮ ಕೈಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ತನ್ನ ನೆರೆಯ ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾದೊಂದಿಗೆ  ಗಡಿ ವಿವಾದಗಳನ್ನು ಹೊಂದಿರುವ ಜಪಾನ್, ತನ್ನ ವಾಯು ಗಡಿಗಳನ್ನು ರಕ್ಷಿಸಲು ವಾಡಿಕೆಯಂತೆ ಜೆಟ್‌ಗಳನ್ನು ಕಳುಹಿಸುತ್ತದೆ. ರಕ್ಷಣಾ ಸಚಿವಾಲಯದ ಪ್ರಕಾರ, ದೇಶವು ಕಳೆದ ವರ್ಷ ಮಾರ್ಚ್‌ವರೆಗೆ 1,004 ಬಾರಿ ಮಿಲಿಟರಿ ಜೆಟ್‌ಗಳನ್ನು ಹೊಡೆದುರುಳಿಸಿದೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು