AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ

Friendship Day : ಆಟ ಪಾಠಗಳ ಜೊತೆಗೆ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ಸಮಸ್ಯೆ ಬಂತೆಂದರೆ ಸಾಕು ಅದನ್ನ ಎದುರಿಸಲು ಬೆನ್ನು ತಟ್ಟಿ ಶಕ್ತಿ ತುಂಬುವ ಆ ಸ್ನೇಹಿತರಿಗೆ ಕೋಟಿ ವಂದನೆಗಳು.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ
ಸ್ನೇಹ ಬಳಗ
TV9 Web
| Edited By: |

Updated on: Aug 07, 2022 | 9:43 AM

Share

ಗೆಳೆತನ ಎಂಬುದು ಕೇವಲ ಒಂದು ಪದವಲ್ಲ, ಈ ಸ್ನೇಹ ಜೀವನದಲ್ಲಿ ಅದ್ಭುತ ಭಾವನೆಗಳನ್ನು ಹೊಂದಿರುವ ಜಗತ್ತು. ಅಲ್ಲಿರುವುದು ನಿಷ್ಕಲ್ಮಶ ಸ್ನೇಹ. ಅಂದು ಪದವಿ ಕಾಲೇಜಿನ ಮೊದಲ ದಿನ. ನನ್ನಿಬ್ಬರು ಸ್ನೇಹಿತೆಯರೊಂದಿಗೆ ನಾನು ಕಾಲೇಜಿಗೆ ಮೊದಲ ಹೆಜ್ಜೆ ಇರಿಸಿದೆ. ನನಗೆ ನನ್ನ ಕಾಲೇಜಿನ ಪರಿಚಯ ಚೆನ್ನಾಗಿಯೇ ಇತ್ತು. ಕಾರಣ ನಾನು ಪಿಯುಸಿ ಮುಗಿಸಿದ್ದು ಅದೇ ಕಾಲೇಜಿನಲ್ಲಿ. ಆದರೆ ಪದವಿ ಅಂದರೆ ಅದೊಂದು ಬೇರೆಯದ್ದೇ ಪ್ರಪಂಚ. ಎಲ್ಲವೂ ಹೊಸತು. ಆ ನನ್ನ ಸುಂದರ ಪ್ರಪಂಚಕ್ಕೆ ಕಾಲಿಟ್ಟವರು ನನ್ನೆಲ್ಲ ಸ್ನೇಹಿತರು.

ಆಟ ಪಾಠಗಳ ಜೊತೆಗೆ ನನ್ನ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ನನ್ನೆಲ್ಲಾ ಸಮಸ್ಯೆಗಳನ್ನು ಎದುರಿಸಲು ಬೆನ್ನು ತಟ್ಟುವ ನಲ್ಮೆಯ ಸ್ನೇಹಿತರಿವರು. ನಾನು ಜೀವನದಲ್ಲಿ ಅತೀ ಹೆಚ್ಚು ಬೆರೆಯುವ ಜನರಿವರು. ಇವರ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದು.

ಎಲ್ಲಿಂದಲೋ ಬಂದ ನಾವೆಲ್ಲರೂ ಒಂದೇ ಕುಟುಂಬದವರಾದೆವು. ಒಟ್ಟಿಗೆ ಕುಳಿತು ಊಟ ಮಾಡಿದೆವು. ಪಟ್ಟಾಂಗ ಹಾಕಿದೆವು. ತಮಾಷೆ, ನಗು, ಕಿರುಚಾಟ ಇವೆಲ್ಲದರ ನಡುವೆ ಕೆಲವೊಂದು ವಿಷಯದಲ್ಲಿ ಜಗಳವೂ ಮಾಡಿಕೊಂಡೆವು. ನಮ್ಮೀ ಪದವಿಯ ಮೂರು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ನೆನಪುಗಳು ಇವೆ. ಕಹಿಗಿಂತ ಹೆಚ್ಚು ಸಿಹಿ ನೆನಪುಗಳೇ ಹೇರಳವಾಗಿವೆ. ನಮ್ಮಲ್ಲಿ ಒಂದಷ್ಟು ಮರೆಯಲಾಗದಷ್ಟು ವಿಷಯಗಳು ಇವೆ. ಆದರೆ ಇನ್ನು ಅವೆಲ್ಲವೂ ಬರೀ ನೆನಪುಗಳು ಮಾತ್ರ. ಯಾಕೆಂದರೆ ನಮ್ಮ ಕಾಲೇಜು ಜೀವನ ಉಳಿದಿರುವುದು ಕೇವಲ 15 ದಿನಗಳಷ್ಟೇ.

ನಮ್ಮ ಸ್ನೇಹ ಜೀವನ ಇಷ್ಟಕ್ಕೆ ಕೊನೆಯಾಗದು, ಕಾಲೇಜು ಜೀವನದ ಹೊರತಾಗಿಯೂ ನಮ್ಮ ಗೆಳೆತನ ಮುಂದುವರೆಯಲಿದೆ. ನಮ್ಮ ಈ ಸ್ನೇಹದ ಕೊಂಡಿ ಎಂದೆಂದಿಗೂ ಕಳಚದಿರಲಿ ಎಂದು ದೇವರಲ್ಲಿ ಸದಾ ಬೇಡಿಕೊಳ್ಳುತ್ತೇನೆ. ಐ ಮಿಸ್ ಯೂ ಆಲ್…!!

ಲೇಖನ: ತನುಶ್ರೀ, ಬೆಳ್ಳಾರೆ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು