AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ

Friendship Day : ಆಟ ಪಾಠಗಳ ಜೊತೆಗೆ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ಸಮಸ್ಯೆ ಬಂತೆಂದರೆ ಸಾಕು ಅದನ್ನ ಎದುರಿಸಲು ಬೆನ್ನು ತಟ್ಟಿ ಶಕ್ತಿ ತುಂಬುವ ಆ ಸ್ನೇಹಿತರಿಗೆ ಕೋಟಿ ವಂದನೆಗಳು.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ
ಸ್ನೇಹ ಬಳಗ
TV9 Web
| Edited By: |

Updated on: Aug 07, 2022 | 9:43 AM

Share

ಗೆಳೆತನ ಎಂಬುದು ಕೇವಲ ಒಂದು ಪದವಲ್ಲ, ಈ ಸ್ನೇಹ ಜೀವನದಲ್ಲಿ ಅದ್ಭುತ ಭಾವನೆಗಳನ್ನು ಹೊಂದಿರುವ ಜಗತ್ತು. ಅಲ್ಲಿರುವುದು ನಿಷ್ಕಲ್ಮಶ ಸ್ನೇಹ. ಅಂದು ಪದವಿ ಕಾಲೇಜಿನ ಮೊದಲ ದಿನ. ನನ್ನಿಬ್ಬರು ಸ್ನೇಹಿತೆಯರೊಂದಿಗೆ ನಾನು ಕಾಲೇಜಿಗೆ ಮೊದಲ ಹೆಜ್ಜೆ ಇರಿಸಿದೆ. ನನಗೆ ನನ್ನ ಕಾಲೇಜಿನ ಪರಿಚಯ ಚೆನ್ನಾಗಿಯೇ ಇತ್ತು. ಕಾರಣ ನಾನು ಪಿಯುಸಿ ಮುಗಿಸಿದ್ದು ಅದೇ ಕಾಲೇಜಿನಲ್ಲಿ. ಆದರೆ ಪದವಿ ಅಂದರೆ ಅದೊಂದು ಬೇರೆಯದ್ದೇ ಪ್ರಪಂಚ. ಎಲ್ಲವೂ ಹೊಸತು. ಆ ನನ್ನ ಸುಂದರ ಪ್ರಪಂಚಕ್ಕೆ ಕಾಲಿಟ್ಟವರು ನನ್ನೆಲ್ಲ ಸ್ನೇಹಿತರು.

ಆಟ ಪಾಠಗಳ ಜೊತೆಗೆ ನನ್ನ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ನನ್ನೆಲ್ಲಾ ಸಮಸ್ಯೆಗಳನ್ನು ಎದುರಿಸಲು ಬೆನ್ನು ತಟ್ಟುವ ನಲ್ಮೆಯ ಸ್ನೇಹಿತರಿವರು. ನಾನು ಜೀವನದಲ್ಲಿ ಅತೀ ಹೆಚ್ಚು ಬೆರೆಯುವ ಜನರಿವರು. ಇವರ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದು.

ಎಲ್ಲಿಂದಲೋ ಬಂದ ನಾವೆಲ್ಲರೂ ಒಂದೇ ಕುಟುಂಬದವರಾದೆವು. ಒಟ್ಟಿಗೆ ಕುಳಿತು ಊಟ ಮಾಡಿದೆವು. ಪಟ್ಟಾಂಗ ಹಾಕಿದೆವು. ತಮಾಷೆ, ನಗು, ಕಿರುಚಾಟ ಇವೆಲ್ಲದರ ನಡುವೆ ಕೆಲವೊಂದು ವಿಷಯದಲ್ಲಿ ಜಗಳವೂ ಮಾಡಿಕೊಂಡೆವು. ನಮ್ಮೀ ಪದವಿಯ ಮೂರು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ನೆನಪುಗಳು ಇವೆ. ಕಹಿಗಿಂತ ಹೆಚ್ಚು ಸಿಹಿ ನೆನಪುಗಳೇ ಹೇರಳವಾಗಿವೆ. ನಮ್ಮಲ್ಲಿ ಒಂದಷ್ಟು ಮರೆಯಲಾಗದಷ್ಟು ವಿಷಯಗಳು ಇವೆ. ಆದರೆ ಇನ್ನು ಅವೆಲ್ಲವೂ ಬರೀ ನೆನಪುಗಳು ಮಾತ್ರ. ಯಾಕೆಂದರೆ ನಮ್ಮ ಕಾಲೇಜು ಜೀವನ ಉಳಿದಿರುವುದು ಕೇವಲ 15 ದಿನಗಳಷ್ಟೇ.

ನಮ್ಮ ಸ್ನೇಹ ಜೀವನ ಇಷ್ಟಕ್ಕೆ ಕೊನೆಯಾಗದು, ಕಾಲೇಜು ಜೀವನದ ಹೊರತಾಗಿಯೂ ನಮ್ಮ ಗೆಳೆತನ ಮುಂದುವರೆಯಲಿದೆ. ನಮ್ಮ ಈ ಸ್ನೇಹದ ಕೊಂಡಿ ಎಂದೆಂದಿಗೂ ಕಳಚದಿರಲಿ ಎಂದು ದೇವರಲ್ಲಿ ಸದಾ ಬೇಡಿಕೊಳ್ಳುತ್ತೇನೆ. ಐ ಮಿಸ್ ಯೂ ಆಲ್…!!

ಲೇಖನ: ತನುಶ್ರೀ, ಬೆಳ್ಳಾರೆ

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​