AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾದ ಬುದ್ಧಿಯುಳ್ಳ ಮನುಷ್ಯನಿಗೆ ಸಾಮಾನ್ಯ ಜ್ಞಾನದ್ದೇ ಕೊರತೆ..!

ಭಗವಂತನು ಎಲ್ಲಾ ವಸ್ತುಗಳನ್ನು ಒಂದು ಸಂಕಲ್ಪ ಮತ್ತು ಸ್ವಭಾವವನ್ನು ಅರಿತೆ ಸೃಷ್ಟಿಸುವನು. ಹಾಗೆಯೇ ಮನುಷ್ಯನನ್ನೂ ಕೂಡ. ಕರ್ಮಫಲವರಿತೇ ಮನುಷ್ಯನ ಸೃಷ್ಟಿಯಾಗುವಂತದ್ದು.

ಅತಿಯಾದ ಬುದ್ಧಿಯುಳ್ಳ ಮನುಷ್ಯನಿಗೆ ಸಾಮಾನ್ಯ ಜ್ಞಾನದ್ದೇ ಕೊರತೆ..!
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 30, 2023 | 7:00 AM

ಸೃಷ್ಟಿಕರ್ತನಿಗೆ ಗೊತ್ತಿಲ್ಲದ್ದು ಏನಿದೆ? ಭಗವಂತನು (God) ನಮ್ಮನ್ನೆಲ್ಲ ಸೃಷ್ಟಿಸಿದ್ದಂತೂ ನಿಜ ತಾನೇ? ಹಾಗಾದರೆ ಸೃಷ್ಟಿಸಿದ ಕಾರಣವಾದರೂ ಏನು, ಗೊತ್ತಿದೆಯಾ ನಮಗೆ? ಈ ಸೃಷ್ಟಿಯಲ್ಲಿ ನಾವು ಅನೇಕ ದೋಷಗಳನ್ನು ಕಾಣುತ್ತೇವೆ ಅಲ್ಲವೇ? ಆತನು ಇಷ್ಟಾರು ರೂಪ, ಅವತಾರ ಧರ್ಮಗಳನ್ನೆಲ್ಲ ಅನಾವರಣ ಮಾಡಿಕೊಂಡು, ಆತ ಏಕೆ ಅವನ ಇಚ್ಛೆ ನಮಗೆ ಅರಿವೇ ಆಗದಂತೆ ಮಾಡಿಕೊಳ್ಳಬೇಕು? ಅವನ ಇಚ್ಛೆಯು ನಮಗೆ ತಿಳಿಯುವಂತಿದ್ದರೆ ನಮ್ಮ ಎಲ್ಲರ ಜೀವನ ಇಷ್ಟಾರು ಬಗೆಯಲ್ಲಿ ಹದಗೆಡುತ್ತಿರಲಿಲ್ಲವೇನೋ ಅನ್ನಿಸಯತ್ತದೆ ಆಲೋಚಿಸಿದಾಗ. ಅವನ ಆಜ್ಞೆ ಮತ್ತು ಇಷ್ಟಾನಿಷ್ಟಗಳು ಅರ್ಥವಾಗದೇ ಜನರು ದಾರಿ ತಪ್ಪಿ ನಡೆಯುವಂತೆ ಆಗುತ್ತಿರಲಿಲ್ಲ ಅಲ್ಲವೇ!

ಒಂದು ಹಲಸಿನ ಹಣ್ಣನ್ನೇ ತೆಗೆದುಕೊಳ್ಳೋಣ. ಆ ಸಿಹಿಯಾದ ಹಲಸಿನ ತೊಳೆ ಸುಲಭಕ್ಕೆ ನಮಗೆ ಸಿಗುವುದೇ! ಅದರ ಮೇಲಿರುವ ಮುಳ್ಳಿನ ಪದರವನ್ನು ಮೊದಲು ತೆಗೆಯಬೇಕು. ಅದರೊಳಗೆ ಬೀಜವಿರುತ್ತಸೆ. ಅದನ್ನು ತೆಗೆಯಬೇಕು. ಮಧ್ಯ ಅಂಟು ಬೇರೆ. ಅನಂತರ ಸಿಹಿಯಾದ ಹಣ್ಣು ನಮ್ಮ ಕೈಗೆ ಸಿಗುವಂತದ್ದು ಮತ್ತು ಅದರ ಸ್ವಾದವು ನಮಗೆ ಗೊತ್ತಾಗುವಂಥದ್ದು. ಹಾಗೆ ಅದೇ ಮುಳ್ಳು ಅಂಟುಗಳಿರದೆ ಹಲಸಿನ ಹಣ್ಣು ಕೈಗೆಟಕುವಂತೆ ಸೃಷ್ಟಿಸಿದ್ದರೆ ಎಷ್ಟು ಅನುಕೂಲ ಎಂದು ನಾವು ಅಂದುಕೊಳ್ಳುವುದೂ ನಿಜವೇ. ಮುಳ್ಳೇ ಇಲ್ಲದೆ ತೊಳೇ ಬಿಡುವುದಾದರೆ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಅದನ್ನು ಬಿಟ್ಟಾವಾ!

ಇದನ್ನೂ ಓದಿ: Chanakya Niti: ಸದೃಢ ಆರೋಗ್ಯಕ್ಕಾಗಿ ಚಾಣಕ್ಯ ಹೇಳಿರುವ ಈ ಮಾತುಗಳನ್ನು ಅನುಸರಿಸಿ ಸಾಕು, ಎಂದಿಗೂ ಅನಾರೋಗ್ಯ ನಿಮ್ಮನ್ನು ಕಾಡದು

ಭಗವಂತನು ಎಲ್ಲಾ ವಸ್ತುಗಳನ್ನು ಒಂದು ಸಂಕಲ್ಪ ಮತ್ತು ಸ್ವಭಾವವನ್ನು ಅರಿತೆ ಸೃಷ್ಟಿಸುವನು. ಹಾಗೆಯೇ ಮನುಷ್ಯನನ್ನೂ ಕೂಡ. ಕರ್ಮಫಲವರಿತೇ ಮನುಷ್ಯನ ಸೃಷ್ಟಿಯಾಗುವಂತದ್ದು.

ಸೃಷ್ಟಿಕರ್ತನು ಎಲ್ಲಾ ವಸ್ತುಗಳನ್ನು ನಿರ್ದಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಿರುತ್ತಾನೆ. ಅವನು ಅದರ ಪ್ರತಿಯೊಂದನ್ನೂ ಖುದ್ದಾಗಿ ಬಂದು ನಿರ್ವಹಿಸುವುದಿಲ್ಲ ಅಥವಾ ಇದು ಹೀಗೆ ಆಗಬೇಕೆಂದು ನ್ಯಾಯಾಲಯದಲ್ಲಿ ತೀರ್ಪು ನೀಡಿದ ಹಾಗೆ ನೀಡುವುದೂ ಇಲ್ಲ. ಎಲ್ಲವೂ ಕರ್ಮದ ನಿಯಮದಂತೆ ನಡೆಯುವುದು.

ಇದನ್ನೂ ಓದಿ: ದೀಪಾರಾಧನೆ ಸಲಹೆಗಳು: ದೇವರ ಮುಂದೆ ದೀಪವನ್ನು ಹಚ್ಚುವಾಗ ಪಾಲಿಸಿಬೇಕಾದ ಕೆಲವು ನಿಯಮಗಳು ಇಲ್ಲಿವೆ

ಮಾನವನ ಒಳಿತಿಗಾಗಿ ಭಗವಂತನು ಬೇರೆ ಬೇರೆ ದೇವತೆಗಳನ್ನು ಸೃಷ್ಟಿಸಿದ್ದಾನೆ. ವಿದ್ಯೆಗೆ ಸರಸ್ವತಿ, ಮಳೆಗೆ ವರುಣ, ಬೆಂಕಿಗೆ ಅಗ್ನಿ, ಗಾಳಿಗೆ ವಾಯು. ಹೀಗೆ ಆ ಪರಮಾತ್ಮನ ಸೃಷ್ಟಿ ಹೇಗೆಂದರೆ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುತ್ತಾನೆ. ಅದರಿಂದ ಮನುಷ್ಯ ಸುಖ ಜೀವನ ನಡೆಸಲು ಸಾಧ್ಯವಾಗಿದೆ. ಹಾಗೆಯೇ ಮನುಷ್ಯನ ಆಸೆಗೆ ಮಿತಿಯೆಲ್ಲಿದೆ ಹೇಳಿ? ಈ ಪ್ರಕೃತಿಯನ್ನು ಎಷ್ಟು ಹಾಳು ಮಾಡಿಲ್ಲ ಆತ? ನಮ್ಮ ಈ ಕೆಟ್ಟ ಕ್ರಿಯೆಗೆ ಕೆಟ್ಟ ಪ್ರತಿಫಲವನ್ನು ಹಾಗೆಯೇ ಒಳ್ಳೆಯ ಕ್ರಿಯೆಗೆ ಉತ್ತಮ ಪ್ರತಿಫಲವನ್ನು ಸೃಷ್ಟಿಕರ್ತನೇ ದಾಖಲಿಸಿರುತ್ತಾನೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಸೃಷ್ಟಿಯ ನಿಯಮ ಹೇಗಿದೆ ಎಂದರೆ ನಾವು ಹುಟ್ಟುತ್ತೇವೆ ಮತ್ತು ಸಾಯುತ್ತೇವೆ. ಹಾಗೆ ನಮ್ಮ ಕರ್ಮ ಕೂಡ ಮುಗಿಯುತ್ತದೆ ಎಂದರ್ಥವಲ್ಲ. ಈ ಜನ್ಮ ಅಷ್ಟೇ ಅಲ್ಲ ಹಲವು ಜನ್ಮಗಳ ಕರ್ಮದ ಪ್ರತಿಫಲವಾಗಿ ನಾವು ಮತ್ತೆ ಜನ್ಮ ತಾಳುವುದು. ನಮ್ಮ ಕೆಟ್ಟ ಕರ್ಮಗಳು ಹೋಗುವುದೇ ನಮ್ಮ ಒಳ್ಳೆಯ ಕೆಲಸದಿಂದ. ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇದ್ದೇ ಇದೆ ಎಂಬ ಸಾಮಾನ್ಯಜ್ಞಾನವನ್ನೂ ನಾವು ಹೊಂದಿಲ್ಲವೇ?

ಲೋಹಿತಶರ್ಮಾ

5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ