AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ. 2007ರಲ್ಲಿ […]

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ
KUSHAL V
| Edited By: |

Updated on: Sep 26, 2020 | 1:59 PM

Share

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ.

2007ರಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ಇಂಗ್ಲೆಂಡ್​ ಮೂಲದ ವೊಡಾಫೋನ್​ ಕಂಪನಿಗೆ 22,100 ಕೋಟಿ ರೂಪಾಯಿ ಪೂರ್ವಾನ್ವಯ ತೆರಿಗೆ ಕಟ್ಟಲು ನೋಟಿಸ್​ ನೀಡಿತ್ತು. ಕಂಪನಿಯು ದೇಶದಲ್ಲಿ ನಡೆಸಿದ್ದ ಕೆಲ ಆರ್ಥಿಕ ವ್ಯವಹಾರಗಳ ಮೇಲೆ ತೆರಿಗೆ ಪಾವತಿಸಿರಲಿಲ್ಲ ಎಂದು ಇಲಾಖೆಯು ನೋಟಿಸ್​ ಜಾರಿ ಮಾಡಿತ್ತು. 

ವೊಡಾಫೋನ್​ ಈ ಕುರಿತು 2012ರಲ್ಲಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿ ಗೆಲುವು ಸಹ ಸಾಧಿಸಿತ್ತು. ಆದರೆ, ಅಷ್ಟಕ್ಕೇ ನಿಲ್ಲದ ಭಾರತ ಸರ್ಕಾರ ಹೊಸ ಹಣಕಾಸಿನ ಕಾನೂನು ವಿಧಿಸಿ ಪೂರ್ನಾನ್ವಯ ತೆರಿಗೆ ವಸೂಲಿಗೆ ಮುಂದಾಗಿತ್ತು. ಹಾಗಾಗಿ, ವೊಡಾಫೋನ್​ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿತ್ತಿ.

ಇದೀಗ, ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ವೊಡಾಫೋನ್​ ಗೆಲುವು ಸಾಧಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಭಾರತ ಸರ್ಕಾರ ಪೂರ್ನಾನ್ವಯ ತೆರಿಗೆ ವಿಧಿಸಲು ಮುಂದಾಗಿದ್ದು ಭಾರತ ಮತ್ತು ನೆದರ್​ಲ್ಯಾಂಡ್​ ದೇಶಗಳ ನಡುವಿನ ಹೂಡಿಕೆ ಒಪ್ಪಂದದ ಉಲ್ಲಂಘನೆ ಎಂದು ಉಲ್ಲೇಖಿಸಿದೆ.

Follow Us
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ