AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್​ ಮನೆ ಬಿಡಲೇಬೇಕು!

UBS bank: ಲಂಡನ್‌ನಲ್ಲಿನ ವಿಜಯ್ ಮಲ್ಯ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು UBS ಬ್ಯಾಂಕ್‌ ಪಡೆದುಕೊಂಡಿದೆ. ಲಂಡನ್‌ನಲ್ಲಿ (London) ಮಗ, 95 ವರ್ಷದ ತಾಯಿ ಜತೆ ಮಲ್ಯ ವಾಸವಿದ್ದಾನೆ.

ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್​ ಮನೆ ಬಿಡಲೇಬೇಕು!
ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಆಸ್ತಿ ಪರಭಾರೆ ಕೇಸ್​ ಗೆದ್ದ UBS ಬ್ಯಾಂಕ್‌
TV9 Web
| Edited By: |

Updated on:Jan 19, 2022 | 7:58 AM

Share

ಲಂಡನ್‌: ಮುಖ್ಯವಾಗಿ ಸರ್ಕಾರಿ ಬ್ಯಾಂಕ್​ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ( Vijay Mallya) ವಿರುದ್ಧ ಆಸ್ತಿ ಪರಭಾರೆ (mortgage) ಪ್ರಕರಣದಲ್ಲಿ Swiss bank UBS ಬ್ಯಾಂಕ್‌ ಗೆಲುವು ಸಾಧಿಸಿದೆ. ಸೆಂಟ್ರಲ್​​ ಲಂಡನ್‌ನಲ್ಲಿನ ವಿಜಯ್ ಮಲ್ಯ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು ಯುಬಿಎಸ್​ ಬ್ಯಾಂಕ್‌ ಪಡೆದುಕೊಂಡಿದೆ. ಲಂಡನ್‌ನಲ್ಲಿ 35 ವರ್ಷದ ಮಗ ಸಿದ್ಧಾರ್ಥ, 95 ವರ್ಷದ ತಾಯಿ ಲಲಿತಾ ಅವರ ಜತೆ 66 ವರ್ಷದ ಮಲ್ಯ ವಾಸವಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ 2020ರ ಏಪ್ರಿಲ್​​ನಿಂದ UBS ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡದೆ ಕಾಲ ತಳ್ಳಿಕೊಂಡು ಬಂದಿದ್ದ. ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯಗೆ ಈಗ ಐಷಾರಾಮಿ ಮನೆಯಿಂದ ಹೊರಬೀಳುವುದು ಅನಿವಾರ್ಯವಾಗಿದೆ.

ಮಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಸೆಂಟ್ರಲ್ ಲಂಡನ್​ನಲ್ಲಿರುವ ಪ್ರತಿಷ್ಠಿತ ಮ್ಯಾಡಮ್ ಟುಸ್ಸಾಡ್ ಮೇಣದ ಮ್ಯೂಸಿಯಂ, ರೆಜೆಂಟ್ಸ್​ ಪಾರ್ಕ್​, ಕಾರ್ನ್​​ವಾಲ್​ ಟೆರೇಸ್ ಆಜುಬಾಜಿನಲ್ಲಿ ​ಐಷಾರಾಮಿ ಮನೆ ಮಾಡಿಕೊಂಡಿದ್ದ. ಆದರೆ ಇದನ್ನು ಕೋಟ್ಯಂತರ ರೂಪಾಯಿ ಸಾಲಕ್ಕಾಗಿ UBS ಬ್ಯಾಂಕ್‌ಗೆ ಮಾರ್ಟ್​ಗೇಜ್​ ಮಾಡಿದ್ದ. ಸಾಲ ತೀರಿಸಲು ವಿಜಯ್ ಮಲ್ಯ ಅಸಹಾಯಕನಾಗಿರುವುದರಿಂದ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು (repossess and sell) ಅವಕಾಶ ನೀಡಬೇಕೆಂದು ಸ್ವಿಸ್​ ಮೂಲ ಯುಬಿಎಸ್ ಬ್ಯಾಂಕ್​ ಲಂಡನ್ ಕೋರ್ಟ್​​ನಲ್ಲಿ ದಾವೆ ಹೂಡಿತ್ತು. ವಿಜಯ್ ಮಲ್ಯ Rose Capital Ventures Limite ಗೆ ಸುಮಾರು 200 ಕೋಟಿ ರೂಪಾಯಿ ಸಾಲ ತೀರಿಸಬೇಕಿದೆ.

ಅಂದಹಾಗೆ ವಿಜಯ್ ಮಲ್ಯ ಈ ಮನೆಯನ್ನು ಬಿಟ್ಟರೆ ಸೀದಾ ನಾಳೆಯೇ ಬೀದಿಗೆ ಬರುತ್ತಾರೆ ಅಂತೇನೂ ಇಲ್ಲ. ಏಕೆಂದರೆ ಮಲ್ಯ ಲಂಡನ್​​ನಲ್ಲಿ ಇಂತಹುದೇ ಇನ್ನೂ ಅನೇಕ ವೈಭವೋಪೇತ ಮನೆಗಳನ್ನು ಹೊಂದಿದ್ದಾರೆ!

ಇದನ್ನೂ ಓದಿ: Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್

ಉದ್ಯಮಿ ವಿಜಯ್ ಮಲ್ಯ ವಿರುದ್ಧ ಆಸ್ತಿ ಪರಭಾರೆ ಕೇಸ್​ ಗೆದ್ದ UBS ಬ್ಯಾಂಕ್‌ ಕುರಿತಾದ ANI ಟ್ವೀಟ್​:

Published On - 7:23 am, Wed, 19 January 22

ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?