AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2024: ಈ ವರ್ಷ ಪಾಕಿಸ್ತಾನಿಗಳು ಭಾರತದ ಬಗ್ಗೆ ಗೂಗಲ್​ನಲ್ಲಿ ಏನೇನು ಸರ್ಚ್​ ಮಾಡಿದ್ದಾರೆ ಗೊತ್ತಾ?

2024 ಕಳೆದು 2025ರ ಹೊಸ್ತಿಲಿಗೆ ಬಂದಿದ್ದೇವೆ, ಈ ವರ್ಷ ಪಾಕಿಸ್ತಾನಿಗಳು ಭಾರತದ ಬಗ್ಗೆ ಗೂಗಲ್​ನಲ್ಲಿ ಏನೇನು ಸರ್ಚ್​ ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ಕ್ರಿಕೆಟ್ ತಂಡ ನಿರಾಕರಿಸಿದೆ. ಇದರ ಪರಿಣಾಮ ಉಭಯ ದೇಶಗಳ ಸಂಬಂಧಗಳ ಮೇಲೆ ಗೋಚರಿಸುತ್ತಿದೆ.

Year Ender 2024: ಈ ವರ್ಷ ಪಾಕಿಸ್ತಾನಿಗಳು ಭಾರತದ ಬಗ್ಗೆ ಗೂಗಲ್​ನಲ್ಲಿ ಏನೇನು ಸರ್ಚ್​ ಮಾಡಿದ್ದಾರೆ ಗೊತ್ತಾ?
ಗೂಗಲ್ Image Credit source: MSN
ನಯನಾ ರಾಜೀವ್
|

Updated on: Dec 12, 2024 | 10:13 AM

Share

2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ಕ್ರಿಕೆಟ್ ತಂಡ ನಿರಾಕರಿಸಿದೆ. ಇದರ ಪರಿಣಾಮವು ಉಭಯ ದೇಶಗಳ ಸಂಬಂಧಗಳ ಮೇಲೆ ಗೋಚರಿಸುತ್ತಿದೆ. ಏತನ್ಮಧ್ಯೆ, ಗೂಗಲ್ 2024 ರಲ್ಲಿ ಪಾಕಿಸ್ತಾನವು ಭಾರತದ ಬಗ್ಗೆ ಹುಡುಕಿದ ಮಾಹಿತಿಯ ಸಂಪೂರ್ಣ ವಿವರವನ್ನು ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಜನರು ಗೂಗಲ್‌ನಲ್ಲಿ ಹೆಚ್ಚು ಹುಡುಕಿರುವ ವ್ಯಕ್ತಿಗಳ ಪೈಕಿ ಅಬ್ಬಾಸ್ ಅತ್ತಾರ್ ಮೊದಲ ಸ್ಥಾನದಲ್ಲಿದ್ದಾರೆ. ಅಬ್ಬಾಸ್ ಇರಾನಿನ ಛಾಯಾಗ್ರಾಹಕರಾಗಿದ್ದರು, ಅವರು 1970 ರ ದಶಕದಲ್ಲಿ ಬಿಯಾಫ್ರಾ, ವಿಯೆಟ್ನಾಂ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಛಾಯಾಗ್ರಹಣಕ್ಕೆ ಪ್ರಸಿದ್ಧರಾಗಿದ್ದರು. ಇದಾದ ನಂತರವೂ ಧಾರ್ಮಿಕ ವಿಷಯಗಳ ಕುರಿತು ಬರೆದ ಲೇಖನಗಳಿಂದ ಸುದ್ದಿಯಲ್ಲಿದ್ದರು.

ಇದಲ್ಲದೇ ಅಟಲ್ ಅದ್ನಾನ್, ಅರ್ಷದ್ ನದೀಮ್, ಸನಾ ಜಾವೇದ್ ಮತ್ತು ಸಾಜಿದ್ ಖಾನ್, ಮುಕೇಶ್​ ಅಂಬಾನಿ ಬಗ್ಗೆ ಪಾಕಿಸ್ತಾನಿಗಳು ಹುಡುಕಾಟ ನಡೆಸಿದ್ದರು. ಗಮನಿಸಬೇಕಾದ ಅಂಶವೆಂದರೆ ಸಾಜಿದ್ ಖಾನ್ ಒಬ್ಬ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕ.

ಚಲನಚಿತ್ರಗಳು ಮತ್ತು ನಾಟಕ ವಿಭಾಗದಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಕ್ರೇಜ್ ತುಂಬಾ ಹೆಚ್ಚಾಗಿದೆ. ಇವುಗಳಲ್ಲಿ ಹೀರಾಮಂಡಿ, 12ನೇ ಫೇಲ್, ಅನಿಮಲ್, ಮಿರ್ಜಾಪುರ ಸೀಸನ್ 3 ಮತ್ತು ಸ್ಟ್ರೀ 2 ಬಗ್ಗೆ ಸಾಕಷ್ಟು ಹುಡುಕಲಾಗಿದೆ. ಸಂಜಯ್ ಲೀಲಾ ಬನ್ಸಾಲಿಯವರ ವೆಬ್ ಸರಣಿ ಹಿರಾಮಾಂಡಿ ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು ಮತ್ತು ಟಿವಿ ಶೋಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಈ ಮಲ್ಟಿ-ಸ್ಟಾರರ್ ಸರಣಿಯು ಭಾರತದಲ್ಲೂ ಕ್ರೇಜಿ ರೆಸ್ಪಾನ್ಸ್ ಪಡೆದುಕೊಂಡಿದೆ ಮತ್ತು ಭಾರತದಲ್ಲೂ ಅತಿ ಹೆಚ್ಚು ಹುಡುಕಲ್ಪಟ್ಟ ಕಾರ್ಯಕ್ರಮವಾಗಿದೆ.

ಆಹಾರ ಪಾಕಿಸ್ತಾನದ ಜನರು ಬನಾನಾ ಬ್ರೆಡ್ ಮಾಡುವ ಪಾಕವಿಧಾನವನ್ನು ಹೆಚ್ಚು ಹುಡುಕಿದರು. ಇದಾದ ನಂತರ ಮಲ್ಪುರ ರೆಸಿಪಿ, ಗಾರ್ಲಿಕ್ ಬ್ರೆಡ್ ರೆಸಿಪಿ, ಚಾಕೊಲೇಟ್ ಚಿಪ್ ಕುಕೀಸ್ ರೆಸಿಪಿ, ತವಾ ಕಾಲೇಜಿ ರೆಸಿಪಿ ಅಂತಲೂ ಸಾಕಷ್ಟು ಹುಡುಕಾಡಿದೆ. ಗಮನಿಸಬೇಕಾದ ಅಂಶವೆಂದರೆ ಈ ಪೈಕಿ ತವಾ ಕಾಲೇಜಿ ಮಾತ್ರ ನಾನ್ ವೆಜ್ ರೆಸಿಪಿ.

ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಭಾರತ-ಪಾಕಿಸ್ತಾನ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೆ ಪಾಕಿಸ್ತಾನದ ಜನರಲ್ಲಿ ಭಾರೀ ಕ್ರೇಜ್ ಇತ್ತು. ಗೂಗಲ್ ಸರ್ಚ್‌ನ ಕ್ರಿಕೆಟ್ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಐದನೇ ಸ್ಥಾನದಲ್ಲಿತ್ತು. ಅದೇ ಸಮಯದಲ್ಲಿ ಟಿ-20 ವಿಶ್ವಕಪ್ ಮೊದಲ ಸ್ಥಾನದಲ್ಲಿತ್ತು. ಇದಲ್ಲದೇ ಪಾಕಿಸ್ತಾನ vs ಇಂಗ್ಲೆಂಡ್, ಪಾಕಿಸ್ತಾನ vs ಬಾಂಗ್ಲಾದೇಶ, ಪಾಕಿಸ್ತಾನ vs ಆಸ್ಟ್ರೇಲಿಯಾ ಅಂತ ಸರ್ಚ್ ಮಾಡಲಾಗಿತ್ತು.

ಕ್ರಿಕೆಟ್

1. ಟಿ20 ವಿಶ್ವಕಪ್

2. ಪಾಕಿಸ್ತಾನ vs ಇಂಗ್ಲೆಂಡ್

3. ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ

4. ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ

5. ಪಾಕಿಸ್ತಾನ ವಿರುದ್ಧ ಭಾರತ

6. ಪಿಎಸ್​ಎಲ್​ 2024 ವೇಳಾಪಟ್ಟಿ

7. ಪಾಕಿಸ್ತಾನ vs ಯುಎಸ್​ಎ

8. ಭಾರತ vs ಇಂಗ್ಲೆಂಡ್

9. ಭಾರತ vs ದಕ್ಷಿಣ ಆಫ್ರಿಕಾ

10. ಭಾರತ vs ಇಂಗ್ಲೆಂಡ್

ಸರ್ಚ್​ ಮಾಡಿರುವ ವ್ಯಕ್ತಿಗಳು ಹೆಸರು

1. ಅಬ್ಬಾಸ್ ಅತ್ತಾರ್

2. ಅಟೆಲ್ ಅದ್ನಾನ್

3. ಅರ್ಷದ್ ನದೀಮ್

4. ಸನಾ ಜಾವೇದ್

5. ಸಾಜಿದ್ ಖಾನ್

6. ಶೋಯೆಬ್ ಮಲಿಕ್

7. ಹರೀಮ್ ಶಾ

8. ಮಿನಾಹಿಲ್ ಮಲಿಕ್

9. ಜೋಯಾ ನಾಸಿರ್

10. ಮುಕೇಶ್ ಅಂಬಾನಿ

ಚಲನಚಿತ್ರಗಳು, ವೆಬ್​ ಸೀರೀಸ್

ಹಿರಾಮಂಡಿ 12th ಫೇಲ್ ಅನಿಮಲ್ ಮಿರ್ಜಾಪುರ ಸೀಸನ್ 3 ಸ್ತ್ರೀ 2 ಇಷ್ಕ್ ಮುರ್ಷಿದ್ ಭೂಲ್ ಭುಲೈಯಾ 3 ಬಿಗ್ ಬಾಸ್ 17

ಹೌ ಟು

1. ಮತದಾನ ಕೇಂದ್ರವನ್ನು ಹೇಗೆ ಪರಿಶೀಲಿಸುವುದು

2. ಅಜ್ಜಿ ಸಾಯುವ ಮೊದಲು ಲಕ್ಷ ಗಳಿಸುವುದು ಹೇಗೆ?

3. ಬಳಸಿದ ಕಾರನ್ನು ಹೇಗೆ ಖರೀದಿಸುವುದು

4. ಹೂವುಗಳು ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ?

5. YouTube ವೀಡಿಯೊಗಳನ್ನು PC ಗೆ ಡೌನ್‌ಲೋಡ್ ಮಾಡುವುದು ಹೇಗೆ

6. ಹೂಡಿಕೆ ಇಲ್ಲದೆ ಗಳಿಸುವುದು ಹೇಗೆ? ವಿಶ್ವಕಪ್ ಅನ್ನು ಲೈವ್ ಆಗಿ ವೀಕ್ಷಿಸುವುದು ಹೇಗೆ

ಪಾಕವಿಧಾನ ಬನಾನಾ ಬ್ರೆಡ್ ರೆಸಿಪಿ ಮಾಲ್ಪುರ ರೆಸಿಪಿ ಗಾರ್ಲಿಕ್ ಬ್ರೆಡ್ ರೆಸಿಪಿ ಚಾಕೊಲೇಟ್ ಚಿಪ್ ಕುಕಿ ರೆಸಿಪಿ ತವಾ ಕಾಲೇಜಿ ರೆಸಿಪಿ ಪೀಚ್ ಐಸ್ಡ್ ಟೀ ರೆಸಿಪಿ ಪಾಸ್ತಾ ರೆಸಿಪಿ ಪಿಜ್ಜಾ ರೆಸಿಪಿ ಎಗ್ ನೂಡಲ್ ರೆಸಿಪಿ

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?