AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ

Friendship Day : ಆಟ ಪಾಠಗಳ ಜೊತೆಗೆ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ಸಮಸ್ಯೆ ಬಂತೆಂದರೆ ಸಾಕು ಅದನ್ನ ಎದುರಿಸಲು ಬೆನ್ನು ತಟ್ಟಿ ಶಕ್ತಿ ತುಂಬುವ ಆ ಸ್ನೇಹಿತರಿಗೆ ಕೋಟಿ ವಂದನೆಗಳು.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ
ಸ್ನೇಹ ಬಳಗ
TV9 Web
| Edited By: |

Updated on: Aug 07, 2022 | 9:43 AM

Share

ಗೆಳೆತನ ಎಂಬುದು ಕೇವಲ ಒಂದು ಪದವಲ್ಲ, ಈ ಸ್ನೇಹ ಜೀವನದಲ್ಲಿ ಅದ್ಭುತ ಭಾವನೆಗಳನ್ನು ಹೊಂದಿರುವ ಜಗತ್ತು. ಅಲ್ಲಿರುವುದು ನಿಷ್ಕಲ್ಮಶ ಸ್ನೇಹ. ಅಂದು ಪದವಿ ಕಾಲೇಜಿನ ಮೊದಲ ದಿನ. ನನ್ನಿಬ್ಬರು ಸ್ನೇಹಿತೆಯರೊಂದಿಗೆ ನಾನು ಕಾಲೇಜಿಗೆ ಮೊದಲ ಹೆಜ್ಜೆ ಇರಿಸಿದೆ. ನನಗೆ ನನ್ನ ಕಾಲೇಜಿನ ಪರಿಚಯ ಚೆನ್ನಾಗಿಯೇ ಇತ್ತು. ಕಾರಣ ನಾನು ಪಿಯುಸಿ ಮುಗಿಸಿದ್ದು ಅದೇ ಕಾಲೇಜಿನಲ್ಲಿ. ಆದರೆ ಪದವಿ ಅಂದರೆ ಅದೊಂದು ಬೇರೆಯದ್ದೇ ಪ್ರಪಂಚ. ಎಲ್ಲವೂ ಹೊಸತು. ಆ ನನ್ನ ಸುಂದರ ಪ್ರಪಂಚಕ್ಕೆ ಕಾಲಿಟ್ಟವರು ನನ್ನೆಲ್ಲ ಸ್ನೇಹಿತರು.

ಆಟ ಪಾಠಗಳ ಜೊತೆಗೆ ನನ್ನ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ನನ್ನೆಲ್ಲಾ ಸಮಸ್ಯೆಗಳನ್ನು ಎದುರಿಸಲು ಬೆನ್ನು ತಟ್ಟುವ ನಲ್ಮೆಯ ಸ್ನೇಹಿತರಿವರು. ನಾನು ಜೀವನದಲ್ಲಿ ಅತೀ ಹೆಚ್ಚು ಬೆರೆಯುವ ಜನರಿವರು. ಇವರ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದು.

ಎಲ್ಲಿಂದಲೋ ಬಂದ ನಾವೆಲ್ಲರೂ ಒಂದೇ ಕುಟುಂಬದವರಾದೆವು. ಒಟ್ಟಿಗೆ ಕುಳಿತು ಊಟ ಮಾಡಿದೆವು. ಪಟ್ಟಾಂಗ ಹಾಕಿದೆವು. ತಮಾಷೆ, ನಗು, ಕಿರುಚಾಟ ಇವೆಲ್ಲದರ ನಡುವೆ ಕೆಲವೊಂದು ವಿಷಯದಲ್ಲಿ ಜಗಳವೂ ಮಾಡಿಕೊಂಡೆವು. ನಮ್ಮೀ ಪದವಿಯ ಮೂರು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ನೆನಪುಗಳು ಇವೆ. ಕಹಿಗಿಂತ ಹೆಚ್ಚು ಸಿಹಿ ನೆನಪುಗಳೇ ಹೇರಳವಾಗಿವೆ. ನಮ್ಮಲ್ಲಿ ಒಂದಷ್ಟು ಮರೆಯಲಾಗದಷ್ಟು ವಿಷಯಗಳು ಇವೆ. ಆದರೆ ಇನ್ನು ಅವೆಲ್ಲವೂ ಬರೀ ನೆನಪುಗಳು ಮಾತ್ರ. ಯಾಕೆಂದರೆ ನಮ್ಮ ಕಾಲೇಜು ಜೀವನ ಉಳಿದಿರುವುದು ಕೇವಲ 15 ದಿನಗಳಷ್ಟೇ.

ನಮ್ಮ ಸ್ನೇಹ ಜೀವನ ಇಷ್ಟಕ್ಕೆ ಕೊನೆಯಾಗದು, ಕಾಲೇಜು ಜೀವನದ ಹೊರತಾಗಿಯೂ ನಮ್ಮ ಗೆಳೆತನ ಮುಂದುವರೆಯಲಿದೆ. ನಮ್ಮ ಈ ಸ್ನೇಹದ ಕೊಂಡಿ ಎಂದೆಂದಿಗೂ ಕಳಚದಿರಲಿ ಎಂದು ದೇವರಲ್ಲಿ ಸದಾ ಬೇಡಿಕೊಳ್ಳುತ್ತೇನೆ. ಐ ಮಿಸ್ ಯೂ ಆಲ್…!!

ಲೇಖನ: ತನುಶ್ರೀ, ಬೆಳ್ಳಾರೆ

Follow Us
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!