AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ

ಬಫೆಲೊ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆದ ಕೇವಲ 10 ದಿನಗಳಲ್ಲಿ ಮತ್ತೊಂದು ವಿಷಾದಕರ ಬೆಳವಣಿಗೆ ನಡೆದಿದ್ದು, ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ
ಗುಂಡಿನ ದಾಳಿ ನಡೆದ ಟೆಕ್ಸಾಸ್ ನಗರದ ಶಾಲೆಯಲ್ಲಿ ಭಯಗೊಂಡ ಮಕ್ಕಳನ್ನು ಶಿಕ್ಷಕರು ಸಂತೈಸಿದರು.
TV9 Web
| Edited By: |

Updated on:May 25, 2022 | 10:25 AM

Share

ವಾಷಿಂಗ್​ಟನ್: ಅಮೆರಿಕದ ಟೆಕ್ಸಾಸ್ ನಗರದ (Texas city of America) ಶಾಲೆಗೆ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿರುವ ದುಷ್ಕರ್ಮಿ 19 ಮಕ್ಕಳೂ ಸೇರಿ 21 ಮಂದಿಯನ್ನು ಕೊಂದಿದ್ದಾನೆ. ಗುಂಡಿನ ದಾಳಿ (Texas School Shooting) ನಡೆಸಿದವ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಇನ್ನೂ 18ರ ಹರೆಯದಲ್ಲಿರುವ ಯುವಕ ಸಾಲ್ವಡೋರ್ ರಾಮೊಸ್​ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಬಫೆಲೊ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆದ ಕೇವಲ 10 ದಿನಗಳಲ್ಲಿ ಮತ್ತೊಂದು ವಿಷಾದಕರ ಬೆಳವಣಿಗೆ ನಡೆದಿದ್ದು, ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸಕ್ಕೆ ತೆರಳಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ‘ಇಂಥ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ ಅಮೆರಿಕದಲ್ಲಿ ಪದೇಪದೆ ಆಗುತ್ತಿರುವುದು ವಿಷಾದದ ಸಂಗತಿ. ದೇವರಾಣೆ, ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ. ಮೃತರ ಗೌರವಾರ್ಥ ದೇಶವ್ಯಾಪಿ ಬಾವುಟಗಳನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ ಎಂದು ಹೇಳಿದರು.

ಟೆಕ್ಸಾಸ್ ಶೂಟಿಂಗ್ ಕುರಿತು ಅಮೆರಿಕದ ಮಾಧ್ಯಮದಲ್ಲಿ ವರದಿಯಾಗಿರುವ 10 ಮುಖ್ಯ ಅಂಶಗಳಿವು…

  1. ಟೆಕ್ಸಾಸ್ ಶೂಟಿಂಗ್​ನಲ್ಲಿ 19 ವಿದ್ಯಾರ್ಥಿಗಳು ಮತ್ತು ಮೂವರು ವಯಸ್ಕರು ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.
  2. ಗುಂಡಿನ ದಾಳಿ ನಡೆಸಿದವನನ್ನು ಪೊಲೀಸರು ಕೊಂದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.
  3. ಅಮೆರಿಕದ ಕಾಲಮಾನ ಮಧ್ಯಾಹ್ನ ಶಾಲೆಯ ಮೇಲೆ ಶೂಟಿಂಗ್ ಆರಂಭವಾಯಿತು. ತನ್ನ ಕಾರನ್ನು ದಾರಿಯಲ್ಲಿಯೇ ನಿಲ್ಲಿಸಿದ ದುಷ್ಕರ್ಮಿ ಉವಾಲ್​ಡೆ ಎಂಬಲ್ಲಿ ಇರುವ ರಾಬ್ ಎಲಿಮೆಂಟರಿ ಶಾಲೆಗೆ ರೈಫಲ್​ನೊಂದಿಗೆ ನುಗ್ಗಿದ.
  4. ಶಾಲೆಯಲ್ಲಿ 500 ಮಕ್ಕಳಿದ್ದರು. ಈ ಪೈಕಿ ಬಹುತೇಕ ಮಕ್ಕಳು ಸ್ಪ್ಯಾನಿಷ್ ಮಾತೃಭಾಷೆ ಇರುವ ಬಡ ಕುಟುಂಬಗಳಿಂದ ಬಂದವರು. ಶೂಟಿಂಗ್​ ವಿಷಯ ತಿಳಿದು ಪೋಷಕರು ಶಾಲೆಗಳಿಗೆ ಧಾವಿಸಿ ಬಂದರಾದರೂ, ಮಕ್ಕಳನ್ನು ತಕ್ಷಣಕ್ಕೆ ಅವರೊಂದಿಗೆ ಕಳುಹಿಸಲಿಲ್ಲ. ಎಲ್ಲ ಮಕ್ಕಳ ಲೆಕ್ಕ ಮಾಡಿ, ಹಾಜರಾತಿ ಪರಿಶೀಲಿಸಿದ ನಂತರವೇ ಪೋಷಕರೊಂದಿಗೆ ಮಕ್ಕಳನ್ನು ಕಳುಹಿಸಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿತು.
  5. ಘಟನೆ ಕುರಿತು ಪ್ರತಿಕ್ರಿಯಿಸಿರುವ ಟೆಕ್ಸಾಸ್ ರಾಜ್ಯಪಾಲ ಗ್ರೆಗ್ ಅಬೊಟ್, ಆರೋಪಿಯು ಏಕಾಂಗಿಯಾಗಿ ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಬರುವ ಮೊದಲು ಅವನು ತನ್ನ ಅಜ್ಜಿಯನ್ನು ಕೊಲೆ ಮಾಡಿದ್ದ ಎಂದು ಹೇಳಿದ್ದಾರೆ.
  6. ಈ ಹತ್ಯಾಕಾಂಡಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಈವರೆಗೆ ತಿಳಿದುಬಂದಿಲ್ಲ
  7. ಸ್ಯಾನ್ ಆಂಟೋನಿಯೊದಲ್ಲಿರುವ ವಿಶ್ವವಿದ್ಯಾಲಯ ಆಸ್ಪತ್ರೆಗೆ ಉವಾಲ್​ಡೆಯಿಂದ ಇಬ್ಬರು ಬಂದಿರುವುದು ದೃಢಪಟ್ಟಿದೆ. ಈ ಪೈಕಿ 66 ವರ್ಷದ ವೃದ್ಧೆಯೊಬ್ಬರಿದ್ದರೆ ಮತ್ತೊಬ್ಬರು 10 ವರ್ಷದ ಬಾಲಕಿ. ಇಬ್ಬರನ್ನೂ ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
  8. ಗುಂಡು ಹಾರಿಸಿರುವ ಆರೋಪಿ ಸಾಲ್ವಡೊರ್ ರಾಮೊಸ್ ಸಹ ಲ್ಯಾಟಿನೊ ಜನರೇ ಹೆಚ್ಚಾಗಿರುವ ಸ್ಯಾನ್ ಆಂಟೋನಿಯೊಗೆ ಸೇರಿದವರು ಎಂದು ತಿಳಿದುಬಂತು.
  9. ಮೃತ ಮಕ್ಕಳ ಪೋಷಕರಿಗೆ ಸಹಾನುಭೂತಿ ಸೂಚಿಸುವ ದೃಷ್ಟಿಯಿಂದ ಅಮೆರಿಕದ ಶ್ವೇತಭವನ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಿ, ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
  10. ಅಮೆರಿಕದ ಪಾರ್ಕ್​ಲೆಂಡ್​ನಲ್ಲಿ 2018ರಲ್ಲಿ ನಡೆದಿದ್ದ ಗುಂಡು ಹಾರಾಟದಲ್ಲಿ ಪ್ರೌಢಶಾಲೆಯ 14 ಮಕ್ಕಳು ಸತ್ತಿದ್ದರು. 2012ರಲ್ಲಿ ಸ್ಯಾಂಡಿ ಹೂಕ್​ನಲ್ಲಿ ನಡೆದಿದ್ದ ಇಂಥದ್ದೇ ಘಟನೆಯಲ್ಲಿ 20 ಮಕ್ಕಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು.

Published On - 7:23 am, Wed, 25 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ