AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Police Brutality: ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ಸಾವು: ವ್ಯಾಪಕ ಜನಾಕ್ರೋಶ, ಖಂಡನೆ

US Police Atrocity: ಪೊಲೀಸರ ಹೊಡೆತದಿಂದ ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ. 

US Police Brutality: ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ಸಾವು: ವ್ಯಾಪಕ ಜನಾಕ್ರೋಶ, ಖಂಡನೆ
ಅಮೆರಿಕದ ಮೆಂಫಿಸ್ ನಗರದಲ್ಲಿ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಟೈರ್ ನಿಕೊಲಸ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 28, 2023 | 10:08 AM

Share

ಮೆಂಫಿಸ್: ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತನನ್ನು ಟೈರ್ ನಿಕೊಲಸ್ ಎಂದು ಗುರುತಿಸಲಾಗಿದೆ. ಮುಖಕ್ಕೆ ಗುದ್ದುವುದು, ಬೂಟುಗಾಲಿನಿಂದ ತುಳಿಯುವುದು ಹಾಗೂ ಲಾಠಿ ಹೊಡೆತಗಳನ್ನು ತಡೆಯಲು ಆಗದೆ ಟೈರ್ ನಿಕೊಲಸ್ (Tyre Nichols) ಸಾವನ್ನಪ್ಪಿದ್ದಾನೆ. ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ. ಮೆಂಫಿಸ್ ಅಧಿಕಾರಿಗಳು ಇದೀಗ ಘಟನೆಯ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕಪ್ಪುವರ್ಣೀಯರೇ ಆಗಿರುವ ಪೊಲೀಸರು ನಿಕೊಲಸ್​ನನ್ನು ಬೆನ್ನಟ್ಟುವುದು, ಒಂದು ಕಾರ್​ಗೆ ಅವನನ್ನು ಒರಗಿಸಿ ಥಳಿಸುವುದು, ತಮ್ಮ ಕೃತ್ಯವನ್ನು ಸಂಭವಿಸುವ ದೃಶ್ಯಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ.

ನಿಕೊಲಸ್ ಸತ್ತ ನಂತರ ಜನಾಕ್ರೋಶ ತೀವ್ರಗೊಂಡಿತ್ತು. ನಿಕೊಲಸ್ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಹೊರಿಸಲಾಯಿತು. ಹಲವು ಬಾರಿ ಜನರು ಒತ್ತಾಯಿಸಿದ್ದರೂ, ನ್ಯಾಯಾಲಯಗಳು ತಿಳಿಹೇಳಿದ್ದರೂ ಪೊಲೀಸರ ವರ್ತನೆ ಏನೇನೂ ಬದಲಾಗಿಲ್ಲ ಎಂದು ಅಮೆರಿಕ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಮಾಡಿದ್ದಾರೆ. 29 ವರ್ಷದ ನಿಕೊಲಸ್ ಫೆಡ್​ಎಕ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರ ಮೂರು ನಿಮಿಷಗಳ ಹೊಡೆತದಿಂದ ಅವರು ಮೃತಪಟ್ಟರು. ಇದು 1991ರಲ್ಲಿ ಪೊಲೀಸರ ಹೊಡೆತದಿಂದ ಸಾವನಪ್ಪಿದ ರೊಡ್ನಿ ಕಿಂಗ್ ಸಾವನ್ನೇ ಹೋಲುತ್ತದೆ ಎಂದು ನಿಕೊಲಸ್ ಅವರ ವಕೀಲರು ಹೇಳಿದ್ದಾರೆ.

ನಿಕೊಲಸ್​ ಕೊನೆಯ ಕ್ಷಣಗಳು

ನಿಕೊಲಸ್ ಇದ್ದ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಡೆದು, ಅವರನ್ನು ಹೊರಗೆ ಎಳೆದರು. ‘ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಕೂಗಿಕೊಂಡಾಗ, ಪೊಲೀಸರ ಒಂದು ಗುಂಪು ಸುತ್ತುಗಟ್ಟಿ ಥಳಿಸಲು ಆರಂಭಿಸಿತು. ನಿಕೊಲಸ್​ನನ್ನು ಹಿಡಿದಿದ್ದ ಪೊಲೀಸ್ ‘ಗುಂಡು ಹೊಡಿ’ ಎಂದು ಕೂಗಿಕೊಂಡಾಗ, ನಿಕೋಲಸ್ ‘ನಾನು ಈಗಾಗಲೇ ಕೆಳಗಿದ್ದೇನೆ’ ಎಂದು ಪ್ರತಿ ಹೇಳಿದ್ದಾರೆ. ‘ನಾನೇನೂ ತಪ್ಪು ಮಾಡಿಲ್ಲ. ಮನೆಗೆ ಹೋಗ್ತಿದ್ದೀನಿ. ನೀವು ಇತ್ತೀಚೆಗೆ ತುಂಬಾ ಒಳ್ಳೇದು ಮಾಡ್ತಿದ್ದೀರಿ. ನಿಲ್ಲಿಸಿ, ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಮತ್ತೊಮ್ಮೆ ಕೂಗಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರು ಸ್ಟನ್​ಗನ್​ನಿಂದ ಗುಂಡು ಹಾರಿಸಿದಾಗ ಹೆದರಿದ ನಿಕೊಲಸ್ ಓಡಲು ಆರಂಭಿಸಿದರು. ಬೆನ್ನಟ್ಟಿದ ಪೊಲೀಸರು ಮನಸೋಯಿಚ್ಛೆ ಥಳಿಸಿದರು. ಈ ಹೊಡೆತಕ್ಕೆ ನಿಕೊಲಸ್ ಜೀವ ಬಿಟ್ಟರು.

ಹಿಂಸಾಚಾರ ಬೇಡವೆಂದ ತಾಯಿ

ನಿಕೊಲಸ್ ಸಾವು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ನಿಕೊಲಸ್ ತಾಯಿ ‘ಶಾಂತಿ ಕಾಪಾಡಿ’ ಎಂದು ಪ್ರತಿಭಟನಾನಿರತರಿಗೆ ಮನವಿ ಮಾಡಿದ್ದಾರೆ. ‘ನಮ್ಮ ನಗರದಲ್ಲಿ ಹಿಂಸಾಚಾರ ನಡೆಯುವುದು ನನಗೆ ಬೇಕಿಲ್ಲ. ನೀವು ನಿಕೊಲಸ್ ಪರವಾಗಿದ್ದೀರಿ ಎಂದಾದರೆ ದಯವಿಟ್ಟು ಶಾಂತಿಯುತವಾಗಿ ಪ್ರತಿಭಟಿಸಿ’ ಎಂದು ಅವರು ತಮ್ಮ ಮನೆ ಎದುರು ಸೇರಿದ್ದ ಪ್ರತಿಭಟನಾನಿರತರನ್ನು ಕೋರಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಜೂಲಿಯಾನಾ ಸ್ಟ್ರಾಟನ್ ಟೈರ್​ ನಿಕೊಲಸ್​ನ ನಗುಮುಖದ ಚಿತ್ರ ಶೇರ್ ಮಾಡಿದ್ದಾರೆ.

ಪೊಲೀಸ್ ಹಿಂಸಾಚಾರಕ್ಕೆ ಕಡಿವಾಣ: ಮೃತನ ತಾಯಿಗೆ ಅಧ್ಯಕ್ಷರ ಭರವಸೆ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ನಿಕೊಲಸ್ ತಾಯಿಯೊಂದಿಗೆ ಮಾತನಾಡಿದ್ದು, ಈ ವಿಚಾರವನ್ನು ಕಾಂಗ್ರೆಸ್​ನಲ್ಲಿ (ಅಮೆರಿಕದ ಪ್ರಜಾಪ್ರತಿನಿಧಿ ಸಭೆ) ಪ್ರಸ್ತಾಪಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಶೀಘ್ರ ‘ಜಾರ್ಜ್​ಫ್ಲಾಯ್ಡ್​ ಕಾಯ್ದೆ’ (George Floyd Act) ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದು ಜಾರಿಗೆ ಬಂದರೆ ಅಮೆರಿಕದಲ್ಲಿ ಪೊಲೀಸರು ನಡೆಸುವ ಹಿಂಸಾಚಾರಕ್ಕೆ ಕಡಿವಾಣ ಬೀಳಲಿದೆ, ಕೇಂದ್ರ (ಫೆಡರಲ್) ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಕರಾಳ ಹತ್ಯೆ ಪ್ರಕರಣ: ಫ್ಲಾಯ್ಡ್ ಕುಟುಂಬಕ್ಕೆ ಪರಿಹಾರ ನೀಡಲು ಒಪ್ಪಿದ ಅಮೆರಿಕ ಪೊಲೀಸ್

ವಿದೇಶದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Sat, 28 January 23

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?