Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Day: ಒಂಚೂರು ತರಲೆ, ತಮಾಷೆ, ಕೀಟಲೆ ಇದ್ದರೇನೆ ಸ್ನೇಹ ಬಳಗಕ್ಕೆ ಒಂದು ಕಳೆ

ಒಂದಷ್ಟು ತರಲೆ, ತಮಾಷೆ, ಕೀಟಲೆ, ಪೀಡಿಸುವುದು ಇತ್ಯಾದಿಗಳಿದ್ದರೆ ಆ ಸ್ನೇಹಿತರ ಗ್ಯಾಂಗ್​ಗೆ ಒಂದು ಕಳೆ ಇದ್ದಂತೆ. ಸುಖ-ದುಃಖ, ನೋವು-ನಲಿವಿನಲ್ಲಿ ಒಟ್ಟಾಗಿರುವ ಸ್ನೇಹ ಬಳಗ ಎಂದೆಂದಿಗೂ ಶಾಶ್ವತವಾಗಿರುತ್ತದೆ. ಇಂತಹ ಸಂಬಂಧಕ್ಕೆ ಸರಿಸಾಟಿ ಯಾವುದಯ್ಯಾ?

Friendship Day: ಒಂಚೂರು ತರಲೆ, ತಮಾಷೆ, ಕೀಟಲೆ ಇದ್ದರೇನೆ ಸ್ನೇಹ ಬಳಗಕ್ಕೆ ಒಂದು ಕಳೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Aug 07, 2022 | 12:20 PM

ಸ್ನೇಹಿತರೆಂದರೆ ಎರಡು ದೇಹ ಒಂದು ಜೀವ ಇದ್ದಂತೆ, ಈ ಮಾತು ಅಕ್ಷರಶಃ ಸತ್ಯ. ಅದೇ ರೀತಿ ಸ್ನೇಹಿತರೆಂಬ ಪದವನ್ನು ಒಂದು ವಾಕ್ಯದಲ್ಲಿ ವರ್ಣನೆ ಮಾಡುವುದು ಅಸಾದ್ಯ. ಕಷ್ಟ ಬಂದಾಗ ಸಹಾಯ ಕೇಳುವ ಮುನ್ನವೇ ಸ್ಪಂದಿಸುವ ಸ್ನೇಹಿಜೀವಿಗಳು. ಜೀವನ ಎಂಬ ದಾರಿಯಲ್ಲಿ ಸಾಕಷ್ಟು ಸ್ನೇಹಿತರು ಸಿಗುತ್ತಾರೆ. ಜಾಲಿ ಡೇಸ್ ಸಿನಿಮಾದ ಹಾಡಿನಲ್ಲಿ ಇರುವಂತೆ ಭೇಟಿಯಾದ ಹೊಸದರಲ್ಲಿ ನೀವು  ಎಂದು ಶುರುವಾಗುವ ಮಾತು ಹಂತಹಂತವಾಗಿ ಬೆಳೆಯುತ್ತಾ ಲೋ ಲೋ ಎನ್ನುವಷ್ಟಮಟ್ಟಿಗೆ ಬೆಳೆದು ಸ್ನೇಹದ ಮರವನ್ನು ಹೆಮ್ಮರವನ್ನಾಗಿಸುತ್ತದೆ. ಇಂತಹ ಸ್ನೇಹ ಬಳಗದಲ್ಲಿರುವ ಎಲ್ಲಾ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು.

ಕಾಲೇಜು ಆರಂಭವಾದ ಸಮಯದಲ್ಲಿ ಮಾತೇ ಆಡದ ವ್ಯಕ್ತಿಗಳು ದಿನಗಳು ಉರುಳುತ್ತಿದ್ದಂತೆ ಪರಪಸ್ಪರ ಮಾತುಕತೆ ಬೆಳೆದು ಅರಿವೇ ಇಲ್ಲದಂತೆ ಸ್ನೇಹದ ನಂಟು ಬೆಸೆದುಕೊಳ್ಳುತ್ತದೆ. ಸ್ನೇಹಿತರ ಮಾತು ಎಂದರೆ ಅದು ನಾನ್​ಸ್ಟಾಪ್, ಗುಂಪಿನಲ್ಲಿ ಒಮ್ಮೆ ಮಾತು ಆರಂಭಿಸದರೆ ಸಾಕು ಅದಕ್ಕೆ ಕೊನೆ ಎಂಬುದು ಇಲ್ಲವೇ ಇಲ್ಲ. ಸ್ವಲ್ಪ ತಮಾಷೆ, ತರಲೆ, ಯಾವುದೋ ಒಂದು ಸಣ್ಣ ವಿಷಯ ಮುಂದಿಟ್ಟುಕೊಂಡು ಸಹಸ್ನೇಹಿತರನ್ನು ಪೀಡಿಸುವುದು, ಕಾಡಿಸುವುದು ಇತ್ಯಾದಿಗಳು ಇಲ್ಲದಿದ್ದರೆ ಸ್ನೇಹ ಬಳಗಕ್ಕೆ ಕಳೆಯೇ ಇರುವುದಿಲ್ಲ.

ಸ್ನೇಹಿತರ ಮೊಬೈಲ್, ಪುಸ್ತಕ ಇತ್ಯಾದಿ ವಸ್ತುಗಳನ್ನು ಬಚ್ಚಿಟ್ಟು ಏನೂ ಮಾಡದಂತೆ ಸುಮ್ಮನೆ ಕುಳಿತುಕೊಂಡು ಅವರು ಹುಡುಕಾಡುವ ಪರಿಯನ್ನು ನೋಡುವ ಮಜಾನೇ ಬಾರೆ. ಇನ್ನು ಪರೀಕ್ಷೆ ಹತ್ತಿರ ಬಂದರೆ ಹೇಳುವುದು ಬೇಡ, ಗುಂಪಿನಲ್ಲಿ ಯಾರಾದರೊಬ್ಬರು ತಮಗಿಂತ ಚೆನ್ನಾಗಿ ಓದುತ್ತಾರೆ, ಅಂಕ ಗಳಿಸುತ್ತಾರೆ ಎಂದರೆ ಸಾಕು ಅವರೇ ಪರೀಕ್ಷಾ ಸಮಯದ ಮೊದಲ ಟಾರ್ಗೆಟ್. ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಲೇ ಲೋ ಹೇಳುತ್ತಾ ಇಂಪಾರ್ಟೆಂಟ್ ಪ್ರಶ್ನೆಗಳು ಹೇಳು ಅಂತ ಸಾಲುಸಾಲು ಮೆಜೆಸ್​ಗಳು. ಏಕೆಂದರೆ ಸ್ನೇಹಿತ ಹೇಳಿದ್ದು ಬಿಟ್ಟು ಬೇರೆ ಬರುವುದಿಲ್ಲ ಎಂಬ ನಂಬಿಕೆ ಒಂದೆಡೆಯಾದರೆ, ನಮಗೂ ಒಂದೇ ರೀತಿಯ ಅಂಕಗಳು ಸಿಗಲಿ ಎಂಬ ಮತ್ತೊಂದು ಉದ್ದೇಶ.

ಒಂದೊಮ್ಮೆ ಶಿಕ್ಷಕರು ಉತ್ತರ ಪತ್ರಿಕೆಯನ್ನು ಕೊಟ್ಟಾಗ ಸ್ನೇಹ ಬಳಗದಲ್ಲಿ ಒಬ್ಬರಿಗೆ ಕಡಿಮೆ, ಮತ್ತೊಬ್ಬರಿಗೆ ಹೆಚ್ಚು ಅಂಕ ಬಂದರೆ ಕಡಿಮೆ ಅಂಕ ಬಂದವನಿಗೆ ಉರಿಯೋ ಉರಿ. ಓದಿದ್ದು ಒಂದೇ ರೀತಿ, ಅದನ್ನೇ ಪರೀಕ್ಷೆಯಲ್ಲಿ ಬರೆದಿದ್ದು, ಆದರೆ ಅವನಿಗೆ ಅಥವಾ ಅವಳಿಗೆ ಹೇಗೆ ಹೆಚ್ಚು ಅಂಕ ಬಂತು ಎಂದು ಪ್ರಶ್ನಾರ್ಥಕ ಹುಳಗಳು ತಲೆಯಲ್ಲಿ ಓಡಾಡಲು ಪ್ರಾರಂಭವಾಗುತ್ತವೆ.

ಸ್ನೇಹದ ಗ್ಯಾಂಗ್ ಹೇಗಿರಬೇಕು ಅಂದರೆ ಒಬ್ಬ ಗೆಳೆಯ ತರಗತಿಗೆ ಬರದಿದ್ದರೆ ಯಾಕೆ ಬಂದಿಲ್ಲ? ಆರೋಗ್ಯ ಸರಿ ಇಲ್ವಾ ಎಂದು ಕೇಳುವವರು ಇರಬೇಕು. ಇನ್ನೂ ಕೆಲವು ಸ್ನೇಹ ಬಳಗ ಹೇಗೆ ಇರುತ್ತದೆ ಎಂದರೆ, ಸ್ನೇಹಿತನೊಬ್ಬ ತರಗತಿಗೆ ಬಂಕ್ ಮಾಡುತ್ತಾನೆ ಎಂದು ಗೊತ್ತಾದರೆ ಸಾಕು ಉಳಿದವರು ಕೂಡ ಅಂದು ಕಾಲೇಜಿಗೆ ರಜೆ. ಮರುದಿನ ಶಿಕ್ಷಕರು ಕೇಳಿದಾಗ ಮತ್ತದೇ ಬಾಲ್ಯದಲ್ಲಿ ಹೇಳುತ್ತಿದ್ದ ಹೊಟ್ಟೆ ನೋವು, ಕಾಲು ನೋವು, ತಲೆ ನೋವು, ಮೈಕೈನೋವು, ಜ್ವರ ಇತ್ಯಾದಿ ಕಾರಣಗಳನ್ನು ಮುಂದಿಡುತ್ತಾರೆ.

ಜೀವನದಲ್ಲಿ ಮರೆಯಲಾಗದಂತಹ ಇಂತಹ ಅನೇಕ ನೆನಪುಗಳು ಮನಸಿನಲ್ಲಿ ಆಳವಾಗಿ ಬೇರೂರಿಬಿಡುತ್ತವೆ. ಸ್ನೇಹಿತರ ಗುಂಪು ಸಣ್ಣದಿರಲಿ, ದೊಡ್ಡದಿರಲಿ ನಾವೆಲ್ಲರು ಒಂದೇ ಎಂಬ ಮನೋಭಾವ ಸ್ನೇಹಿತರದ್ದು. ಎಲ್ಲಿಂದಲೋ ಬಂದು ಪರಿಚಯಸ್ಥರಾಗಿ ಸ್ನೇಹಿತರು ಎಂಬ ನಾಲ್ಕಕ್ಷರದ ನಂಟಿನಲ್ಲಿ ಸಿಲುಕಿ ಕೊನೆಗೆ ಕುಟುಂಬ ಎಂಬ ಮೂರಕ್ಷರದಲ್ಲಿ ಬಿಗಿಯಾಗುವ ಸಂಬಂಧವೇ ಸ್ನೇಹ.

ಲೇಖನ: ಪ್ರತೀಕ್ಷಾ ಪೈ, ಆಳ್ವಾಸ್ ಕಾಲೇಜು

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ