AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Teachers Day: ಬರಹಕ್ಕೆ ಸ್ಪೂರ್ತಿ ನೀಡಿದ ಗುರುವನ್ನು ಮರೆಯಲು ಸಾಧ್ಯವೇ

ಡಿಗ್ರಿ ಲೈಫ್ ಅದೊಂಥರಾ ಮೋಜು ಮಸ್ತಿ ಸ್ವಲ್ಪ ಕುಸ್ತಿ ನಗುವೇ ಜಾಸ್ತಿ. ಕ್ಯಾಪಸ್​ನಲ್ಲಿ ಸುತ್ತಾಟ ಅಲೆದಾಟ ಕ್ಲಾಸ್ ಗೆ ಹೋಗದೆ ಕೆಲವೊಮ್ಮೆ ಹುಡುಗಾಟ ಹೀಗೆ ಡಿಗ್ರಿ ಕಾಲೇಜಿನಲ್ಲಿ ನಾ ಕಳೆದ ಅಂದಿನ ದಿನಗಳು ಇಂದು ನೆನಪಾಗುತ್ತದೆ.

Happy Teachers Day: ಬರಹಕ್ಕೆ ಸ್ಪೂರ್ತಿ ನೀಡಿದ ಗುರುವನ್ನು ಮರೆಯಲು ಸಾಧ್ಯವೇ
Happy Teachers Day
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 05, 2022 | 5:12 PM

Share

ಗುರುವು ಬಾಳಿಗೆ ಕನ್ನಡಿ ಹಿಡಿದು ಶಿಕ್ಷಣವೆಂಬ ಮಂತ್ರವನ್ನು ಭೋಧಿಸಿ ನಮ್ಮೆಲ್ಲರನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡು ಹೋಗುವ ದಾರಿ ದೀಪ. ಜ್ಞಾನವೆಂಬ ಜ್ಯೋತಿ ಮನದೊಳಗೆ ಹಚ್ಚಿ ಅದು ಆರದಂತೆ ಸದಾ ಜೋಪಾನ ಮಾಡುವ ಜೀವ ಗುರು. ಇಂಥಹಾ! ಗುರುವಿನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಮನೆಯು ಮೊದಲ ಪಾಠಶಾಲೆಯಾದರೆ ತಾಯಿ ಮೊದಲ ಗುರು. ಆದರೆ ಬದುಕಿನ ತಿರುವಿಗೆ ಮುಖ್ಯ ಕಾರಣವಾಗುವ ಇನ್ನೊಂದು ಶಕ್ತಿ ಯಾವುದಾದರು ಇದ್ದರೆ ಕೇಳಿದರೆ ಅದು ಶಿಕ್ಷಕರು. ನಾನು ಅಂಗನವಾಡಿಯಿಂದ ಡಿಗ್ರಿ ಕಾಲೇಜಿನವರೆಗೆ ಅನೇಕ ಶಿಕ್ಷಕರನ್ನು ಕಣ್ತುಂಬಿಕೊಂಡಿದ್ದೇನೆ. ಅದರಲ್ಲೂ ಪ್ರಮುಖವಾಗಿ ನಾನು ಈಗ ಬರೆಯುತ್ತಿರುವ ಪದಗಳ ಹಿಂದೆ ಅಡಗಿರುವ ಪ್ರೇರಣೆ ಸದಾ ಪ್ರೋತ್ಸಾಹ ಕೊಡುವ ಆ ನನ್ನ ನೆಚ್ಚಿನ ಗುರುಗಳ ಬಗ್ಗೆ ವಿವರಿಸಲು ಹೆಮ್ಮೆ ಪಡುವೇ .

ಡಿಗ್ರಿ ಲೈಫ್ ಅದೊಂಥರಾ ಮೋಜು ಮಸ್ತಿ ಸ್ವಲ್ಪ ಕುಸ್ತಿ ನಗುವೇ ಜಾಸ್ತಿ. ಕ್ಯಾಪಸ್​ನಲ್ಲಿ ಸುತ್ತಾಟ ಅಲೆದಾಟ ಕ್ಲಾಸ್ ಗೆ ಹೋಗದೆ ಕೆಲವೊಮ್ಮೆ ಹುಡುಗಾಟ ಹೀಗೆ ಡಿಗ್ರಿ ಕಾಲೇಜಿನಲ್ಲಿ ನಾ ಕಳೆದ ಅಂದಿನ ದಿನಗಳು ಇಂದು ನೆನಪಾಗುತ್ತದೆ. ಡಿಗ್ರಿ ಕಾಲೇಜಿನಲ್ಲಿ ಎಲ್ಲಾ ಗುರುಗಳು ಕಂಡರೆ ಅಚ್ಚು ಮೆಚ್ಚು ಆದರೆ ಬಾಳೆಂಬ ಪಯಣಕ್ಕೆ ಹೊಸ ಮೆರುಗನ್ನು ನೀಡಿದ ಕೀರ್ತಿ ನಾನಾಯಿತು ನನ್ನ ಪಾಡಾಯಿತು ಎನ್ನುವ ನನಗೆ ನಿನ್ನೊಳಗೂ ಒಂದು ಪ್ರತಿಭೆಯಿದೆ ಗಿರೀಶ್ ಎಂದು ಬೆನ್ನುತಟ್ಟಿದವರು. ನನ್ನ ಬರವಣಿಗೆ ಕೌಶಲ್ಯವನ್ನು ಅರಿತು ಅಕ್ಷರ ಭಂಡಾರದ ಆಳ ಅಗಲವನ್ನು ತಿಳಿಸಿದವರು ಬದುಕು ಬಂಗಾರ ಮಾಡಿದ ದೇವರು ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರು ಇಲ್ಲಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಗುರು ಸಾರ್.

ನಿಜಕ್ಕೂ ನನಗೆ ಬರವಣಿಗೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ ಕೊರಾನ ಕಾಲದಲ್ಲಿ ಬೋರ್ ಆಗ್ತಿತ್ತು ಅದಕ್ಕೆ ಹಾಗೊಂದು ಹೀಗೊಂದು ಕವನ ಬರೆದು ಸರ್​ಗೆ ಕಳಿಸುತ್ತಿದ್ದೆ. ಇದನ್ನು ಓದಿ ಅವರು ಚೆನ್ನಾಗಿದೆ, ನೀನು ಕವನದ ಜೊತೆ ಲೇಖನ ಬರಿ. ಕಥೆ ಕಾದಂಬರಿ ಹೆಚ್ಚು ಹೆಚ್ಚು ಓದು. ಲೇಖನ ಸತ್ಯಾಂಶಗಳಿಂದ ಕೂಡಿರಬೇಕು. ಎನ್ನುವ ವಚನ ಬಾಳು ಬೆಳಗುವಂತೆ ಮಾಡಿತು. ಒಂದೊಂದೇ ಲೇಖನಗಳನ್ನು ಬರೆಯಲು ಶುರು ಮಾಡಿದೆ.

ಆರಂಭದಲ್ಲಿ ಹಲವಾರು ತಪ್ಪುಗಳಾದವು ಮುಂದೆ ಸರಿಯಾಯ್ತು. ಇದಕ್ಕೆ ಸಾರ್ ನಿಂದ ಅಕ್ಷರ ತಪ್ಪಿಗೆ ಬೈಗುಳ ತಿಂದಿದ್ದೇನೆ ಆದರೆ ಪತ್ರಿಕೆಗಳಲ್ಲಿ ಅಂತರ್ಜಾಲಗಳಲ್ಲಿ ನನ್ನ ಲೇಖನ ಪ್ರಕಟವಾದಾಗ ತುಂಬಾನೇ ಖುಷಿಯಾಗುತ್ತಿತ್ತು. ಅದನ್ನು ಸಾರ್ ಮೊದಲೇ ವಾಟ್ಸಪ್ ಸ್ಟೇಟಸ್ ಹಾಕುತ್ತಿದ್ದರು. ಕಾಲೇಜು ಗೆಳೆಯರು ನನ್ನ ಲೇಖನವನ್ನು ನೋಡಿ ನನ್ನನ್ನು ಕವಿ ಎಂದು ಕರೆಯುತ್ತಿದ್ದರು. ಅಧ್ಯಾಪಕರು ನನ್ನ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಕೆಂಪು ಕೋಟೆ ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಗಿರೀಶ್ ಪಿಎಂ ಎನ್ನುವ ಲೇಖಕನ ಉಗಮಕ್ಕೆ ಗುರು ಪ್ರಸಾದ್ ಸಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾಲೇಜಿನಲ್ಲಿ ಏನಾದರೂ ಹೆಸರು ಮಾಡಿದ್ರೆ ಅದು ನೀವು ಕೊಟ್ಟ ಬರಹದ ದೀಕ್ಷೆ ಸರ್. ನಿಮ್ಮ ಸೇವೆಯನ್ನು ಅನುದಿನವು ಈ ಮನ ನೆನೆಯುತ್ತದೆ ಮಿಸ್ ಯು ಸಾರ್ .

ಗಿರೀಶ್ ಪಿಎಂ, ತೃತೀಯ ಬಿಎ ಪತ್ರಿಕೋದ್ಯಮ ವಿಭಾಗ

ವಿಶ್ವವಿದ್ಯಾಲಯ ಕಾಲೇಜು ಮಂಗಳೂರು

Published On - 5:12 pm, Mon, 5 September 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!