AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ. 2007ರಲ್ಲಿ […]

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ
KUSHAL V
| Edited By: |

Updated on: Sep 26, 2020 | 1:59 PM

Share

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ.

2007ರಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ಇಂಗ್ಲೆಂಡ್​ ಮೂಲದ ವೊಡಾಫೋನ್​ ಕಂಪನಿಗೆ 22,100 ಕೋಟಿ ರೂಪಾಯಿ ಪೂರ್ವಾನ್ವಯ ತೆರಿಗೆ ಕಟ್ಟಲು ನೋಟಿಸ್​ ನೀಡಿತ್ತು. ಕಂಪನಿಯು ದೇಶದಲ್ಲಿ ನಡೆಸಿದ್ದ ಕೆಲ ಆರ್ಥಿಕ ವ್ಯವಹಾರಗಳ ಮೇಲೆ ತೆರಿಗೆ ಪಾವತಿಸಿರಲಿಲ್ಲ ಎಂದು ಇಲಾಖೆಯು ನೋಟಿಸ್​ ಜಾರಿ ಮಾಡಿತ್ತು. 

ವೊಡಾಫೋನ್​ ಈ ಕುರಿತು 2012ರಲ್ಲಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿ ಗೆಲುವು ಸಹ ಸಾಧಿಸಿತ್ತು. ಆದರೆ, ಅಷ್ಟಕ್ಕೇ ನಿಲ್ಲದ ಭಾರತ ಸರ್ಕಾರ ಹೊಸ ಹಣಕಾಸಿನ ಕಾನೂನು ವಿಧಿಸಿ ಪೂರ್ನಾನ್ವಯ ತೆರಿಗೆ ವಸೂಲಿಗೆ ಮುಂದಾಗಿತ್ತು. ಹಾಗಾಗಿ, ವೊಡಾಫೋನ್​ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿತ್ತಿ.

ಇದೀಗ, ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ವೊಡಾಫೋನ್​ ಗೆಲುವು ಸಾಧಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಭಾರತ ಸರ್ಕಾರ ಪೂರ್ನಾನ್ವಯ ತೆರಿಗೆ ವಿಧಿಸಲು ಮುಂದಾಗಿದ್ದು ಭಾರತ ಮತ್ತು ನೆದರ್​ಲ್ಯಾಂಡ್​ ದೇಶಗಳ ನಡುವಿನ ಹೂಡಿಕೆ ಒಪ್ಪಂದದ ಉಲ್ಲಂಘನೆ ಎಂದು ಉಲ್ಲೇಖಿಸಿದೆ.

Follow Us
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು